ಆ್ಯಪ್ನಗರ

ಪರಿಸರ ನಾಶದಿಂದ ಅಸಮತೋಲನ: ನಾಗಣ್ಣನವರ

ರಟ್ಟೀಹಳ್ಳಿ: ಮನುಷ್ಯ ದಿನೆ ದಿನೆ ಪರಿಸರವನ್ನು ಹಾಳು ಮಾಡುತ್ತಿದ್ದು, ಇದರಿಂದಾಗಿ ಪರಿಸರದಲ್ಲಿ ಉತ್ತಮ ಗಾಳಿ, ಮಳೆ ಕಾಣದಂತಾಗಿದೆ. ಪರಿಸರ ನಾಶದಿಂದಾಗಿ ಪರಿಸರದಲ್ಲಿ ಕೆಟ್ಟಗಾಳಿ, ಅಸಮತೋಲನ ಉಂಟಾಗುತ್ತದೆ ಎಂದು ಗ್ರಾಪಂ ಸದಸ್ಯ ದೇವರಾಜ ನಾಗಣ್ಣನವರ ಹೇಳಿದರು.

Vijaya Karnataka 13 Jun 2019, 5:00 am
ರಟ್ಟೀಹಳ್ಳಿ: ಮನುಷ್ಯ ದಿನೆ ದಿನೆ ಪರಿಸರವನ್ನು ಹಾಳು ಮಾಡುತ್ತಿದ್ದು, ಇದರಿಂದಾಗಿ ಪರಿಸರದಲ್ಲಿ ಉತ್ತಮ ಗಾಳಿ, ಮಳೆ ಕಾಣದಂತಾಗಿದೆ. ಪರಿಸರ ನಾಶದಿಂದಾಗಿ ಪರಿಸರದಲ್ಲಿ ಕೆಟ್ಟಗಾಳಿ, ಅಸಮತೋಲನ ಉಂಟಾಗುತ್ತದೆ ಎಂದು ಗ್ರಾಪಂ ಸದಸ್ಯ ದೇವರಾಜ ನಾಗಣ್ಣನವರ ಹೇಳಿದರು.
Vijaya Karnataka Web HVR-11 RATTIHALLI  2


ಅವರು ತಾಲೂಕಿನ ಸಣ್ಣಗುಬ್ಬಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಸ್ವಚ್ಛಮೇವ ಜಯತೆ ಆಂದೋಲನ ಮತ್ತು ಜಲಾಮೃತ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರವನ್ನು ನಾಶವಾಗುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಜಲಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನಾವು ಪರಿಸರ ಸಂರಕ್ಷ ಣೆಯ ಕಡೆಗೆ ವಿಶೇಷ ಆಸಕ್ತಿ ವಹಿಸಬೇಕು. ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಗಿಡಗಳನ್ನು ಬೆಳೆಸುವುದು, ಕಸದ ಸರಿಯಾದ ವಿಲೇವಾರಿ, ಮಳೆನೀರು ಕೊಯ್ಲು, ಪ್ಲಾಸ್ಟಿಕ್‌ ನಿಷೇಧ, ವನ್ಯಜೀವಿಗಳ ರಕ್ಷ ಣೆ ಮುಂತಾದ ಕ್ರಮಗಳಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷ ಕ ಎನ್‌.ಎಚ್‌.ಮಕರಿ, ವೀರಪ್ಪ ಎರೇಸಿಮಿ, ಶಿವಾನಂದ ಬಸಾಪುರ, ಕೃಷ್ಣಪ್ಪ ದಾಸರ, ಮಂಜು ಗೊಂದಳೆ, ವಸಂತಪ್ಪ ಹಾರೋಗೇರಿ ಸೇರಿದಂತೆ ಅಂಗನವಾಡಿ ಸಿಬ್ಬಂದಿ, ಶಾಲಾ ಮಕ್ಕಳು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ