ಹಾವೇರಿ: ಹಾವೇರಿ ಕೃಷಿ ಪ್ರಧಾನ ಜಿಲ್ಲೆ. ಜತೆಗೆ ನಾಲ್ಕು ನದಿಗಳು ಹರಿಯುವ ಮೂಲಕ ನೀರಾವರಿಗೆ ಪೂರಕವಾಗಿದ್ದರೂ ಕಳೆದ 2 ದಶಕಗಳಿಂದ ಕೈಗಾರಿಕೆ ಮತ್ತು ನೀರಾವರಿ ಕ್ಷೇತ್ರ ಅಭಿವೃದ್ಧಿಯಾಗದಿರುವುದು ರಾಜಕೀಯ ಇಚ್ಛಾಶಕ್ತಿ ಕೊರತೆಗೆ ಸಾಕ್ಷಿಯಾಗಿದೆ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಗುರುಮಠ ಆರೋಪಿಸಿದ್ದಾರೆ.
ಸೋಮವಾರ ಹಾವೇರಿಯಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೈಗಾರಿಕೆ ಸ್ಥಾಪಿಸುವ ನೆಪದಲ್ಲಿರೈತರ ಫಲವತ್ತಾದ ಜಮೀನುಗಳ ಮೇಲೆ ಕಣ್ಣು ಹಾಕುವ ಬದಲು ಸರಕಾರ ಕೃಷಿಗೆ ಪೂರಕವಾಗಿ ಸಣ್ಣ ಮತ್ತು ಮಧ್ಯಮ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಬೇಕು. ಈ ಮೂಲಕ ಉದ್ಯೋಗ ಅರಸಿ ನಗರ, ಮಹಾನಗರಗಳಿಗೆ ವಲಸೆ ಹೋಗುತ್ತಿರುವ ಕೌಶಲ್ಯವಿರುವ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದರು.
ಜಿಲ್ಲೆಯಲ್ಲಿವರದಾ, ಧರ್ಮಾ, ಕುಮದ್ವತಿ ಮತ್ತು ತುಂಗಭದ್ರಾ ಸೇರಿದಂತೆ ನಾಲ್ಕು ಪ್ರಮುಖ ನದಿಗಳು ಹರಿಯುತ್ತಿದ್ದರೂ ಇವುಗಳನ್ನು ನೀರಾವರಿಗೆ ಬಳಸಿಕೊಳ್ಳಲು ಸಂಸದರು, ಸಚಿವರು, ಶಾಸಕರು ಮುಂದಾಗಿಲ್ಲ. ಭವಿಷ್ಯದ ದಿನಗಳಲ್ಲಿಈ ಎರಡೂ ವಲಯಗಳನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ದೂರದೃಷ್ಠಿ ಜನಪ್ರತಿನಿಧಿಗಳ ಅಗತ್ಯವಿದೆ.
ಈಗ ಜಿಲ್ಲೆಯ ರಾಣೇಬೆನ್ನೂರ ಮತ್ತು ಹಿರೇಕೇರೂರ ಕ್ಷೇತ್ರಗಳಲ್ಲಿಬೈ ಇಲೆಕ್ಷನ್ ಇದೆ. ಈ ಹಂತದಲ್ಲಿ3 ನೇ ರಾಜಕೀಯ ಶಕ್ತಿ ಅಖಾಡಕ್ಕಿಳಿಯುವ ಅಗತ್ಯವಿದೆ. ಈಗಾಗಲೇ ಹೈದ್ರಾಬಾದನಲ್ಲಿಕೈಗಾರಿಕೋದ್ಯಮಿಯಾಗಿ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿರುವ ರಟ್ಟೀಹಳ್ಳಿ ತಾಲೂಕ ಗುಡ್ಡದಮಾದಾಪುರದ ಪರಮೇಶಪ್ಪ ಕಾಗಿನೆಲ್ಲಿರಾಜಕೀಯ ಅಖಾಡಕ್ಕಿಳಿಯಲಿದ್ದಾರೆ. ಇಂತಹ ಸಮಾಜ ಚಿಂತಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿನಮ್ಮ ಸಂಘಟನೆ ಬೆಂಬಲಿಸಲು ನಿರ್ಧರಿಸಿದೆ ಎಂದರು.
ಈ ವೇಳೆ ಮಾತನಾಡಿದ ಗಮ್ಮಾ ಆಗ್ರೋ ಮೆಡಿಕಲ್ ಪ್ರೊಸಸ್ಸಿಂಗ್ ಪ್ರೈ.ಲಿ.ನ ಎಂ.ಡಿ. ಪರಮೇಶಪ್ಪ ಕಾಗಿನೆಲ್ಲಿ, ಮೂಲತಃ ನಾನು ಬಡ ಕೃಷಿಕ ಕುಟುಂಬದಿಂದ ಬೆಳೆದು ಶೈಕ್ಷಣಿಕವಾಗಿ, ಕೈಗಾರಿಕೋದ್ಯಮಿಯಾಗಿ. ಕೃಷಿ ವಲಯದ ವೈದ್ಯಕೀಯ ಕ್ಷೇತ್ರದಲ್ಲಿಪ್ರಗತಿಪರ ರೈತನಾಗಿಯೂ ಅನುಭವ ಹೊಂದಿರುವೆ. ನಿರಂತರ ಪರಿಶ್ರಮದ ಫಲವಾಗಿ ಈಗ ಆರ್ಥಿಕವಾಗಿ ಸಬಲನಾಗಿರುವೆ. ಆದರೆ ಹೈದ್ರಾಬಾದ್ನಲ್ಲಿನಾನು ಕೈಗಾರಿಕೋದ್ಯಮಿಯಾಗಿ ಬೆಳೆಯಲು ಎಲ್ಲರೀತಿಯ ಸಹಕಾರ ಸಿಕ್ಕಿದೆ. ಹಾವೇರಿ ಜಿಲ್ಲೆಯಲ್ಲಿನನಗೆ ನಿರೀಕ್ಷಿತ ಪ್ರಮಾಣದಲ್ಲಿಸಹಕಾರ ನೀಡುವುದಿರಲಿ, ಈಗಾಗಲೇ ನನಗೆ ನೀಡಿರುವ ಜಮೀನು ಸಹ ಹಿಂಪಡೆಯಲು ಜಿಲ್ಲಾಡಳಿತ ಮುಂದಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದು ವಿಷಾದಿಸಿದರು.
ಸದ್ಯದ ಸ್ಥಿತಿಯಲ್ಲಿನಾನು ನೂರು ಕೋಟಿ ರೂ.ಗಳ ಬೃಹತ್ ಯೋಜನೆಯೊಂದನ್ನು ರೂಪಿಸಿದ್ದು, ಈ ಘಟಕ ಸ್ಥಾಪನೆಗೆ ಜಿಲ್ಲೆಯ ಬಂಜರು ಭೂಮಿ ಒದಗಿಸಬೇಕೆಂದು ಜಿಲ್ಲಾಕೈಗಾರಿಕಾ ಇಲಾಖೆಗೆ ಮನವಿ ಮಾಡಿರುವೆ. ಜಿಲ್ಲೆಯಲ್ಲಿಏನಾದರೂ ಸಾಧಿಸಬೇಕಿದ್ದಲ್ಲಿರಾಜಕೀಯ ವಲಯದ ಕೃಪಾಕಟಾಕ್ಷ ಬೇಕಿದೆ. ಈ ಎಲ್ಲಅಂಶಗಳ ಹಿನ್ನೆಲೆಯಲ್ಲಿನಾನೂ ಸಹ ಅವಕಾಶ ನೀಡಿದಲ್ಲಿಚುನಾವಣಾ ಅಖಾಡಕ್ಕಿಳಿಯಲು ಸಿದ್ಧ ಎಂದರು. ಶಿವಯೋಗಿ ಬೆನ್ನೂರ. ಎಸ್.ಎಂ. ಚಿಕ್ಕಗೌಡ್ರ, ಶಿವಪ್ಪ ಬೆನಕಣ್ಣನವರ ಮುಂತಾದವರು ಉಪಸ್ಥಿತರಿದ್ದರು.
ಸೋಮವಾರ ಹಾವೇರಿಯಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೈಗಾರಿಕೆ ಸ್ಥಾಪಿಸುವ ನೆಪದಲ್ಲಿರೈತರ ಫಲವತ್ತಾದ ಜಮೀನುಗಳ ಮೇಲೆ ಕಣ್ಣು ಹಾಕುವ ಬದಲು ಸರಕಾರ ಕೃಷಿಗೆ ಪೂರಕವಾಗಿ ಸಣ್ಣ ಮತ್ತು ಮಧ್ಯಮ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಬೇಕು. ಈ ಮೂಲಕ ಉದ್ಯೋಗ ಅರಸಿ ನಗರ, ಮಹಾನಗರಗಳಿಗೆ ವಲಸೆ ಹೋಗುತ್ತಿರುವ ಕೌಶಲ್ಯವಿರುವ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದರು.
ಜಿಲ್ಲೆಯಲ್ಲಿವರದಾ, ಧರ್ಮಾ, ಕುಮದ್ವತಿ ಮತ್ತು ತುಂಗಭದ್ರಾ ಸೇರಿದಂತೆ ನಾಲ್ಕು ಪ್ರಮುಖ ನದಿಗಳು ಹರಿಯುತ್ತಿದ್ದರೂ ಇವುಗಳನ್ನು ನೀರಾವರಿಗೆ ಬಳಸಿಕೊಳ್ಳಲು ಸಂಸದರು, ಸಚಿವರು, ಶಾಸಕರು ಮುಂದಾಗಿಲ್ಲ. ಭವಿಷ್ಯದ ದಿನಗಳಲ್ಲಿಈ ಎರಡೂ ವಲಯಗಳನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ದೂರದೃಷ್ಠಿ ಜನಪ್ರತಿನಿಧಿಗಳ ಅಗತ್ಯವಿದೆ.
ಈಗ ಜಿಲ್ಲೆಯ ರಾಣೇಬೆನ್ನೂರ ಮತ್ತು ಹಿರೇಕೇರೂರ ಕ್ಷೇತ್ರಗಳಲ್ಲಿಬೈ ಇಲೆಕ್ಷನ್ ಇದೆ. ಈ ಹಂತದಲ್ಲಿ3 ನೇ ರಾಜಕೀಯ ಶಕ್ತಿ ಅಖಾಡಕ್ಕಿಳಿಯುವ ಅಗತ್ಯವಿದೆ. ಈಗಾಗಲೇ ಹೈದ್ರಾಬಾದನಲ್ಲಿಕೈಗಾರಿಕೋದ್ಯಮಿಯಾಗಿ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿರುವ ರಟ್ಟೀಹಳ್ಳಿ ತಾಲೂಕ ಗುಡ್ಡದಮಾದಾಪುರದ ಪರಮೇಶಪ್ಪ ಕಾಗಿನೆಲ್ಲಿರಾಜಕೀಯ ಅಖಾಡಕ್ಕಿಳಿಯಲಿದ್ದಾರೆ. ಇಂತಹ ಸಮಾಜ ಚಿಂತಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿನಮ್ಮ ಸಂಘಟನೆ ಬೆಂಬಲಿಸಲು ನಿರ್ಧರಿಸಿದೆ ಎಂದರು.
ಈ ವೇಳೆ ಮಾತನಾಡಿದ ಗಮ್ಮಾ ಆಗ್ರೋ ಮೆಡಿಕಲ್ ಪ್ರೊಸಸ್ಸಿಂಗ್ ಪ್ರೈ.ಲಿ.ನ ಎಂ.ಡಿ. ಪರಮೇಶಪ್ಪ ಕಾಗಿನೆಲ್ಲಿ, ಮೂಲತಃ ನಾನು ಬಡ ಕೃಷಿಕ ಕುಟುಂಬದಿಂದ ಬೆಳೆದು ಶೈಕ್ಷಣಿಕವಾಗಿ, ಕೈಗಾರಿಕೋದ್ಯಮಿಯಾಗಿ. ಕೃಷಿ ವಲಯದ ವೈದ್ಯಕೀಯ ಕ್ಷೇತ್ರದಲ್ಲಿಪ್ರಗತಿಪರ ರೈತನಾಗಿಯೂ ಅನುಭವ ಹೊಂದಿರುವೆ. ನಿರಂತರ ಪರಿಶ್ರಮದ ಫಲವಾಗಿ ಈಗ ಆರ್ಥಿಕವಾಗಿ ಸಬಲನಾಗಿರುವೆ. ಆದರೆ ಹೈದ್ರಾಬಾದ್ನಲ್ಲಿನಾನು ಕೈಗಾರಿಕೋದ್ಯಮಿಯಾಗಿ ಬೆಳೆಯಲು ಎಲ್ಲರೀತಿಯ ಸಹಕಾರ ಸಿಕ್ಕಿದೆ. ಹಾವೇರಿ ಜಿಲ್ಲೆಯಲ್ಲಿನನಗೆ ನಿರೀಕ್ಷಿತ ಪ್ರಮಾಣದಲ್ಲಿಸಹಕಾರ ನೀಡುವುದಿರಲಿ, ಈಗಾಗಲೇ ನನಗೆ ನೀಡಿರುವ ಜಮೀನು ಸಹ ಹಿಂಪಡೆಯಲು ಜಿಲ್ಲಾಡಳಿತ ಮುಂದಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದು ವಿಷಾದಿಸಿದರು.
ಸದ್ಯದ ಸ್ಥಿತಿಯಲ್ಲಿನಾನು ನೂರು ಕೋಟಿ ರೂ.ಗಳ ಬೃಹತ್ ಯೋಜನೆಯೊಂದನ್ನು ರೂಪಿಸಿದ್ದು, ಈ ಘಟಕ ಸ್ಥಾಪನೆಗೆ ಜಿಲ್ಲೆಯ ಬಂಜರು ಭೂಮಿ ಒದಗಿಸಬೇಕೆಂದು ಜಿಲ್ಲಾಕೈಗಾರಿಕಾ ಇಲಾಖೆಗೆ ಮನವಿ ಮಾಡಿರುವೆ. ಜಿಲ್ಲೆಯಲ್ಲಿಏನಾದರೂ ಸಾಧಿಸಬೇಕಿದ್ದಲ್ಲಿರಾಜಕೀಯ ವಲಯದ ಕೃಪಾಕಟಾಕ್ಷ ಬೇಕಿದೆ. ಈ ಎಲ್ಲಅಂಶಗಳ ಹಿನ್ನೆಲೆಯಲ್ಲಿನಾನೂ ಸಹ ಅವಕಾಶ ನೀಡಿದಲ್ಲಿಚುನಾವಣಾ ಅಖಾಡಕ್ಕಿಳಿಯಲು ಸಿದ್ಧ ಎಂದರು. ಶಿವಯೋಗಿ ಬೆನ್ನೂರ. ಎಸ್.ಎಂ. ಚಿಕ್ಕಗೌಡ್ರ, ಶಿವಪ್ಪ ಬೆನಕಣ್ಣನವರ ಮುಂತಾದವರು ಉಪಸ್ಥಿತರಿದ್ದರು.