ಆ್ಯಪ್ನಗರ

ಗ್ರಾಪಂ ಮಟ್ಟದಲ್ಲಿ ಆಧಾರ್‌ ತಿದ್ದುಪಡಿಗೆ ಒತ್ತಾಯ

ಹಾನಗಲ್ಲ: ಆಧಾರ್‌ ಕಾರ್ಡ್‌ ತಿದ್ದುಪಡಿ ಕೇಂದ್ರಗಳನ್ನು ಗ್ರಾಮೀಣ ಭಾಗದಲ್ಲಿತೆರೆಯುವಂತೆ ಒತ್ತಾಯಿಸಿ ಶುಕ್ರವಾರ ಪ್ರಗತಿ ಲೊಯೋಲಾ ವಿಕಾಸ ಕೇಂದ್ರದಿಂದ ತಹಸೀಲ್ದಾರ್‌ರಿಗೆ ಮನವಿಪತ್ರ ಸಲ್ಲಿಸಲಾಯಿತು.

Vijaya Karnataka 28 Dec 2019, 5:00 am
ಹಾನಗಲ್ಲ: ಆಧಾರ್‌ ಕಾರ್ಡ್‌ ತಿದ್ದುಪಡಿ ಕೇಂದ್ರಗಳನ್ನು ಗ್ರಾಮೀಣ ಭಾಗದಲ್ಲಿತೆರೆಯುವಂತೆ ಒತ್ತಾಯಿಸಿ ಶುಕ್ರವಾರ ಪ್ರಗತಿ ಲೊಯೋಲಾ ವಿಕಾಸ ಕೇಂದ್ರದಿಂದ ತಹಸೀಲ್ದಾರ್‌ರಿಗೆ ಮನವಿಪತ್ರ ಸಲ್ಲಿಸಲಾಯಿತು.
Vijaya Karnataka Web 27HGL2_23
ಹಾನಗಲ್ಲತಾಲೂಕಿನ ಗ್ರಾಮೀಣ ಭಾಗದಲ್ಲಿಆಧಾರ ಕಾರ್ಡ್‌ ತಿದ್ದುಪಡಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಲೊಯೋಲಾ ಕೇಂದ್ರದಿಂದ ಮನವಿಪತ್ರ ಸಲ್ಲಿಸಲಾಯಿತು.


ಈಗ ಸರಕಾರದ ಪ್ರತಿಯೊಂದು ಯೋಜನೆಯ ಸೌಲಭ್ಯ ಪಡೆಯಲು ಆಧಾರ ಕಾರ್ಡ್‌ ಕಡ್ಡಾಯವಾಗಿದೆ. ಗ್ರಾಮೀಣ ಭಾಗದಿಂದ ತಾಲೂಕು ಕೇಂದ್ರಕ್ಕೆ ಅಲೆದಾಡುವ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕು ಕೇಂದ್ರವಾದ ಹಾನಗಲ್ಲನಲ್ಲಿ4 ಆಧಾರ ತಿದ್ದುಪಡಿ ಕೇಂದ್ರಗಳಿವೆ. ತಾಲೂಕಿನಲ್ಲಿನ ಶೇ 90 ರಷ್ಟು ಕಾರ್ಮಿಕರ ಮೊಬೈಲ್‌ ನಂಬರ್‌ ಆಧಾರ್‌ಗೆ ಲಿಂಕ್‌ ಆಗಿಲ್ಲ.

ಪ್ರತಿ ಕೇಂದ್ರದಲ್ಲಿಒಂದು ದಿನಕ್ಕೆ ಸುಮಾರು 20 ಆಧಾರ ಕಾರ್ಡುಗಳ ತಿದ್ದುಪಡಿ ನಡೆಯುತ್ತದೆ. ಕೂಲಿ ಕೆಲಸ ಬಿಟ್ಟು ವಾರಗಟ್ಟಲೇ ಆಧಾರ ತಿದ್ದುಪಡಿಗಾಗಿ ಕಾರ್ಮಿಕರು ಅಲೆದಾಡುವ ಪರಿಸ್ಥಿತಿ ಇದೆ. ಹೀಗಾಗಿ ಪ್ರತಿ ಗ್ರಾ.ಪಂ ಮಟ್ಟದಲ್ಲಿಆಧಾರ ಕಾರ್ಡ್‌ ತಿದ್ದುಪಡಿ ಕೇಂದ್ರ ಆರಂಭಿಸಬೇಕು ಎಂದು ಮನವಿಪತ್ರದಲ್ಲಿಒತ್ತಾಯಿಸಲಾಗಿದೆ.

ಸುರೇಶ ಸಕನಳ್ಳಿ, ಹರೀಶ ಆರ್‌, ಪದ್ಮಾವತಿ ಮಾಂಗ್ಲೇನವರ, ಪಾರ್ವತೆವ್ವ ನಾಗೋಜಿ, ಅರ್ಜುನ ಗೊಲ್ಲರ, ಅಬ್ದುಲ್‌ರಶೀದ್‌ ಬಸರಿಕಟ್ಟಿ, ಮಮತಾ ನಿಕ್ಕಮ್ಮನವರ, ಪ್ರೇಮಾ ಜಾಧವ, ಸಮೀರ್‌ ಅಗಸಿಮನಿ, ಮರಿಯಪ್ಪ ಗುಂಗಸೂರ, ಸಹದೇವ ಉಗ್ಗನವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ