ಆ್ಯಪ್ನಗರ

ಸಂವಿಧಾನದ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಿ

ಹಾವೇರಿ: ಇಂದಿನ ಯುವ ಪೀಳಿಗೆಗೆ ಸಂವಿಧಾನದ ಸಂಪೂರ್ಣವಾದ ತಿಳುವಳಿಕೆಯ ಕೊರತೆ ಇದ್ದು, ಸಂವಿಧಾನ ಬಗ್ಗೆ ಆಳವಾದ ಅಧ್ಯಯನ ಮಾಡುವುದು ಅವಶ್ಯವಾಗಿದೆ ಎಂದು ಜಿಲ್ಲಾ ಹಿರಿಯ ನಾಗರಿಕರ ಹಾಗೂ ವಿಶೇಷಚೇತನ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಮಠದ ಹೇಳಿದರು.

Vijaya Karnataka 2 Dec 2018, 5:00 am
ಹಾವೇರಿ: ಇಂದಿನ ಯುವ ಪೀಳಿಗೆಗೆ ಸಂವಿಧಾನದ ಸಂಪೂರ್ಣವಾದ ತಿಳುವಳಿಕೆಯ ಕೊರತೆ ಇದ್ದು, ಸಂವಿಧಾನ ಬಗ್ಗೆ ಆಳವಾದ ಅಧ್ಯಯನ ಮಾಡುವುದು ಅವಶ್ಯವಾಗಿದೆ ಎಂದು ಜಿಲ್ಲಾ ಹಿರಿಯ ನಾಗರಿಕರ ಹಾಗೂ ವಿಶೇಷಚೇತನ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಮಠದ ಹೇಳಿದರು.
Vijaya Karnataka Web implement the principles of the constitution
ಸಂವಿಧಾನದ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಿ


ನಗರದ ಪರಿವರ್ತನಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ಹಾವೇರಿ, ಆಶಾಕಿರಣ ರೂರಲ್‌ ಡೆವಲೆಪ್‌ಮೆಂಟ್‌ ಸೊಸೈಟಿ(ರಿ) ಚಿಕ್ಕಮುಗದೂರ, ಪರಿವರ್ತನಾ ಪದವಿ ಪೂರ್ವ ಮಹಾವಿದ್ಯಾಲಯ ಹಾವೇರಿ ಇವರುಗಳ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಸಂವಿಧಾನದ ಮೂಲಭೂತ ಕಾನೂನಗಳಿಗೆ ಅಗೌರವ ತೋರುವ ಮತ್ತು ಚ್ಯುತಿ ತರುವಂತಹ ಮತ್ತು ಸಂವಿಧಾನದ ಆಶಯಗಳನ್ನು ದಿಕ್ಕರಿಸುವಂತಹ ಕಾರ್ಯದಲ್ಲಿ ತೊಡಗಿರುವುದು ವಿಷಾಧಕರ ಸಂಗತಿ ಎಂದರು. ಸಂವಿಧಾನ ಸರ್ವ ಜನರ ಆಸ್ತಿ. ಅದನ್ನು ಉಳಿಸಿ ಬೆಳಸಬೇಕಾಗಿದೆ. ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ಉಳಿಯಬೇಕಾದರೆ, ಸಂವಿಧಾನದ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವದ ಯಶಸ್ಸು ಹಾಗೂ ಸಂವಿಧಾನದ ಉಳಿವು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಆಶಾಕಿರಣ ಸಂಸ್ಥೆ ಅಧ್ಯಕ್ಷ ಮುತ್ತುರಾಜ ಮಾದರ ಮಾತನಾಡಿ, ನಾವು ಮೂಲ ಹಕ್ಕುಗಳನ್ನು ಪಡೆಯುವುದರ ಜತೆಗೆ ಮೂಲ ಕರ್ತವ್ಯ ಪಾಲಿಸಬೇಕಾಗಿದೆ. ಭಾರತದ ನವ ನಿರ್ಮಾಣ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು. ನ್ಯಾಯವಾದಿ ಅನಿತಾ ಹೊನ್ನಪ್ಪನವರ ಉಪನ್ಯಾಸ ನೀಡಿದರು. ದಿನೇಶ ಸಂಯೋಜಕರು, ನೆಹರು ಯುವ ಕೇಂದ್ರ ಇವರು ಮಕ್ಕಳೊಂದಿಗೆ ಸಂವಿಧಾನ ಕುರಿತು ಸಂವಾದ ನಡೆಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಜಿ ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು. ಆಡಳಿತಾಧಿಕಾರಿ ಸಿ.ಎನ್‌. ಮಾಳಿ, ಮಂಜುನಾಥ ಸಂಕಣ್ಣನವರ, ಪವಿತ್ರಾ ಹರಿಜನ, ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು. ಜಯಶ್ರೀ ಪವಾಡಿ ನಿರೂಪಿಸಿದರು. ರಘುಕುಮಾರ ದೇವೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ