ಆ್ಯಪ್ನಗರ

ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದೇನೆ: ಬಿ.ಸಿ. ಪಾಟೀಲ

ಹಾವೇರಿ: ನಾನು ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದೇನೆ. ನಾನು ನೀಡಿದ ರಾಜೀನಾಮೆ ಅಂಗೀಕಾರವಾದ ನಂತರ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲ ತಿಳಿಸಿದ್ದಾರೆ.

Vijaya Karnataka 26 Jul 2019, 5:00 am
ಹಾವೇರಿ: ನಾನು ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದೇನೆ. ನಾನು ನೀಡಿದ ರಾಜೀನಾಮೆ ಅಂಗೀಕಾರವಾದ ನಂತರ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲ ತಿಳಿಸಿದ್ದಾರೆ.
Vijaya Karnataka Web i am still in congress b c the bottle
ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದೇನೆ: ಬಿ.ಸಿ. ಪಾಟೀಲ


ಮುಂಬೈನಲ್ಲಿರುವ ಬಿ.ಸಿ. ಪಾಟೀಲ ಗುರುವಾರ 'ವಿಕ' ಜತೆ ಮಾತನಾಡಿ, ''ಇನ್ನೂ ಮೂರ್ನಾಲ್ಕು ದಿನ ಕ್ಷೇತ್ರಕ್ಕೆ ಬರುವುದಿಲ್ಲ. ನಾನು ಎಂದೂ ಕ್ಷೇತ್ರವನ್ನು ಒಂದು ತಿಂಗಳು ಬಿಟ್ಟು ಇದ್ದಿರಲಿಲ್ಲ. ಕ್ಷೇತ್ರದ ಜನರ ಜತೆಗಿನ ನನ್ನ ಅವಿನಾಭಾವ ಸಂಬಂಧ ನಿರಂತರವಾಗಿದೆ. ಕ್ಷೇತ್ರದ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ'' ಎಂದು ಭಾವುಕರಾದರು.

''ಪ್ರಧಾನಿ ಮೋದಿ ಅಲೆಯಲ್ಲೂ ಪಕ್ಷದ ಏಕೈಕ ಶಾಸಕನಾಗಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದು ನನ್ನ ವೈಯಕ್ತಿಕ ವರ್ಚಸ್ಸಿನ ಕಾರಣಕ್ಕೆ. ಸಚಿವ ಸ್ಥಾನ ನೀಡದಿರುವುದು ಜತೆಗೆ ಕ್ಷೇತ್ರದ ಅಭಿವೃದ್ಧಿ ಕುರಿತು ಏನೇ ಕೇಳಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬೇಜಾರು ಎನಿಸಿ ರಾಜೀನಾಮೆ ನೀಡಬೇಕಾಯಿತು'' ಎಂದು ಪಾಟೀಲ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ