ಆ್ಯಪ್ನಗರ

ಮದಗದ ಕೆರೆ, ಎಲಿವಾಳ ಸೇತುವೆ ಪರಿಶೀಲನೆ

ರಟ್ಟೀಹಳ್ಳಿ: ತುಂಬಿ ತುಳುಕುತ್ತಿರುವ ತಾಲೂಕಿನ ಮದಗ ಮಾಸೂರು ಕೆರೆಗೆ ಹಾಗೂ ಮುಳುಗಡೆಯಾದ ತಾಲೂಕಿನ ಎಲಿವಾಳ ಸೇತುವೆ ಸ್ಥಳಕ್ಕೆ ಮಾಜಿ ಶಾಸಕ ಯು.ಬಿ.ಬಣಕಾರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 9 Aug 2019, 5:00 am
ರಟ್ಟೀಹಳ್ಳಿ: ತುಂಬಿ ತುಳುಕುತ್ತಿರುವ ತಾಲೂಕಿನ ಮದಗ ಮಾಸೂರು ಕೆರೆಗೆ ಹಾಗೂ ಮುಳುಗಡೆಯಾದ ತಾಲೂಕಿನ ಎಲಿವಾಳ ಸೇತುವೆ ಸ್ಥಳಕ್ಕೆ ಮಾಜಿ ಶಾಸಕ ಯು.ಬಿ.ಬಣಕಾರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web inspection of mud lake elephant bridge
ಮದಗದ ಕೆರೆ, ಎಲಿವಾಳ ಸೇತುವೆ ಪರಿಶೀಲನೆ


ಮದಗ ಮಾಸೂರು ಕೆರೆ ಆವರಣದಲ್ಲಿ ಮಾಜಿ ಶಾಸಕ ಯು.ಬಿ.ಬಣಕಾರ ಮಾತನಾಡಿ, ಬುಧವಾರ ಮದಗದ ಕೆರೆ ತುಂಬಿದ್ದು ಕೆರೆ ಕೋಡಿ ಮೂಲಕ ಕುಮದ್ವತಿ ನದಿಗೆ ನೀರು ಬಂದಿದೆ. ಮಳೆ ವಿಳಂಬವಾದರೂ ಕೆರೆ, ನದಿ ತುಂಬಿ ಹರಿಯುತ್ತಿವೆ. ತಾಲೂಕಿನ ಹಳ್ಳಿಗಳ ರೈತರು ಮುಂದೆ ಉತ್ತಮ ಬೆಳೆ ಬೆಳೆಯುವುದಕ್ಕೆ ಅನುಕೂಲವಾಗಲಿದೆ ಎಂದರು.

ಈಗಾಗಲೇ ಮದಗ ಮಾಸೂರು ಕೆರೆಯ ಅಭಿಯಂತರ ಜತೆಗೆ ಮಾತನಾಡಿ ಎಡದಂಡ ಮತ್ತು ಬಲದಂಡೆ ಕಾಲುವೆಗಳನ್ನು ಸಂಪೂರ್ಣ ಸಿದ್ಧತೆ ಮಾಡಿಕೊಂಡು ಮುಂದೆ ನೀರು ಬಿಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಎಡದಂಡೆ, ಬಲದಂಡೆ ಕಾಲುವೆಯಲ್ಲಿ ಜಂಗಲ್‌ ಕಟಾವ್‌ ಮಾಡುವುದಕ್ಕೆ ಹಾಗೂ ಕಾಲುವೆಯಲ್ಲಿನ ಹೂಳು ತೆಗೆಯುವುದಕ್ಕೆ ಆ ಪ್ರಸ್ತಾವನೆ ಸಿದ್ಧ ಮಾಡುವುದಕ್ಕೆ ಎಂಜನೀಯರ್‌ಗೂ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಮಂಗಳವಾರ ಅಥವಾ ಬುಧವಾರ ವರದಿ ನೀಡುವುದಾಗಿ ಹೇಳಿದ್ದಾರೆ. ವರದಿ ಬಂದ ಬಳಿಕ ಎಡದಂಡೆ, ಬಲದಂಡೆ ಕಾಲುವೆಯನ್ನು ದುರಸ್ಥಿಪಡೆಸುವುದಕ್ಕೆ ಮುಖ್ಯಮಂತ್ರಿ ಗಮನಕ್ಕೆ ತಂದು ಸಂಪೂರ್ಣ ಅಭಿವೃದ್ಧಿಪಡೆಸುವುದಕ್ಕೆ ಮುಂದಾಗಲಾಗುತ್ತದೆ ಎಂದರು.

ಸಾಹಿತಿ, ಮುಖಂಡ ನಿಂಗಪ್ಪ ಚಳಗೇರಿ, ಮುಖಂಡರಾದ ಮಲ್ಲಿಕಾರ್ಜುನ ಬುರಡಿಕಟ್ಟಿ, ಪ್ರಕಾಶ ದೇವಾಂಗದ, ಸುರೇಶ ಲಮಾಣಿ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ