ಆ್ಯಪ್ನಗರ

ಬ್ಯಾಡಗಿಗೆ ಇಂಟರ್‌ಸಿಟಿ ಗರಿ

ಬ್ಯಾಡಗಿ: ಪಟ್ಟಣದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಇಂಟರ್‌ಸಿಟಿ ರೈಲು ನಿಲುಗಡೆ ಹೋರಾಟಕ್ಕೆ ಕೊನೆಗೂ ಜಯ ದೊರೆತಿದ್ದು, ಇಲ್ಲಿನ ರೈಲು ನಿಲ್ದಾಣದಲ್ಲಿ ಮಂಗಳವಾರ ಮೊದಲ ಬಾರಿಗೆ ರೈಲು ನಿಲುಗಡೆಯಾಗುತ್ತಿದ್ದಂತೆ ಸಾರ್ವಜನಿಕರ ಹರ್ಷ ಇಮ್ಮಡಿಯಾಯಿತು.

Vijaya Karnataka 20 Feb 2019, 5:00 am
ಬ್ಯಾಡಗಿ: ಪಟ್ಟಣದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಇಂಟರ್‌ಸಿಟಿ ರೈಲು ನಿಲುಗಡೆ ಹೋರಾಟಕ್ಕೆ ಕೊನೆಗೂ ಜಯ ದೊರೆತಿದ್ದು, ಇಲ್ಲಿನ ರೈಲು ನಿಲ್ದಾಣದಲ್ಲಿ ಮಂಗಳವಾರ ಮೊದಲ ಬಾರಿಗೆ ರೈಲು ನಿಲುಗಡೆಯಾಗುತ್ತಿದ್ದಂತೆ ಸಾರ್ವಜನಿಕರ ಹರ್ಷ ಇಮ್ಮಡಿಯಾಯಿತು.
Vijaya Karnataka Web intercity feather to badge
ಬ್ಯಾಡಗಿಗೆ ಇಂಟರ್‌ಸಿಟಿ ಗರಿ


ಅಂತಾರಾಷ್ಟ್ರೀಯ ಮಾರುಕಟ್ಟೆ ಖ್ಯಾತಿಯ ಬ್ಯಾಡಗಿಗೆ ವೇಗದ ರೈಲು ಮಾತ್ರ ಮರೀಚಿಕೆಯಾಗಿಯೇ ಉಳಿದಿತ್ತು. ಇಂಟರ್‌ಸಿಟಿ ನಿಲುಗಡೆಗಾಗಿ ರೈಲ್ವೆ ಹೋರಾಟ ಸಮಿತಿ ಸ್ಥಾಪಿಸಿ 12 ವರ್ಷಗಳಿಂದ ಹೋರಾಟ ನಡೆಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಬ್ಯಾಡಗಿಗೆ ಇಂಟರ್‌ಸಿಟಿ ನಿಲುಗಡೆಯಾಗಿರಲಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೂ ನಿಲುಗಡೆಗೆ ಅಡ್ಡಿಯಾಗಿತ್ತು ಎಂಬುದು ಸಾರ್ವಜನಿಕರ ಆರೋಪವಾಗಿತ್ತು.

ಹೋರಾಟಗಾರರ ಹರ್ಷೋದ್ಘಾರ: ಎಲ್ಲ ಹೋರಾಟದ ಫಲವಾಗಿ ಫೆ.19 ರಂದು ಬೆಳಗ್ಗೆ 7.15ಕ್ಕೆ ಪಟ್ಟಣದಲ್ಲಿ ಸಿದ್ಧಗಂಗಾ ಇಂಟರ್‌ಸಿಟಿ ರೈಲು ನಿಲ್ಲಲಿದೆ ಎಂದು ಈ ಹಿಂದೆಯೇ ಸಂಸದ ಶಿವಕುಮಾರ ಉದಾಸಿ ಸಂತಸ ಹಂಚಿಕೊಂಡಿದ್ದರು.

ಈ ನಿಟ್ಟಿನಲ್ಲಿ ಮಂಗಳವಾರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ ಸಾವಿರಾರು ಸಾರ್ವಜನಿಕರು ಮತ್ತು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ರೈಲು ಬರುವದನ್ನೇ ಕಾಯುತ್ತಾ ಕುಳಿತಿದ್ದರು. ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ಅವರೆಲ್ಲರ ಹರ್ಷೋದ್ಘಾರ ಮುಗಿಲು ಮುಟ್ಟಿತು. ನಿರಂತರ ಹೋರಾಟಕ್ಕೆ ಸಿಕ್ಕ ಜಯದ ಖುಷಿ ಎಲ್ಲರ ಮುಖದಲ್ಲೂ ಕಾಣುತ್ತಿತ್ತು.

ವಧುವಿನಂತೆ ಸಿಂಗಾರ: ನಿಲ್ದಾಣದಲ್ಲಿ ನಿಲುಗಡೆಯಾದ ಸಿದ್ಧಗಂಗಾ ಇಂಟರ್‌ಸಿಟಿ ರೈಲನ್ನು ಸಾರ್ವಜನಿಕರು ಹೂಮಾಲೆಗಳಿಂದ ವಧುವಿನಂತೆ ಸಿಂಗಾರ ಮಾಡಿ ಸಿಹಿ ಹಂಚಿದರಲ್ಲದೇ ರೈಲಿನ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.

ಹಾವೇರಿಯಲ್ಲಿ ಸಂಪರ್ಕ ಕ್ರಾಂತಿ: ಹಾವೇರಿ ರೈಲ್ವೆ ನಿಲ್ದಾಣದಲ್ಲೂ ಫೆ.19 ರಿಂದ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್‌ ನಿಲುಗಡೆಯಾಗಲಿದ್ದು ಸುತ್ತಮುತ್ತಲಿನ ಜನತೆಯ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ