ಆ್ಯಪ್ನಗರ

ಬೆಳೆಗೆ ಕೀಟಬಾಧೆ: ಕೃಷಿ ಅಧಿಕಾರಿಗಳ ಪರಿಶೀಲನೆ

ಹಾನಗಲ್ಲ :ಹಾನಗಲ್ಲ ತಾಲೂಕಿನಲ್ಲಿ ಇದೀಗ ಬಿತ್ತನೆ ಮಾಡಿದ ಗೋವಿನ ಜೋಳದ ಬೆಳೆಗೆ ಅಲ್ಲಲ್ಲಿ ಕಾಂಡಕೊರಕ ಹಾಗೂ ಸೈನಿಕ ಹುಳುವಿನ ಬಾಧೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕೀಟಬಾಧೆ ಕಂಡು ಬಂದ ಕೊಂಡೋಜಿ, ಹಿರೇಕಣಗಿ, ಕೊಪ್ಪರಸಿಕೊಪ್ಪ, ಚಿಕ್ಕೇರಿಹೊಸಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 30 Jun 2018, 5:00 am
ಹಾನಗಲ್ಲ :ಹಾನಗಲ್ಲ ತಾಲೂಕಿನಲ್ಲಿ ಇದೀಗ ಬಿತ್ತನೆ ಮಾಡಿದ ಗೋವಿನ ಜೋಳದ ಬೆಳೆಗೆ ಅಲ್ಲಲ್ಲಿ ಕಾಂಡಕೊರಕ ಹಾಗೂ ಸೈನಿಕ ಹುಳುವಿನ ಬಾಧೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕೀಟಬಾಧೆ ಕಂಡು ಬಂದ ಕೊಂಡೋಜಿ, ಹಿರೇಕಣಗಿ, ಕೊಪ್ಪರಸಿಕೊಪ್ಪ, ಚಿಕ್ಕೇರಿಹೊಸಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web insect crop the inspection of agricultural officials
ಬೆಳೆಗೆ ಕೀಟಬಾಧೆ: ಕೃಷಿ ಅಧಿಕಾರಿಗಳ ಪರಿಶೀಲನೆ


ಕಾಂಡಕೊರಕ ಬಾಧೆ : ಗೋವಿನಜೋಳ ಬೆಳೆಯಲ್ಲಿ ಒಂದೂವರೆ ತಿಂಗಳ ಬೆಳೆಗೆ ಕಾಂಡ ಕೊರಕದ ಬಾಧೆ ಕಂಡು ಬರುತ್ತದೆ. ಇದರ ನಿರ್ವಹಣೆಗೆ ಪ್ರತಿ ಹೆಕ್ಟೇರಿಗೆ ಪೋರೆಟ್‌ ಹರಳನ್ನು ಎಲೆ ಸುರಳಿಯಲ್ಲಿ ಹಾಕಬೇಕು ಕೀಟದ ಬಾಧೆ ಪುನಃ ಕಂಡು ಬಂದಲ್ಲಿ ಎರಡು ವಾರಗಳ ನಂತರ ಮತ್ತೊಮ್ಮೆ ಇದೇ ಕ್ರಮ ಅನುಸರಿಸಬೇಕು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದರು.

ಸೈನಿಕ ಹುಳು : ಸೈನಿಕ ಹುಳು ಸಣ್ಣಗೆ, ನಯವಾಗಿ ಕಳೆಗುಂದಿದ ಹಸಿರು ಬಣ್ಣದಿಂದ ಕೂಡಿದ್ದು ಮೈಮೇಲೆ ಅಡ್ಡ ಗೆರೆಗಳಿದ್ದು ಸುಮಾರು 1.5 ಇಂಚು ಉದ್ದ ಇರುತ್ತದೆ. ಸೈನಿಕ ಹುಳು ಗೋವಿನ ಜೋಳದ ಜೊತೆಗೆ ಶೇಂಗಾ, ಸೂರ್ಯಕಾಂತಿ ಹಾಗೂ ಭತ್ತದ ಬೆಳೆಗಳಿಗೂ ಸಹ ಹಾನಿಯುಂಟು ಮಾಡುತ್ತದೆ. ಇದರ ನಿರ್ವಹಣೆಗೆ ರೈತರು ವಿಷ ಆಹಾರ ತಯಾರಿಸಿ ಹೊಲದಲ್ಲಿ ಎರಚಬೇಕೆಂದು ಸಹಾಯಕ ಕೃಷಿ ನಿರ್ದೇಶಕ ವೈ.ಶ್ರೀಧರ ಸಲಹೆ ನೀಡಿದರು.

ವಿಷ ಆಹಾರ ತಯಾರಿಸುವ ವಿಧಾನ :

5 ಕೆಜಿ ಬೆಲ್ಲವನ್ನು ಪುಡಿ ಮಾಡಿ ನೀರಿನಲ್ಲಿ ಕರಗಿಸಬೇಕು, ಇದಕ್ಕೆ 625 ಮಿ.ಲೀ. ಮೊನೊಕ್ರೋಟೊಫಾಸ್‌-36 ಎಸ್‌.ಎಲ್‌ ದ್ರಾವಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ 50 ಕೆಜಿ ಭತ್ತದ ತೌಡು (ಹೊಟ್ಟು) ಸೇರಿಸಿ ಗಾಳಿಯಾಡದಂತೆ 24 ತಾಸು ಕಳಿಯಲು ಬಿಡಬೇಕು. ಈ ರೀತಿ ತಯಾರಿಸಿದ ವಿಷ ಆಹಾರವನ್ನು ಸಂಜೆ 4ರ ನಂತರ ಪ್ರತಿ ಹೆಕ್ಟೇರ್‌ಗೆ 50 ಕೆಜಿಯಂತೆ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು. ಇದಲ್ಲದೇ ಇಮಾಮೆಕ್ಟಿನ್‌ ಬೆಂಜೊಯಟ್‌ 0.2 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಕೀಟ ನಿಯಂತ್ರಣ ಮಾಡಬಹುದಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಭೇಟಿ ಸಂದರ್ಭದಲ್ಲಿ ರೈತರಾದ ಮಲ್ಲೇಶಪ್ಪ ಬುಡ್ಡನವರ, ಫಕ್ಕಿರಪ್ಪ ತೆಪ್ಪದ, ಹನುಮಂತಪ್ಪ ಗೊಲ್ಲರ, ಕೃಷಿ ಅಧಿಕಾರಿ ಸಂಗಮೇಶ ಹಕ್ಕಲಪ್ಪನವರ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ