ಆ್ಯಪ್ನಗರ

ಶರಣಬಸವೇಶ್ವರ ಮಠದಲ್ಲಿ ಅಂತರ್ಜಾತಿ ವಿವಾಹ

ರಾಣೇಬೆನ್ನೂರ : ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಅಂತರ್ಜಾತಿಯ ವಿವಾಹ ನೆರವೇರಿಸುವ ಮೂಲಕ ತಾಲೂಕಿನ ಅರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರಮಠದ ಪ್ರಣವಾನಂದರಾಮಸ್ವಾಮಿಗಳು ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ.

Vijaya Karnataka 10 Aug 2020, 5:00 am
ರಾಣೇಬೆನ್ನೂರ : ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಅಂತರ್ಜಾತಿಯ ವಿವಾಹ ನೆರವೇರಿಸುವ ಮೂಲಕ ತಾಲೂಕಿನ ಅರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರಮಠದ ಪ್ರಣವಾನಂದರಾಮಸ್ವಾಮಿಗಳು ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ.
Vijaya Karnataka Web 9RNR3_23
ರಾಣೇಬೆನ್ನೂರ ತಾಲೂಕಿನ ಅರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರಮಠದಲ್ಲಿವಿವಾಹ ಬಂಧನಕ್ಕೆ ಒಳಗಾದ ನೂತನ ದಂಪತಿಗಳು.


ತಾಲೂಕಿನ ಮಾಕನೂರ ಗ್ರಾಮದ ಮರಾಠಾ ಸಮಾಜದ ಯುವಕ ಶಿವಮೂರ್ತಿ ಜಯಪ್ಪ ಮೂರೇ ಇವರ ಮದುವೆ ಚನ್ನಗಿರಿ ತಾಲೂಕಿನ ಗಂಗಾಮಾತಾ ಸಮಾಜದ ಕಾವ್ಯ ಕರಿಯಪ್ಪ ಸುಣಗಾರ ಜತೆ ಜರುಗಿತು. ಮದುವೆ ಸಮಾರಂಭದಲ್ಲಿವಧು-ವರರ ತಂದೆ, ತಾಯಿ ಮತ್ತು ಸಂಬಂಧಿಕರು ಭಾಗವಹಿಸಿದ್ದರು.

ಸಾನ್ನಿಧ್ಯ ವಹಿಸಿದ್ದ ಮಠದ ಡಾ.ಪ್ರಣವಾನಂದರಾಮಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಶ್ರೀಮಠ ನಡೆದುಕೊಂಡು ಬಂದಿದೆ. ಸಮಾಜದಲ್ಲಿಜಾತಿ ವಿಚಾರಗಳಿಗಿಂತ ಮನಸ್ಸಿನ ಹೊಂದಾಣಿಕೆ ತುಂಬಾ ಮುಖ್ಯ ಎಂದರು.

ಮೌನೇಶ್‌ ಹೊಳಿಯಪ್ಪ ತಳವಾರ, ಭೀಮಣ್ಣ ಚಿನ್ನಣ್ಣನವರ, ಮಂಜುನಾಥ ವಡ್ಡರ, ಗಾಳೆಪ್ಪ ಮರಿಯಮ್ಮನವರ, ಪ್ರಭುಗೌಡ ಮುದಿಗೌಡ್ರ ಹಾಗೂ ಮಠದ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ಮದುವೆಯಲ್ಲಿಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ