ಆ್ಯಪ್ನಗರ

ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಹಿರೇಕೆರೂರು: ತಾಲೂಕಿನ ಮಡ್ಲೂರು ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗಿದ್ದು, ಬುಧವಾರ ಶಾಸಕ ಬಿ.ಸಿ.ಪಾಟೀಲ್‌ ಕಾಮಗಾರಿ ನಡೆಯುವ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಿ 8ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Vijaya Karnataka 16 Jun 2019, 5:00 am
ಹಿರೇಕೆರೂರು: ತಾಲೂಕಿನ ಮಡ್ಲೂರು ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗಿದ್ದು, ಬುಧವಾರ ಶಾಸಕ ಬಿ.ಸಿ.ಪಾಟೀಲ್‌ ಕಾಮಗಾರಿ ನಡೆಯುವ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಿ 8ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Vijaya Karnataka Web instructions to complete the works within the period
ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ


ಬಳಿಕ ಮಾತನಾಡಿ, 38 ಕೋಟಿ ರೂ. ವೆಚ್ಚದಲ್ಲಿ ಈ ಭಾಗದ 56 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಈಗಾಗಲೆ ಭರದಿಂದ ಸಾಗಿವೆ. ಹಾನಗಲ್‌ ತಾಲೂಕು ಹೊಂಕಣ ಗ್ರಾಮದ ಬಳಿ ಹರಿದಿರುವ ವರದಾ ನದಿ ಮೂಲದಿಂದ ತಾಲೂಕಿನ ಕಚವಿ, ಮಡ್ಲೂರು, ಸಾತೇನಹಳ್ಳಿ, ದಾಸನಕೊಪ್ಪ, ಹಿರೇಕೋಣ್ತಿ, ಚಿಕ್ಕೋಣ್ತಿ, ಹಂಸಭಾವಿ, ಮುದ್ದಿನಕೊಪ್ಪ, ಚೊಗಚಿಕೊಪ್ಪ ಹಾಗೂ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ, ಚಿಕ್ಕಣಜಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಸುಮಾರು 56 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. 8 ಟಿಎಂಸಿ ನೀರನ್ನು ಕೆರೆಗಳಿಗೆ ತುಂಬಿಸಲು ಉಪಯೋಗಿಸಲಾಗುತ್ತಿದೆ. 23 ಕಿಮೀ. ಉದ್ದದ ಎಂ.ಎಸ್‌ ಪೈಪುಗಳನ್ನು ಹಾಕಲಾಗುವುದು ಹಾಗೂ 12ಕೀ.ಮಿ ಉದ್ದ ಎಚ್‌.ಡಿ ಪೈಪುಗಳನ್ನು ಅಳವಡಿಸಲಾಗುತ್ತಿದೆ. 645 ಎಚ್‌.ಪಿ. ಸಾಮರ್ಥ್ಯ‌ದ 3 ವಿದ್ಯುತ್‌ ಯಂತ್ರಗಳನ್ನು ಅಳವಡಿಸಿ ನೀರನ್ನು 600ಎಂ.ಎಂ, 550ಎಂ.ಎಂ, 400ಎಂ.ಎಂ ಹಾಗೂ 350ಎಂ.ಎಂ ಅಳತೆ ಹೊಂದಿದ ಪೈಪ್‌ಲೈನ್‌ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಹೇಳಿದರು.

ಮಳೆಗಾಲದ ಸಂದರ್ಭದಲ್ಲಿ ನದಿ ಮೂಲಕ ಹರಿದು ಹೋಗುವ ನೀರನ್ನು ಈ ಯೋಜನೆಯ ಮೂಲಕ 56 ಕೆರೆಗಳಿಗೆ ತುಂಬಿಸಲಾಗುವುದು. ಇದರಿಂದ ಆಯಾ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳ ಆಗುವ ಮೂಲಕ ಜನಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಿದಂತಾಗುತ್ತದೆ. ಅಷ್ಟೆ ಅಲ್ಲದೆ ಕೆರೆ ಮೂಲಗಳಿಂದ ರೈತರು ತಮ್ಮ ಹೊಲಗದ್ದೆಗಳಿಗೆ ನೀರು ಹಾಯಿಸಿಕೊಂಡು ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು.

ಈ ಯೋಜನೆಯ ಕಾಮಗಾರಿಗಳು ಇನ್ನೇನು 8-10ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ನಂತರ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅರ್ಪಿಸಲಾಗುವುದು ಎಂದು ಹೇಳಿದರು. ಎಪಿಎಂಸಿ ನಿರ್ದೇಶಕ ಸಿದ್ದಪ್ಪ ಹಂಪಣ್ಣನವರ, ದೊಡ್ಡಗೌಡ ಪಾಟೀಲ್‌, ಹೊಳಬಸಪ್ಪ ಗೋಪಕ್ಕಳಿ, ಸೋಮು ಕರಡೇರ, ಗೋಪಿ ನಿಟ್ಟೂರು, ಬಸನಗೌಡ ಸೂಡಂಬಿ, ದಾದಾಫೀರ್‌ ಸುಂಕದ, ರವಿ ಬಾರ್ಕಿ, ಕೊಟ್ರಗೌಡ ಹಳ್ಳೂರು, ಚಂದ್ರಗೌಡ ಹಳ್ಳೂರು, ಸಾಬ್ಜು ಹಿರೇಕೆರೂರು, ಹುಚ್ಚಪ್ಪ ಬಿಷ್ಟಪ್ಪನವರ, ನಾಗಪ್ಪ ಹಂಪಣ್ಣನವರ, ಬಸವರಾಜ ಮಡಿವಾಳರ, ರೆಹಮಾನ್‌ ನಿಟ್ಟೂರು, ದಾದಾಫೀರ್‌ ರಾಣೇಬೆನ್ನೂರು, ಮಲ್ಲೇಶಪ್ಪ ಲಮಾಣಿ, ಚಿನ್ನಪ್ಪ ಲಮಾಣಿ, ಡಾ.ವೀರಭದ್ರಪ್ಪ ಅತ್ತಿಕಟ್ಟಿ, ನಿಂಭಣ್ಣ ತಳವಾರ, ಕರ್ನಾಟಕ ನೀರಾವರಿ ನಿಗಮದ ಅಭಿಯಂತ ಕುಮಾರಸ್ವಾಮಿ, ಜೆ.ರವಿಕುಮಾರ, ಮಹೇಂದ್ರ ಹಾಗೂ ರೈತರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ