ಆ್ಯಪ್ನಗರ

ಸುಡು ಬಿಸಿಲಲ್ಲೂ ಕುಗ್ಗದ ಉತ್ಸಾಹ

ಬ್ಯಾಡಗಿ : ಲೋಕಸಭೆ ಚುನಾವಣೆ ಫಲಿತಾಂಶದ ದಿನವಾದ ಗುರುವಾರ ಹಾವೇರಿ ದೇವಗಿರಿಯ ತಾಂತ್ರಿಕ ಕಾಲೇಜ ಆವರಣ ಅಕ್ಷ ರಶ ಕೇಸರಿಮಯವಾಗಿತ್ತು. ಬೆಳಗ್ಗೆಯಿಂದಲೇ ಕಾಲೇಜ ಎದುರು ಜಮಾಯಿಸಿದ್ದ ಸಾವಿರಾರು ಕಾರ‍್ಯಕರ್ತರು ಮತ ಎಣಿಕೆ ಆರಂಭಕ್ಕೆ ಬಕಪಕ್ಷಿಯಂತೆ ಕಾದು ಕುಳಿತಿದ್ದರು.

Vijaya Karnataka 24 May 2019, 5:00 am
ಬ್ಯಾಡಗಿ : ಲೋಕಸಭೆ ಚುನಾವಣೆ ಫಲಿತಾಂಶದ ದಿನವಾದ ಗುರುವಾರ ಹಾವೇರಿ ದೇವಗಿರಿಯ ತಾಂತ್ರಿಕ ಕಾಲೇಜ ಆವರಣ ಅಕ್ಷ ರಶ ಕೇಸರಿಮಯವಾಗಿತ್ತು. ಬೆಳಗ್ಗೆಯಿಂದಲೇ ಕಾಲೇಜ ಎದುರು ಜಮಾಯಿಸಿದ್ದ ಸಾವಿರಾರು ಕಾರ‍್ಯಕರ್ತರು ಮತ ಎಣಿಕೆ ಆರಂಭಕ್ಕೆ ಬಕಪಕ್ಷಿಯಂತೆ ಕಾದು ಕುಳಿತಿದ್ದರು.
Vijaya Karnataka Web HVR-23BYD1K


ಬೆಳಿಗ್ಗೆ 7.30 ಕ್ಕೆ ಆರಂಭವಾದ ಮತ ಎಣಿಕೆ ಕಾರ‍್ಯಕ್ರಮ ನಿಧಾನಗತಿಯಲ್ಲಿ ಸಾಗುತ್ತಿತ್ತು. ಸಮಯ ಕಳೆದಂತೆ ಬಿಸಲಿನ ತಾಪಮಾನ ಕೂಡ ಹೆಚ್ಚಾಗುತ್ತ ಸಾಗಿತು. ಬಿಸಿಲು ನೆತ್ತಿಯನ್ನು ಸುಡುತ್ತಿದ್ದರೂ ಲೆಕ್ಕಿಸದೆ ಒಂದೊಂದು ಸುತ್ತಿನ ಮತ ಎಣಿಕೆ ಫಲಿತಾಂಶ ಹೋರಬಿಳುತ್ತಿದ್ದಂತೆ ಉತ್ಸಾಹದಿಂದ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಸೈಲೆಂಟಾಗಿ ಕಾಲ್ಕಿತ್ತ ಕಾಂಗ್ರೆಸ್‌ ಅಭಿಮಾನಿಗಳು: ಮೊದಲ ಸುತ್ತಿನ ಮತೆ ಎಣಿಕೆಯಿಂದಲೇ ನಿರಂತರವಾಗಿ ಮತಗಳ ಕಾಯ್ದುಕೊಂಡ ಬಂದ ಉದಾಸಿ ಅವರು 5 ನೇ ಸುತ್ತಿನ ಮತ ಎಣಿಕೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಲೇಜ್‌ ಆವರಣದಲ್ಲಿ ಜಮಾಯಿಸಿದ್ದ ಕಾಂಗ್ರೆಸ್‌ ಕಾರ‍್ಯಕರ್ತರು ತಮ್ಮ ಅಭ್ಯರ್ಥಿ ಸೋಲು ಖಚಿತ ಎಂಬುದನ್ನು ತಿಳಿದು ಬಾಡಿದ ಮುಖದೊಂದಿಗೆ ಅಲ್ಲಿಂದ ಸೈಲೆಂಟಾಗಿ ಕಾಲ್ಕಿತ್ತರು.

ದುಡಿಮೆಗಿಳಿದ ಶಾಲಾ ಮಕ್ಕಳು: ಕಾರ‍್ಯಕರ್ತರನ್ನು ಹೊರತುಪಡಿಸಿದರೆ ಕಾಲೇಜ್‌ ಆವರಣದಲ್ಲಿ ಹೆಚ್ಚಾಗಿ ಕಂಡುಬಂದದ್ದು ಮಕ್ಕಳು. ಅವರು ಸಿಹಿ ತಿಂಡಿ, ಗುಲಾಲ್‌ ಬಣ್ಣ, ಮಜ್ಜಿಗೆ, ಕುರಚಲು ತಿಂಡಿ, ನೀರಿನ ಬಾಟಲ್‌, ಕಬ್ಬಿನ ರಸ, ಉಪ್ಪಿಟ್ಟು ಸಿರಾ, ಪಲಾವ್‌ ಸೇರಿದಂತೆ ಬಗೆ ಬಗೆ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವಲ್ಲಿ ನಿರತರಾಗಿದ್ದು ಕಂಡು ಬಂದಿತು.

ಕಾಂಗ್ರೆಸ್‌ ಬಿಜೆಪಿ ಜಟಾಪಟಿ: ಬಿಜೆಪಿಗೆ ಮುನ್ನಡೆ ಸಾಧಿಸುತ್ತಿದ್ದಂತೆ ಸೈಲೆಂಟಾಗಿದ್ದ ಅಭಿಮಾನಿಗಳಲ್ಲಿ ಒಬ್ಬ ಕಾಂಗ್ರೆಸ್‌ ಅಭಿಮಾನಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂಬ ಕಾರಣಕ್ಕೆ ಬಿಜೆಪಿ ಕಾರ‍್ಯಕರ್ತರು ಹಾಗೂ ಕಾಂಗ್ರಸ್‌ ಕಾರ‍್ಯಕರ್ತರ ನಡುವೆ ಜಟಾಪಟಿ ಪ್ರಾರಂಭವಾಗಿ ಕೈಕೈ ಮಿಲಾಯಿಸುವರ ಮಟ್ಟಿಗೆ ಹೋಯಿತು. ಮತ್ತು ಒಂದಿಬ್ಬರು ಅವನಿಗೆ ಧರ್ಮದೇಟನ್ನು ನೀಡಿದ್ದು ಕಂಡುಬಂದಿತು.

ಬಿಸಿಲಿಗೆ ಬಸವಳಿದ ಪೊಲೀಸ್‌: ಫಲಿತಾಂಶ ದಿನ ಯಾವುದೇ ಅಹಿತರಕ ಘಟನೆಯಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಆದರೆ ಎಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಬಿಸಿಲಿಗೆ ಬಸವಳಿದ ಪೊಲೀಸ್‌ ಸಿಬ್ಬಂದಿ ಮರದ ಕೆಳಗೆ, ಬಸ್‌ ನಿಲ್ದಾಣ, ಚಹಾ ಅಂಗಡಿಗಳ ಆಶ್ರಯ ಪಡೆಯುಂತಾಯಿತು.

ಬಣ್ಣದಲ್ಲಿ ಮಿಂದೆದ್ದ ಅಭಿಮಾನಿಗಳು: ಫಲಿತಾಂಶ ಪ್ರಕಟವಾಗುವ ಮುಂಚೆಯೇ ಬಿಜೆಪಿ ಅಭ್ಯರ್ಥಿ ಗೆಲವು ಪಕ್ಕಾ ಎಂದು ನೆರೆದಿದ್ದ ಅಭಿಮಾನಿಗಳು ಗುಲಾಲ್‌ ಬಣ್ಣ ಎರಚುತ್ತಾ ಸಂಭ್ರಮಾಚಣೆ ನಡೆಸುತ್ತಿದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಹುಚ್ಚೆದ್ದು ಕುಣಿದ ಅಭಿಮಾನಿಗಳು ಬಣ್ಣದಲ್ಲೆ ಮುಳುಗಿದರಲ್ಲದೇ ಒಬ್ಬರನ್ನೊಬ್ಬರು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡಿದರು.

ಭರ್ಜರಿ ವ್ಯಾಪಾರ: ಕಾಲೇಜ್‌ ಸುತ್ತಮುತ್ತಲಲ್ಲಿ ಹಾಕಲಾಗಿದ್ದ ಹೋಟೆಲ್‌ಗಳು, ನೀರಿನ ಬಾಟಲ್‌ ಅಂಗಡಿಗಳು, ಕಬ್ಬಿನ ಹಾಲಿನ ಅಂಗಡಿ, ಬಣ್ಣದಂಗಡಿಗಳು ಇಡೀ ದಿನ ಭರ್ಜರಿ ವ್ಯಾಪಾರ ನಡೆಸಿದವು. ಅಲ್ಲದೇ ಎಲ್ಲ ಪೊಲೀಸ್‌ ಸಿಬ್ಬಂದಿ ತಮ್ಮ ಕಾರ‍್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ