ಆ್ಯಪ್ನಗರ

ಮಕ್ಕಳಿಗೆ ಜ್ವರ ಬಾಧೆ

ಪಿ.ಎಂ.ಸತ್ಯಪ್ಪನವರ ಶಿಗ್ಗಾವಿ: ಶಿಗ್ಗಾವಿ-ಬಂಕಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆ ಹಾವಳಿ ಹೆಚ್ಚಿದ್ದು, 20ಕ್ಕೂ ಹೆಚ್ಚು ಮಕ್ಕಳು ಜ್ವರದಿಂದ ಬಳಲಿ ಶಿಗ್ಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka 24 Jul 2019, 5:00 am
ಪಿ.ಎಂ.ಸತ್ಯಪ್ಪನವರ ಶಿಗ್ಗಾವಿ: ಶಿಗ್ಗಾವಿ-ಬಂಕಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆ ಹಾವಳಿ ಹೆಚ್ಚಿದ್ದು, 20ಕ್ಕೂ ಹೆಚ್ಚು ಮಕ್ಕಳು ಜ್ವರದಿಂದ ಬಳಲಿ ಶಿಗ್ಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web HVR-23SGN-1


ಪುಟ್ಟ ಮಕ್ಕಳು ತೀವ್ರ ಜ್ವರ ಬಾಧೆಯಿಂದ ಬಳಲುತ್ತಿರುವುದರಿಂದ ಕಂಗಾಲಾಗಿರುವ ಪಾಲಕರು ಆಸ್ಪತ್ರೆಗೆ ದೌಡಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಗಲು ರಾತ್ರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ ಮಕ್ಕಳ ಆರೈಕೆಗೆ ಪರದಾಡುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ನೂರಾರು ಮಕ್ಕಳಿಗೆ ಚಿಕಿತ್ಸೆ ನೀಡಿದ ಶಿಗ್ಗಾವಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪಿ.ಎಚ್‌.ಹನುಮಂತಪ್ಪ ಅವರ ನೇತೃತ್ವದ ವೈದ್ಯರು, ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಳ್ಳುವ ಜ್ವರಕ್ಕೆ ಆತಂಕಕ್ಕೊಳಗಾಗಿದ್ದಾರೆ.

20 ಮಕ್ಕಳಿಗೆ ಚಿಕಿತ್ಸೆ: ಪ್ರಾಥಮಿಕ ಹಂತದ ಜ್ವರಕ್ಕೆ ಚಿಕಿತ್ಸೆ ನೀಡಿದ ವೈದ್ಯರು, ಡೆಂಗೆ ಜ್ವರದ ಶಂಕೆಯಿಂದ 20 ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಚ್ಛತೆ, ಸೊಳ್ಳೆ ಕಡೆತ ಜ್ವರಕ್ಕೆ ಕಾರಣವಾಗಿದೆ.

ಇನ್ನೊಂದೆಡೆ ಕಲುಷಿತ ನೀರು ಕುಡಿದು ವಾಂತಿ-ಬೇಧಿಯಿಂದ ಬಳಲುತ್ತಿರುವ ಸಾರ್ವಜನಿಕರು ಕೂಡ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಚಿಕಿತ್ಸೆ ನೀಡುವುದು ವೈದ್ಯ, ಸಿಬ್ಬಂದಿಗೆ ಸವಾಲಾಗಿದೆ. ಆಸ್ಪತ್ರೆಗೆ ಶಿಗ್ಗಾವಿ-ಸವಣೂರ, ಹಾವೇರಿ, ಮುಂಡಗೋಡ, ಹಾನಗಲ್‌ ತಾಲೂಕಿನ ರೋಗಿಗಳು ಆಗಮಿಸುತ್ತಿದ್ದಾರೆ.

ಕ್ರಮ ಕೈಗೊಳ್ಳದ ಪುರಸಭೆ: ಇನ್ನೊಂದೆಡೆ ಜುನ್‌-ಜುಲೈನಲ್ಲಿ ಎದುರಾಗುವ ಸಾಂಕ್ರಾಮಿಕ ರೋಗ ತಡೆಯಲು ಅನುಸರಿಸಬೇಕಿದ್ದ ಕ್ರಮದ ಬಗ್ಗೆ ಪುರಸಭೆ, ಗ್ರಾಪಂಗಳಿಗೆ ಆರೋಗ್ಯ ಇಲಾಖೆ ಪತ್ರ ಬರೆದಿದ್ದಾದರೂ ಅಧಿಕಾರಿಗಳು ಕ್ರಮವಹಿಸಿಲ್ಲ. ಹೀಗಾಗಿ ಅಲ್ಲಿಲ್ಲಿ ಕಸದ ರಾಶಿ, ತಗ್ಗು-ದಿನ್ನೆಗಳಲ್ಲಿ ನಿಲ್ಲುವ ನೀರು, ಕೊಳಚೆ ತುಂಬಿಕೊಂಡ ಚರಂಡಿಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ.

ಸೊಳ್ಳೆ ನಿಯಂತ್ರಣಕ್ಕೆ ಖರೀದಿಸಿದ್ದ ಫಾಗಿಂಗ್‌ ಮಷೀನ್‌ ಬಳಕೆ ಮಾಡದ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ ್ಯ, ಬೇಜವಾಬ್ದಾರಿಗೆ ತಾಲೂಕಿನ ಸಾರ್ವಜನಿಕರು ನೋವು ಅನುಭವಿಸುವಂತಾಗಿದೆ. ಜತೆಗೆ ಶುದ್ಧವಾದ ನೀರು ಕುಡಿಯಲು ಪೂರೈಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮಕೈಗೊಳ್ಳಬೇಕು.

ಸೊಳ್ಳೆ ನಿಯಂತ್ರಣ ಇಲ್ಲ: ತಾಲೂಕಿನಾದ್ಯಂತ ಬಹುತೇಕ ಶಾಲೆಗಳ ಸುತ್ತ ಸ್ವಚ್ಛತೆ ಇಲ್ಲದಾಗಿದ್ದು, ಸೊಳ್ಳೆಗಳ ತಾಣವಾಗಿವೆ. ಹೀಗಾಗಿ ಕೊಠಡಿಗಳಲ್ಲಿ ಸೊಳ್ಳೆ ಕಡಿತದಿಂದ ವಿದ್ಯಾರ್ಥಿಗಳು 'ಜ್ವರ'ಕ್ಕೆ ತುತ್ತಾಗುವಂತಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಮಷೀನ್‌ ಅಳವಡಿಸುವಂತೆ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿಗೆ ಪತ್ರ ಬರೆದಿದ್ದರೂ ಪರಿಣಾಮ ಶೂನ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ