ಆ್ಯಪ್ನಗರ

ಅರಣ್ಯ ವೃದ್ಧಿಯಾದರೆ ಪರಿಸರ ಸಮೃದ್ಧ

ಅಕ್ಕಿಆಲೂರು: ಪರಿಸರ ಬಗೆಗಿನ ನಿರ್ಲಕ್ಷ ್ಯ ದೂರ ಮಾಡಿ ಪರಿಸರ ಕಾಳಜಿ ಹೊಂದುವುದೊಂದೇ ನಮ್ಮ ಎದುರಿಗಿರುವ ಆಯ್ಕೆಯಾಗಿದೆ. ಅರಣ್ಯ ಸಂಪತ್ತು ವೃದ್ಧಿಯಾದರೆ ಪರಿಸರ ಸಮೃದ್ಧವಾಗಲಿದೆ. ದಿನಕಳೆದಂತೆ ಪರಿಸರ ನಾಶದ ದುಷ್ಕೃತ್ಯಗಳು ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಸ್ಕೌಟ್‌ ಮಾಸ್ಟರ್‌ ನಾಸೀರ್‌ಅಹ್ಮದ್‌ ಶಿಕಾರಿಪೂರ ಆತಂಕ ವ್ಯಕ್ತಪಡಿಸಿದರು.

Vijaya Karnataka 8 Jul 2019, 5:00 am
ಅಕ್ಕಿಆಲೂರು: ಪರಿಸರ ಬಗೆಗಿನ ನಿರ್ಲಕ್ಷ ್ಯ ದೂರ ಮಾಡಿ ಪರಿಸರ ಕಾಳಜಿ ಹೊಂದುವುದೊಂದೇ ನಮ್ಮ ಎದುರಿಗಿರುವ ಆಯ್ಕೆಯಾಗಿದೆ. ಅರಣ್ಯ ಸಂಪತ್ತು ವೃದ್ಧಿಯಾದರೆ ಪರಿಸರ ಸಮೃದ್ಧವಾಗಲಿದೆ. ದಿನಕಳೆದಂತೆ ಪರಿಸರ ನಾಶದ ದುಷ್ಕೃತ್ಯಗಳು ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಸ್ಕೌಟ್‌ ಮಾಸ್ಟರ್‌ ನಾಸೀರ್‌ಅಹ್ಮದ್‌ ಶಿಕಾರಿಪೂರ ಆತಂಕ ವ್ಯಕ್ತಪಡಿಸಿದರು.
Vijaya Karnataka Web HVR-7AKR3


ಮೂಡೂರು ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಸ್ಕೌಟ್ಸ್‌ ದಳದಿಂದ ಪರಿಸರ ಜಾಗೃತಿ ಹಾಗೂ ಬೀಜದ ಉಂಡೆ ತಯಾರಿಕೆಯ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಜಾಗೃತಗೊಂಡು ಪರಿಸರ ಸಂರಕ್ಷ ಣೆಗೆ ಮುಂದಾಗಬೇಕಿದೆ. ಇಂದು ಪರಿಸರ ಸಂಪೂರ್ಣವಾಗಿ ನಾಶ ಪಡಿಸುವ ಮೂಲಕ ಕತ್ತಲೆಯ ಬದುಕಿಗೆ ಮಾನವ ಹವಣಿಸುತ್ತಿದ್ದಾನೆ. ಮನುಷ್ಯನ ದುರಾಸೆಗೆ ಭೂಮಿ, ಸಸ್ಯ ಸಂಪತ್ತು, ಪ್ರಕೃತಿ ನಾಶವಾಗುತ್ತಿದೆ. ಪ್ರಕೃತಿ ವಿನಾಶಕ್ಕೆ ಕಾರಣವಾಗುತ್ತಿರುವ ನಾವಿಂದು ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಸಿ ನೆಟ್ಟು ಅದರ ಪಾಲನೆ, ಪೋಷಣೆ ಮಾಡುವ ಮೂಲಕ ನೈಜ ಪರಿಸರ ಕಾಳಜಿ ಪ್ರದರ್ಶಿಸುವಂತೆ ಕಿವಿಮಾತು ಹೇಳಿದರು. ಶಿಕ್ಷ ಕರು, ಎಸ್‌ಡಿಎಂಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ