ಆ್ಯಪ್ನಗರ

ಎಸ್‌ಐಟಿ ತನಿಖೆ ತೃಪ್ತಿಯಾಗದಿದ್ರೆ ಸಿಬಿಐಗೆ ವಹಿಸಿ: ಜಮೀರ್‌

ಹಾವೇರಿ: ಐಎಂಎ ಹಗರಣ ತನಿಖೆಗೆ ನಮ್ಮ ರಾಜ್ಯದ ಎಸ್‌ಐಟಿ ಅಧಿಕಾರಿಗಳು ಅತ್ಯಂತ ಸಮರ್ಥರಾಗಿದ್ದಾರೆ. ಅವರು ನೀಡುವ ವರದಿ ತೃಪ್ತಿದಾಯಕ ಎನಿಸದಿದ್ದಲ್ಲಿ ಸಿಬಿಐಗೆ ವಹಿಸುವುದರಲ್ಲಿ ತಪ್ಪೇನೂ ಇಲ್ಲ. ಆರಂಭದಿಂದಲೂ ಯಾವುದೇ ತನಿಖೆಗೆ ಒಪ್ಪಿಸುವಂತೆ ಹೇಳಿರುವೆ ಎಂದು ಸಚಿವ ಜಮೀರ್‌ ಅಹ್ಮದ ಖಾನ್‌ ಹೇಳಿದ್ದಾರೆ.

Vijaya Karnataka 2 Jul 2019, 5:00 am
ಹಾವೇರಿ: ಐಎಂಎ ಹಗರಣ ತನಿಖೆಗೆ ನಮ್ಮ ರಾಜ್ಯದ ಎಸ್‌ಐಟಿ ಅಧಿಕಾರಿಗಳು ಅತ್ಯಂತ ಸಮರ್ಥರಾಗಿದ್ದಾರೆ. ಅವರು ನೀಡುವ ವರದಿ ತೃಪ್ತಿದಾಯಕ ಎನಿಸದಿದ್ದಲ್ಲಿ ಸಿಬಿಐಗೆ ವಹಿಸುವುದರಲ್ಲಿ ತಪ್ಪೇನೂ ಇಲ್ಲ. ಆರಂಭದಿಂದಲೂ ಯಾವುದೇ ತನಿಖೆಗೆ ಒಪ್ಪಿಸುವಂತೆ ಹೇಳಿರುವೆ ಎಂದು ಸಚಿವ ಜಮೀರ್‌ ಅಹ್ಮದ ಖಾನ್‌ ಹೇಳಿದ್ದಾರೆ.
Vijaya Karnataka Web if the sit probe is not satisfactory go to the cbi
ಎಸ್‌ಐಟಿ ತನಿಖೆ ತೃಪ್ತಿಯಾಗದಿದ್ರೆ ಸಿಬಿಐಗೆ ವಹಿಸಿ: ಜಮೀರ್‌


ಹಾವೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ''ಗೃಹ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಎಲ್ಲರೂ ಎಸ್‌ಐಟಿ ಬಗ್ಗೆ ವಿಶ್ವಾಸ ಹೊಂದಿರುವ ಕಾರಣಕ್ಕೆ ಸಿಬಿಐಗೆ ವಹಿಸುವುದಿಲ್ಲ ಎಂದಿದ್ದಾರೆ'' ಎಂದರು.

''ನನ್ನ ಬಗ್ಗೆ ಈಶ್ವರಪ್ಪ ಲಘುವಾಗಿ ಮಾತನಾಡಿದ್ದಾರೆ. ನಾನು ನನ್ನ ಸ್ವಂತ ಆಸ್ತಿ ಮಾರಾಟ ಮಾಡಿರುವೆ ವಿನಃ ಅವರಂತೆ ಸರಕಾರದ ಆಸ್ತಿ ಮಾರಾಟ ಮಾಡಿಲ್ಲ. ನಾನು ಆಸ್ತಿ ಮಾರಾಟ ಮಾಡುವಾಗ ಅವರು ವಂಚಕರು ಎನ್ನುವ ಮಾಹಿತಿ ಗೊತ್ತಿರಲಿಲ್ಲ. ಎಲ್ಲರಂತೆ ನಾನೂ ಸಹ ವ್ಯವಹಾರ ಮಾಡಿರುವೆ. ಈ ಕಾರಣಕ್ಕೇ ನನ್ನನ್ನು ಅಪರಾಧಿ ಎಂದರೆ ಹೇಗೆ?'' ಎಂದರು.

''ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿ ಸ್ವತಃ ಆಗಿನ ಸಿಎಂ ಸೇರಿದಂತೆ 11 ಸಚಿವರು ಜೈಲಿಗೆ ಹೋಗಿ ಬಂದಿದ್ದಾರೆ. ಈಶ್ವರಪ್ಪ ಸೇರಿದಂತೆ ಯಾವ ಬಿಜೆಪಿ ನಾಯಕರಿಗೂ ನನ್ನ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ'' ಎಂದು ತಿರುಗೇಟು ನೀಡಿದರು.

ರಾಜೀನಾಮೆ ಗೊತ್ತಿಲ್ಲ: ಶಾಸಕ ಆನಂದಸಿಂಗ್‌ ರಾಜೀನಾಮೆ ನನಗೆ ಗೊತ್ತಿಲ್ಲ. ನಾನು ಪ್ರವಾಸ ಮಾಡುವ ಸಂದರ್ಭ ಮಾಹಿತಿ ಬಂದಿದೆ. ಆದರೆ ಇನ್ನೂ ಸ್ಪೀಕರ್‌ಗೆ ನೀಡಿಲ್ಲ. ಜಿಂದಾಲ್‌ಗೆ ಭೂಮಿ ಮಾರಾಟ ಪ್ರಕರಣ ಮತ್ತು ಆನಂದಸಿಂಗ್‌ ರಾಜೀನಾಮೆ ವಿಚಾರಕ್ಕೂ ಸಂಬಂಧವಿಲ್ಲ. ಬಿಜೆಪಿ ಅವಧಿಯಲ್ಲೇ ಈ ನಿರ್ಧಾರವಾಗಿದೆ. ಈಗ ಅವರು ನಮ್ಮ ಸರಕಾರದ ಮೇಲೆ ಹೇಳುತ್ತಿದ್ದಾರೆ'' ಎಂದರು.

''ಕೆಲ ಶಾಸಕರು ಸಹ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡಿದ್ದಾರೆ. ಅವರೂ ರಾಜೀನಾಮೆ ನೀಡುತ್ತಾರೆ ಅನ್ನೋ ವದಂತಿ ಆಧಾರ ರಹಿತ. ನಾನು ಸಹ ಹಾವೇರಿಗೆ ಬರುವ ಅರ್ಧ ಗಂಟೆ ಮೊದಲು ಮೊಬೈಲ್‌ ಆನ್‌ ಮಾಡಿರುವೆ. ಹಾಗೆಂದು ನಾನೂ ರಾಜೀನಾಮೆ ನೀಡುತ್ತೇನೆ ಎಂದರೆ ಏನರ್ಥ?'' ಎಂದು ಮುಗಳ್ನಕ್ಕರು.

ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಜಿ.ಪಂ. ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ, ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ