ಆ್ಯಪ್ನಗರ

ಶಿಕ್ಷ ಕರ ಮುಂಬಡ್ತಿಗೆ ಅವಕಾಶ ನೀಡಲು ಒತ್ತಾಯ

ಹಾನಗಲ್ಲ : ಸೇವಾ ನಿರತ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷ ಕರಿಗೆ ಮುಂಬಡ್ತಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಶನಿವಾರ ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್‌.ಶ್ರೀನಿವಾಸ ಅವರ ಮೂಲಕ ಸರಕಾರಿ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷ ಕರು ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.

Vijaya Karnataka 2 Jun 2019, 5:00 am
ಹಾನಗಲ್ಲ : ಸೇವಾ ನಿರತ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷ ಕರಿಗೆ ಮುಂಬಡ್ತಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಶನಿವಾರ ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್‌.ಶ್ರೀನಿವಾಸ ಅವರ ಮೂಲಕ ಸರಕಾರಿ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷ ಕರು ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.
Vijaya Karnataka Web HVR-01HGL1
ಹಾನಗಲ್ಲನಲ್ಲಿ ಶನಿವಾರ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷ ಕರು ತಮಗೆ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್‌. ಶ್ರೀನಿವಾಸ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.


2014 ಕ್ಕಿಂತ ಮೊದಲು ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷ ಕರನ್ನು 1 ರಿಂದ 5 ನೇ ತರಗತಿಗೆ ಸಿಮಿತಗೊಳಿಸಿ ಸರಕಾರ ಆದೇಶ ನೀಡಿರುವುದು ಪದವಿಧರ ಶಾಲಾ ಶಿಕ್ಷ ಕರಿಗೆ ಅನ್ಯಾಯ ಎಸಗಿದಂತಾಗಿದೆ. ಆದರೆ ನಾವು 1 ರಿಂದ 7 ನೇ ತರಗತಿ ಶಿಕ್ಷ ಕರು ಎಂದು ನೇಮಕಗೊಂಡಿದ್ದೇವೆ. ಉನ್ನತೀಕರಿಸಿದ ಶಾಲೆಗಳಲ್ಲಿ 8 ನೇ ವರ್ಗವನ್ನು ಬೋಧಿಸುತ್ತಿದ್ದೇವೆ. ಸೇವಾ ನಿರತ ಪದವಿಧರ ಶಿಕ್ಷ ಕರಿಗೆ ವೇತನ ಶ್ರೇಣಿ ನಿಗದಿಪಡಿಸಿ, 6 ರಿಂದ 8 ನೇ ವರ್ಗದ ಬೋಧನೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಾಥಮಿಕ ಶಾಲಾ ಪದವಿಧರ ಶಿಕ್ಷ ಕರಾದ ವಿಜಯೇಂದ್ರ ಯತ್ನಳ್ಳಿ, ಬಿ.ಎಸ್‌.ಚಲ್ಲಾಳ, ವಾಗೀಶ ಆರಾಧ್ಯಮಠ, ಎಂ.ಎಸ್‌.ಬಡಿಗೇರ, ಎ.ವೈ.ಕಿತ್ತೂರ, ಪ್ರಭಾವತಿ, ಜಿ.ಬಿ.ಚಿಕ್ಕೇರಿ, ಗುರುರಾಜ ಶಿರಬಂಗಿ, ಎಂ.ಎ.ಜಾಗಿರದಾರ್‌, ಎನ್‌.ವಿ.ಅಗಸನಹಳ್ಳಿ, ನಾಗರಾಜ ಬಂಡಿವಡ್ಡರ, ಎಸ್‌.ಎಂ.ದೊಡ್ಡಮನಿ, ಶಂಕರ.ಜಿ.ಕೆ, ಕುಮಾರ ಗೋಣಿಮಠ, ರವಿ ಅಂತರವಳ್ಳಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ