ಆ್ಯಪ್ನಗರ

ಇಚ್ಛಾಶಕ್ತಿ ಇದ್ದರೆ ಗೆಲುವು ಖಚಿತ

ಹಾವೇರಿ : ಓದಲು ಬಡತನ, ಶ್ರೀಮಂತಿಕೆ ಮುಖ್ಯವಲ್ಲ. ಇಚ್ಛಾಶಕ್ತಿ ಇದ್ದರೆ ವಿಶ್ವವನ್ನೇ ಗೆಲ್ಲಬಲ್ಲದು ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.

Vijaya Karnataka 29 Jul 2019, 5:00 am
ಹಾವೇರಿ : ಓದಲು ಬಡತನ, ಶ್ರೀಮಂತಿಕೆ ಮುಖ್ಯವಲ್ಲ. ಇಚ್ಛಾಶಕ್ತಿ ಇದ್ದರೆ ವಿಶ್ವವನ್ನೇ ಗೆಲ್ಲಬಲ್ಲದು ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
Vijaya Karnataka Web HVR-28 HAVERI 3-63630
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ಪದವಿ ಪೂರ್ವ ಕಾಲೇಜಿನ ಶೈಕ್ಷ ಣಿಕ ಸಾಲಿನ ಪಠ್ಯ-ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಸಂಸ್ಥೆಯ ಖಜಾಂಚಿ ಚನ್ನವೀರಪ್ಪ ಬಳ್ಳಾರಿ ಉದ್ಘಾಟಿಸಿದರು.


ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ಪದವಿ ಪೂರ್ವ ಕಾಲೇಜಿನ ಶೈಕ್ಷ ಣಿಕ ಸಾಲಿನ ಪಠ್ಯ-ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೈಯಲ್ಲಿರುವ ರೇಖೆ ಹೇಳುವ ಭವಿಷ್ಯ ನಂಬಬೇಡಿ. ಯಾಕಂದರೆ ಕೈ ಇಲ್ಲದವರಿಗೂ ಭವಿಷ್ಯವಿರುತ್ತದೆ. ನಿದ್ದೆಯಲ್ಲಿ ಕಾಣುವಂತದ್ದೂ ಕನಸಲ್ಲ. ನಿದ್ದೆಗೆಡುಸುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು ಎಂದು ಹೇಳಿದರು.

ಬದುಕಿದರೆ ಹುಲಿ ಸಿಂಹಗಳಂತೆ ಬದುಕಿರಿ. ಏಕೆಂದರೆ ಬಲಿ ಕೊಡುವುದು ಕುರಿ, ಕೋಳಿಗಳನ್ನೇ ಹೊರತು ಹುಲಿ, ಸಿಂಹಗಳನ್ನಲ್ಲ ಎಂದ ಅವರು, ತಂದೆಯಿಂದ ಹೊಡೆಸಿಕೊಂಡ ಮಗ, ಗುರುವಿನಿಂದ ಶಿಕ್ಷೆಗೊಳಗಾದ ಶಿಷ್ಯ, ಸುತ್ತಿಗೆಯಿಂದ ಪೆಟ್ಟು ತಿಂದ ಚಿನ್ನ ಲೋಕದಲ್ಲಿ ಬೆಳಗುವುದು ನಿಶ್ಚಿತ. ಗುರು-ಹಿರಿಯರನ್ನು ತಾಯ್ತಂದೆಯರನ್ನು ಗೌರವದಿಂದ ಕಾಣಬೇಕು ಎಂದು ಕಿವಿ ಮಾತು ಹೇಳಿದರು.

ಸಂಸ್ಥೆಯ ಕಾರ್ಯನಿರ್ವಾಹಕ ಎಚ್‌.ಎಸ್‌. ಚಿನ್ನಿಕಟ್ಟಿ ಅಧ್ಯಕ್ಷ ತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಟಿ.ವಿ. ಮೊಬೈಲ್‌ಗಳಿಂದ ದೂರವಿದ್ದು, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಸಂಸ್ಥೆಯ ಖಜಾಂಚಿ ಚನ್ನವೀರಪ್ಪ ಬಳ್ಳಾರಿ ಉದ್ಘಾಟಿಸಿದರು. ಸುಮಾ ಮಠದ, ಮೇಘಾ, ಜಯಶ್ರೀ, ಸುಮಂತ, ರಾಜನಗೌಡ್ರ ಹಾಗೂ ವಿದ್ಯಾರ್ಥಿಗಳು ಮಾತನಾಡಿದರು.

ನೂರಕ್ಕೆ ನೂರು ಫಲಿತಾಂಶ ನೀಡಿದ ಇತಿಹಾಸ ಉಪನ್ಯಾಸಕ ವಿಕ್ರಮ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕ ಎಸ್‌.ಎಫ್‌. ಕೋರಿಶೆಟ್ಟರ ಅವರಿಗೆ ಆಡಳಿತ ಮಂಡಳಿ ಸದಸ್ಯರು ತಲಾ ಹತ್ತು ಸಾವಿರ ರೂ. ನೀಡಿ ಗೌರವಿಸಿದರು.

ವಿನಾಯಕ ಹೊನ್ನಪ್ಪನವರ, ತನುಜಾ ಎಲಿ, ಐಶ್ವರ್ಯಾ ದೇವಗಿರಿ, ಸಾನಿಯಾ ಮುಲ್ಲಾ, ಭರತ ರಿತ್ತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ನೀಡಿ ಉತ್ತೇಜಿಸಿದರು.

ಕಾರ್ಯಕ್ರಮದಲ್ಲಿ ವೀರೇಶ ಮುಗದೂರ, ಉಮೇಶ ಪಾಟೀಲ, ಮಂಜಪ್ಪ ಬಾರಿಕೇರ, ಪ್ರವೀಣ ಬಡಾಯಿ, ಪ್ರವೀಣ ಚೂರಿ, ತುಂಗಭದ್ರ ಪುರಾಣಿಕ, ಅರುಣಾ ಸೂರಣಗಿ, ಅರ್ಪಿತಾ ಕುಪ್ಪೇಲೂರ, ವಿಜಯಲಕ್ಷ್ಮಿ ಪಾಟೀಲ, ಪೂಜಾ ಕುದರಿ ಹಾಗೂ ಬಾರಂಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಪ್ರತಿನಿಧಿ ಪವನಕುಮಾರ ಗೊಲ್ಲರ ಸೇರಿದಂತೆ ಉಪಸ್ಥಿತರಿದ್ದರು.

ಲತಾ, ನಿಂಗಮ್ಮ, ಮಮತಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯೆ ಲೀಲಾವತಿ ಬುಕ್ಕಶೆಟ್ಟಿ ಸ್ವಾಗತಿಸಿದರು. ಪ್ರೊ.ಮಂಜಪ್ಪ ಪರಿಚಯಿಸಿದರು. ಪ್ರೊ.ಜಯಶ್ರೀ ನೀರಲಗಿಮಠ, ಪ್ರವೀಣ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ವಿಕ್ರಂ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ