ಆ್ಯಪ್ನಗರ

ಮಳೆ ಬಂದರೆ ಚರಂಡಿಯೆಲ್ಲಾ ಬ್ಲಾಕ್‌

ಚಂದ್ರು ಶಿಡೇನೂರ, ಕಾಕೋಳ: ಮಳಿ ಆತಂದ್ರ ಚರಂಡಿಯೆಲ್ಲ ತುಂಬಿ ಕೊಳಕು ನೀರು ಬಾಗ್ಲಾಗ ಬರ್ತೖತ್ರಿ, ಪಂಚಾಯತಿಯರ್‌ಗೆ ಹೇಳಿದ್ರೆ ಇಂದು ನಾಳೆ ಅನ್ಕೊಂತ ಕಾಲ ಹಾಕ್ತಾಯಿದಾರ್ರಿ, ಗಬ್ಬು ನಾತದಿಂದ ಮನೆಯಲ್ಲಿ ಮಕ್ಕಳು ಕಾಯಿಲೆಯಿಂದ ಬಳಲಾಕತ್ತಾರಿ...

Vijaya Karnataka 19 Jul 2019, 5:00 am
ಚಂದ್ರು ಶಿಡೇನೂರ, ಕಾಕೋಳ: ಮಳಿ ಆತಂದ್ರ ಚರಂಡಿಯೆಲ್ಲ ತುಂಬಿ ಕೊಳಕು ನೀರು ಬಾಗ್ಲಾಗ ಬರ್ತೖತ್ರಿ, ಪಂಚಾಯತಿಯರ್‌ಗೆ ಹೇಳಿದ್ರೆ ಇಂದು ನಾಳೆ ಅನ್ಕೊಂತ ಕಾಲ ಹಾಕ್ತಾಯಿದಾರ್ರಿ, ಗಬ್ಬು ನಾತದಿಂದ ಮನೆಯಲ್ಲಿ ಮಕ್ಕಳು ಕಾಯಿಲೆಯಿಂದ ಬಳಲಾಕತ್ತಾರಿ...
Vijaya Karnataka Web HVR-18 KLK 01A


ರಾಣೇಬೆನ್ನೂರ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸ್ಥಿತಿ ಬಗ್ಗೆ ಅಲ್ಲಿನ ಜನರ ಅಳಲು ಇದು. ಗ್ರಾಮದ ಚರಂಡಿಗಳು ದುರಸ್ಥಿಗೆ ಬಂದಿದ್ದರೂ ಪಂಚಾಯತಿಯವರು ಸರಿಪಡಿಸುವಲ್ಲಿ ಮುಂದಾಗಿಲ್ಲ, ಮಳೆ ಬಂದರೆ ಚರಂಡಿ ತುಂಬಿಕೊಂಡು ಮನೆ ಮುಂದೆ ಜಲಾವೃತವಾಗಿ ಬಿಡುತ್ತದೆ. ಗಟಾರಗಳು ಅತೀ ಸಣ್ಣದಾಗಿದ್ದು ಒಂದು ಸಲಕಿಯೂ ಒಳಗೆ ಹೋಗದಷ್ಟಿದ್ದು ಕೆಲವೊಂದು ಕಡೆ ಸ್ವಚ್ಛ ಮಾಡಲು ಬರದಂತಹ ಪರಿಸ್ಥಿತಿ ಇದೆ.

ವಿಷ ಜಂತುಗಳ ಕಾಟ:
ಗ್ರಾಮದಲ್ಲಿ ಮಳೆ ನೀರು ಬಂದರೆ ಚರಂಡಿಗಳೆಲ್ಲ ತುಂಬಿಕೊಂಡು ಹಾವು, ಚೇಳು, ಝರಿಗಳಂತಹ ವಿಷಜಂತುಗಳು ಹರಿದುಬರುತ್ತವೆ. ಭಯದ ವಾತಾವರಣದಲ್ಲಿಯೇ ಬದುಕು ಕಳೆಯುವಂತಾಗಿದೆ. ಕೆಲವರಿಗೆ ವಿಷಜಂತುಗಳಿಂದ ಕಚ್ಚಿ ಆಸ್ಪತ್ರೆ ಸೇರಿರುವ ಉದಾಹರಣೆ ಇಲ್ಲಿ ಸಾಕಷ್ಟಿವೆ.

ಸಾಂಕ್ರಾಮಿಕ ರೋಗದ ಭೀತಿ: ಚರಂಡಿ ದುರ್ನಾತ ಬೀರುತ್ತಿದ್ದು ಸೊಳ್ಳೆಗಳು ತುಂಬಿಕೊಳ್ಳುತ್ತಿವೆ, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವಂತಾಗಿದೆ. ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಪಂ ಸದಸ್ಯರು-ಗ್ರಾಮಸ್ಥರ ವಾಗ್ವಾದ: ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ವೆಂಕಟಾಪುರದಲ್ಲಿ ಚರಂಡಿ ನೀರು ಮನೆಗೆ ನುಗ್ಗಿದ ಪರಿಣಾಮ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ಉಂಟಾಯಿತು. ಪಂಚಾಯಿತಿ ಸದಸ್ಯರೊಬ್ಬರು, ಪಂಚಾಯತ್‌ಗೆ ಚರಂಡಿ ನೀರು ನಿಲ್ಲುವ ಕುರಿತು ಮನವಿ ಸಲ್ಲಿಸಿದಿರಾ ಎಂದು ಜನರೊಂದಿಗೆ ಉಡಾಫೆಯ ಮಾತುಗಳನ್ನಾಡಿದ್ದರಿಂದ ಜನರು ಆಕ್ರೋಶಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ