ಆ್ಯಪ್ನಗರ

ಹಿಂಗಾರು ಮಾವು ಬೆಳೆಗೆ ವಿಮೆ

ಹಾವೇರಿ: 2020-21ನೇ ಸಾಲಿನಲ್ಲಿಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ(ಆರ್‌.ಡಬ್ಲೂ.ಸಿ.ಐಎಸ್‌) ಹಿಂಗಾರು ಹಂಗಾಮಿನ ಮಾವು ಬೆಳೆಗೆ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದ್ದು ರೈತರು ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

Vijaya Karnataka 15 Oct 2020, 5:00 am
ಹಾವೇರಿ: 2020-21ನೇ ಸಾಲಿನಲ್ಲಿಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ(ಆರ್‌.ಡಬ್ಲೂ.ಸಿ.ಐಎಸ್‌) ಹಿಂಗಾರು ಹಂಗಾಮಿನ ಮಾವು ಬೆಳೆಗೆ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದ್ದು ರೈತರು ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
Vijaya Karnataka Web insurance for the mango crop
ಹಿಂಗಾರು ಮಾವು ಬೆಳೆಗೆ ವಿಮೆ


ಬ್ಯಾಡಗಿ, ಹಾವೇರಿ, ಹಾನಗಲ್‌, ಹಿರೇಕೆರೂರ, ರಾಣೇಬೆನ್ನೂರ, ಶಿಗ್ಗಾವಿ ಹಾಗೂ ಸವಣೂರ ತಾಲೂಕಿನ ಹಿಂಗಾರು ಹಂಗಾಮಿನ ಮಾವು(ಎನ್‌.ಎಸ್‌) ಬೆಳೆಯ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ 80 ಸಾವಿರ ರೂ. ಮತ್ತು ಸಾಮಾನ್ಯ ವಿಮಾ ಕಂತು 4 ಸಾವಿರ ರೂ. ಇರುತ್ತದೆ. ನವೆಂಬರ್‌ 15 ರೊಳಗೆ ನೋಂದಾಯಿಸಿಕೊಳ್ಳಬೇಕು.

ರೈತರು ತಮ್ಮ ಜಮೀನಿನ ಪಹಣಿ ಪತ್ರ, ಖಾತೆ ಪುಸ್ತಕ, ಪಾಸ್‌ ಬುಕ್‌, ಕಂದಾಯ ರಶೀದಿ ಮತ್ತು ಆಧಾರ್‌ ದಾಖಲೆಗಳನ್ನು ನಿಡಬೇಕು. ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ವಿಮೆ ಪಾವತಿಸಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಯಲ್ಲಿಮತ್ತು ಸಹಕಾರಿ ಸಂಘಗಳನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ಹತ್ತಿರದ ಬ್ಯಾಂಕ್‌ ಶಾಖೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ವಿಮೆಗೆ ನೊಂದಾಯಿಸಿಕೊಳ್ಳಬೇಕೆಂದು ಮಾವು ಬೆಳೆಗಾರರಿಗೆ ಜಿಲ್ಲಾತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಪ್ರದೀಪ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ