ಆ್ಯಪ್ನಗರ

ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ

ಹಾವೇರಿ: ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿಶುಕ್ರವಾರ ಬಚಪನ್‌ ಬಚಾವೋ ಆಂದೋಲನ, ನವದೆಹಲಿ, ಹಾಗೂ ಆಶಾಕಿರಣ ರೂರಲ್‌ ಡೆವಲಪಮೆಂಟ ಸೊಸೈಟಿ (ರಿ) ಚಿಕ್ಕಮಗದೂರ ಆಶ್ರಯದಲ್ಲಿ'ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ' ಪ್ರಯುಕ್ತ ಜಾಗೃತಿ ಜಾಥಾ ಜರುಗಿತು.

Vijaya Karnataka 12 Oct 2019, 5:00 am
ಹಾವೇರಿ: ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿಶುಕ್ರವಾರ ಬಚಪನ್‌ ಬಚಾವೋ ಆಂದೋಲನ, ನವದೆಹಲಿ, ಹಾಗೂ ಆಶಾಕಿರಣ ರೂರಲ್‌ ಡೆವಲಪಮೆಂಟ ಸೊಸೈಟಿ (ರಿ) ಚಿಕ್ಕಮಗದೂರ ಆಶ್ರಯದಲ್ಲಿ'ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ' ಪ್ರಯುಕ್ತ ಜಾಗೃತಿ ಜಾಥಾ ಜರುಗಿತು.
Vijaya Karnataka Web international girl child day
ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ


ನಾಗೇಂದ್ರನಮಟ್ಟಿಯಿಂದ ಜಾಥಾ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿಸಂಚರಿಸಿ ತಹಸೀಲ್ದಾರ ಕಚೇರಿಗೆ ಬಂದು ತಲುಪಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಆಶಾಕಿರಣ ಸಂಸ್ಥೆಯ ಅಧ್ಯಕ್ಷ ಮುತ್ತುರಾಜ ಮಾದರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಜಗತ್ತಿನಾದ್ಯಂತ ಪ್ರತಿವರ್ಷ ಅಕ್ಟೋಬರ್‌ 11ರಂದು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನಾಗಿ ಆಚರಿಸಲಾಗಿದೆ. ಈ ದಿನದ ಉದ್ದೇಶ ಹೆಣ್ಣು ಮಕ್ಕಳ ಸಶಕ್ತಿಕರಣ ಮತ್ತು ಹೆಣ್ಣು ಮಕ್ಕಳಿಗಿರುವ ಮಾನವ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿಎದುರಿಸುತ್ತಿರುವ ಸವಾಲುಗಳನ್ನು ಹಾಗೂ ಅದರ ಅಗತ್ಯತೆಗಳನ್ನು ಎಲ್ಲರಿಗೂ ತಿಳಿಸುವುದಾಗಿದೆ. ಶಾಲಾ ಶಿಕ್ಷಣ ಹೆಣ್ಣು ಮಕ್ಕಳ ಹಕ್ಕಾಗಿದ್ದು, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು 18 ವರ್ಷದವರೆಗೆ ಕಡ್ಡಾಯಗೊಳಿಸುವುದು ಅಗತ್ಯವಾಗಿದೆ ಎಂದರು.

ಜಾಥಾದಲ್ಲಿ'ಎಜ್ಟ್ಝಿs ಋa್ಟ್ಚh ಠಿಟ ಖ್ಚhಟಟ್ಝ' 'ಹೆಣ್ಣು ಮಕ್ಕಳ ನಡೆ ಶಾಲೆ ಕಡೆ' ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಮಕ್ಕಳೇ ಧ್ವನಿ ಎತ್ತಿ ಶಿಕ್ಷಣಕ್ಕಾಗಿ ಕೈಯೆತ್ತಿ, ಶಿಕ್ಷಣದಿಂದಲೇ ಹೆಣ್ಣು ಮಕ್ಕಳ ಶಸಕ್ತೀಕರಣ ಮುಂತಾದ ಘೋಷಣೆಗಳನ್ನು ಕೂಗುತ್ತಾ, ಪ್ರಮುಖ ಬೀದಿಗಳಲ್ಲಿಸಂಚರಿಸಿ ಅರಿವು ಮೂಡಿಸಿದರು.

ಶ್ರೀ ರೇಣುಕಾದೇವಿ ಸಂಸ್ಥೆಯ ಅಧ್ಯಕ್ಷೆ ಡಾ. ನಾಗರತ್ನಾ ಧಾರವಾಡಕರ, ಎ.ಪಿ.ಡಿ. ಸಂಸ್ಥೆಯ ಪುಷ್ಪಾ, ರಾಜೇಶ್ವರಿ ತೆರೆದ ತಂಗುದಾಣದ ಸಿಬ್ಬಂದಿ ಹಾಗೂ ಮಕ್ಕಳು ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಸಂಘದ ನಾಗರೀಕರು ಸೇರಿದಂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ