ಆ್ಯಪ್ನಗರ

ಮೇವು ಪಡೆಯಲು ರೈತರಿಗೆ ಸೂಚನೆ

ಹಿರೇಕೆರೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಾನುವಾರುಗಳಿಗಾಗಿ ಮೇವು ಬ್ಯಾಂಕ್‌ ಸ್ಥಾಪನೆ ಮಾಡಿದ್ದು, ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿನ ರೈತರು ದೃಢೀಕರಣ ಪತ್ರ ನೀಡಿ ಮೇವು ಬ್ಯಾಂಕಿನಿಂದ ತಮ್ಮ ಜಾನುವಾರುಗಳಿಗೆ ಮೇವು ಪಡೆಯುವಂತೆ ತಹಸೀಲ್ದಾರ್‌ ಆರ್‌.ಎಚ್‌. ಭಾಗವಾನ್‌ ರೈತರಿಗೆ ಸೂಚನೆ ನೀಡಿದರು.

Vijaya Karnataka 16 Jul 2019, 5:00 am
ಹಿರೇಕೆರೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಾನುವಾರುಗಳಿಗಾಗಿ ಮೇವು ಬ್ಯಾಂಕ್‌ ಸ್ಥಾಪನೆ ಮಾಡಿದ್ದು, ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿನ ರೈತರು ದೃಢೀಕರಣ ಪತ್ರ ನೀಡಿ ಮೇವು ಬ್ಯಾಂಕಿನಿಂದ ತಮ್ಮ ಜಾನುವಾರುಗಳಿಗೆ ಮೇವು ಪಡೆಯುವಂತೆ ತಹಸೀಲ್ದಾರ್‌ ಆರ್‌.ಎಚ್‌. ಭಾಗವಾನ್‌ ರೈತರಿಗೆ ಸೂಚನೆ ನೀಡಿದರು.
Vijaya Karnataka Web HVR-15HKR 1


ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕಂದಾಯ ಇಲಾಖೆ ಆಶ್ರಯದಲ್ಲಿ ಸ್ಥಾಪಿಸಿದ್ದ ಮೇವು ಬ್ಯಾಂಕ್‌ ಉದ್ಘಾಟಿಸಿ ಮಾತನಾಡಿ, ಎರಡೂ ತಾಲೂಕಿನ ರೈತರ ಜಾನುವಾರುಗಳಿಗೆ ಅನುಕೂಲವಾಗಲೆಂದು ಮೇವು ಬ್ಯಾಂಕನ್ನು ಸ್ಥಾಪನೆ ಮಾಡಲಾಗಿದೆ. ರೈತರು ಮೇವನ್ನು ಖರೀಧಿಸಲು ಬರುವಾಗ ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿರುವ ಪಶು ಆಸ್ಪತ್ರೆ ಹಾಗೂ ಪಶು ಚಿಕಿತ್ಸಾಲಯಗಳಿಂದ ದೃಢೀಕರಣ ಪತ್ರಗಳನ್ನು ಹಾಜರಪಡಿಸಿ ಮೇವು ಪಡೆಯುವಂತೆ ಮನವಿ ಮಾಡಿದರು.

ಒಂದು ಜಾನುವಾರಿಗೆ ದಿನಕ್ಕೆ 5ಕೆಜಿ.ಯಂತೆ ಒಂದು ವಾರಕ್ಕೆ 35ಕೆಜಿ.ಯಷ್ಟು ಮೇವನ್ನು ನೀಡಲಾಗುವುದು. ಖಾಲಿಯಾದ ನಂತರ ರೈತರು ಮತ್ತೆ ಮೇವನ್ನು ಪಡೆಯಬಹುದಾಗಿದೆ. 1ಕೆಜಿ ಮೇವಿಗೆ 2 ರೂ.ರೈತರು ಪಾವತಿಸಬೇಕು. ಮೇವು ಬ್ಯಾಂಕಿನಲ್ಲಿ ಈಗ 4ಟನ್‌400ಕೆಜಿಯಷ್ಟು ಮೇವನ್ನು ದಾಸ್ತಾನು ಮಾಡಲಾಗಿದೆ. ಪ್ರತಿದಿನ ಬೆಳಗ್ಗೆ 9ಗಂಟೆಯಿಂದ ಮದ್ಯಾಹ್ನ 1ಗಂಟೆವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ 5ಗಂಟೆ ವರೆಗೆ ಮೇವನ್ನು ವಿತರಿಸಲಾಗುವುದು. ಆದ್ದರಿಂದ ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿನ ಜಾನುವಾರುಗಳನ್ನು ಹೊಂದಿದ ರೈತರು ಮೇವನ್ನು ಪಡೆಯುವಂತೆ ರೈತರಿಗೆ ಮನವಿ ಮಾಡಿದರು. ತಾಲೂಕು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವೈದ್ಯ ಡಾ.ಎಲ್‌.ಕಿರಣ, ನಾಗರಾಜ ಕಟ್ಟಿಮನಿ, ಎಸ್‌.ಜಿ.ಅನೀಲಕುಮಾರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ