ಆ್ಯಪ್ನಗರ

ಹಾವೇರಿ: ಸುಮಾರು ₹15.80 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಮೂವರ ಬಂಧನ

ಕಳ್ಳತನ ಮಾಡಿರುವ ಮೂವರು ಆರೋಪಿಗಳು ಪೇಂಟಿಂಗ್‌ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಧಾರವಾಡ ಮೂಲದ ಆರೋಪಿ ಮಹ್ಮದ್‌ ಹುಸೇನ್‌(28), ಹುಬ್ಬಳ್ಳಿಯ ಅರಳಿಕಟ್ಟಿ ನಿವಾಸಿ ಅಮಿದ್‌ ಮಹ್ಮದ್‌ ಬೇಫಾರಿ(28) ಎಂಬಾತನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಹುಬ್ಬಳ್ಳಿ ಮೂಲದ ಸಲೀಂ ತಂದೆ ಅಮಿನ್‌ ಬೇಪಾರಿ(26) ಯನ್ನು ಗೋವಾ ಪೋಲಿಸರು ಬಂಧಿಸಿದ್ದಾರೆ.

Vijaya Karnataka Web 13 Apr 2021, 8:23 am
ಹಾವೇರಿ: ನಗರದ ಯಾಲಕ್ಕಿ ಓಣಿಯ ಸಮೀಪ ಗುಡಿಸಲು ಕೇರಿ ಓಣಿಯಲ್ಲಿ ಮಾ.29 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಶಹರ ಠಾಣೆಯ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಹೇಳಿದರು.
Vijaya Karnataka Web police arrest


ಹಾವೇರಿಯ ಶಹರ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ.29 ರಂದು ಹಾವೇರಿ ನಗರದ ಯಾಲಕ್ಕಿ ಓಣಿಯಲ್ಲಿ ಕಳ್ಳತನವಾದ ಕುರಿತು ಶಹರ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪತ್ತೆ ಹಚ್ಚಲು ಎಎಸ್‌ಪಿ ವಿಜಯಕುಮಾರ ಸಂತೋಷ, ಡಿವೈಎಸ್ಪಿ ಶಂಕರ ಮಾರಿಹಾಳ ಹಾಗೂ ಪಿಐ ಪ್ರಹ್ಲಾದ ಚೆನ್ನಗಿರಿ ನೇತೃತ್ವದಲ್ಲಿ ರಚಿಸಿದ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಸುಮಾರು 15.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನ ಮಾಡಿರುವುದಾಗಿ ಕಳ್ಳರು ಒಪ್ಪಿಕೊಂಡಿದ್ದಾರೆ.
ಬರೋಬ್ಬರಿ 1 ಕ್ವಿಂಟಾಲ್‌ಗೂ ಹೆಚ್ಚು ಗಾಂಜಾ ವಶ; ಗಾಂಜಾ ಮಾರುತ್ತಿದ್ದ ಮೂವರ ಬಂಧನ
ಕಳ್ಳತನ ಮಾಡಿರುವ ಮೂವರು ಆರೋಪಿಗಳು ಪೇಂಟಿಂಗ್‌ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಧಾರವಾಡ ಮೂಲದ ಆರೋಪಿ ಮಹ್ಮದ್‌ ಹುಸೇನ್‌(28), ಹುಬ್ಬಳ್ಳಿಯ ಅರಳಿಕಟ್ಟಿ ನಿವಾಸಿ ಅಮಿದ್‌ ಮಹ್ಮದ್‌ ಬೇಫಾರಿ(28) ಎಂಬಾತನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಹುಬ್ಬಳ್ಳಿ ಮೂಲದ ಸಲೀಂ ತಂದೆ ಅಮಿನ್‌ ಬೇಪಾರಿ(26) ಯನ್ನು ಗೋವಾ ಪೋಲಿಸರು ಬಂಧಿಸಿದ್ದಾರೆ ಎಂದರು. ಮಾ. 28 ರಂದು ರಾತ್ರಿ ವೇಳೆ ಆರೋಪಿಗಳು ತಿರುಗಾಡಿ ಮನೆ ಬಾಗಿಲು ಹಾಕಿದ್ದನ್ನು ಗಮನಿಸಿ ಕೀಲಿಯನ್ನು ಕಬ್ಬಿಣದ ರಾಡ್‌ನಿಂದ ಮುರಿದು ಮನೆಗೆ ನುಗ್ಗಿ ಬಂಗಾರದ ಆಭರಣಗಳನ್ನು ದೋಚಿದ್ದಾರೆ. ಬಂಗಾರವನ್ನು ಮಾರಿ ಬಂದ ಹಣದಲ್ಲಿ ಮೂವರು ಹಂಚಿಕೊಂಡಿದ್ದೇವೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
‘ಹಣ ಹಂಚಲೆಂದೇ ವಿಜಯೇಂದ್ರನನ್ನು ಬೈಎಲೆಕ್ಷನ್‌ ಪ್ರಚಾರಕ್ಕೆ ಬಿಟ್ಟಿದ್ದಾರೆ’; ಯತ್ನಾಳ್‌ ಆರೋಪ
ಪ್ರಕರಣದ ಆರೋಪಿತರನ್ನು ಪತ್ತೆ ಮಾಡುವ ತನಿಖಾ ತಂಡದಲ್ಲಿ ಹಾವೇರಿ ಶಹರ ಠಾಣೆಯ ಪಿಐ ಪ್ರಹ್ಲಾದ ಚೆನ್ನಗಿರಿ, ಪಿಎಸ್‌ಐ ಎಸ್‌.ಪಿ ಹೊಸಮನಿ, ಆರ್‌.ವಿ ಸೊಪ್ಪಿನ, ವೈ.ಎಫ್‌ ತಹಶೀಲ್ದಾರ, ಸಿ.ಎಂ ಪೂಜಾರ, ಪಿ.ಕೆ ಕರಿಯಣ್ಣನವರ, ಎಂ.ಎಂ ತುಂಗಳದ, ಜಿ.ಎಸ್‌ ಹಳ್ಳೂರ, ಪಿ.ಬಿ ತಿಪ್ಪಣ್ಣನವರ, ಆರ್‌.ಎಸ್‌ ಗೊಂದೇರ, ಎಂ.ಎಂ ಬಂಕಾಪೂರ, ಪೂಜಾರ, ಮಾರುತಿ ಹಾಲಭಾವಿ, ಸತೀಶ ಮಾರಿಕಟ್ಟೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ