ಆ್ಯಪ್ನಗರ

ಸವಣೂರು ಸಮ್ಮೇಳನಾಧ್ಯಕ್ಷ ರಿಗೆ ಆಹ್ವಾನ

ಸವಣೂರು: 7ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ರಾಗಿ ಆಯ್ಕೆಗೊಂಡಿರುವ ಧಾರವಾಡ ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಎಸ್‌.ವಿ.ಅಯ್ಯನಗೌಡ್ರ ಅವರನ್ನು ತಾಲೂಕಿನ ಜೇಕಿನಕಟ್ಟಿ ಗ್ರಾಮದ ಸ್ವಗೃಹದಲ್ಲಿ ಭಾನುವಾರ ಕಸಾಪ ತಾಲೂಕ ಘಟಕದ ಪದಾಧಿಕಾರಿಗಳು ಸನ್ಮಾನಿಸಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಿದರು.

Vijaya Karnataka 26 Dec 2018, 5:00 am
ಸವಣೂರು: 7ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ರಾಗಿ ಆಯ್ಕೆಗೊಂಡಿರುವ ಧಾರವಾಡ ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಎಸ್‌.ವಿ.ಅಯ್ಯನಗೌಡ್ರ ಅವರನ್ನು ತಾಲೂಕಿನ ಜೇಕಿನಕಟ್ಟಿ ಗ್ರಾಮದ ಸ್ವಗೃಹದಲ್ಲಿ ಭಾನುವಾರ ಕಸಾಪ ತಾಲೂಕ ಘಟಕದ ಪದಾಧಿಕಾರಿಗಳು ಸನ್ಮಾನಿಸಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಿದರು.
Vijaya Karnataka Web invitation to the savanur conference
ಸವಣೂರು ಸಮ್ಮೇಳನಾಧ್ಯಕ್ಷ ರಿಗೆ ಆಹ್ವಾನ


2019ರ ಜ.9 ರಂದು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿರುವ ತಾಲೂಕ ಸಮ್ಮೇಳನ ಅಧ್ಯಕ್ಷ ಡಾ.ಎಸ್‌.ವಿ.ಅಯ್ಯನಗೌಡ್ರ ಸನ್ಮಾನ ಹಾಗೂ ಆಹ್ವಾನ ಸ್ವೀಕರಿಸಿ ಮಾತನಾಡಿ, ಸಾಹಿತ್ಯ ಹಾಗೂ ಸಂಗೀತದ ತವರೂರು ಆಗಿರುವ ಹಾವೇರಿ ಜಿಲ್ಲೆಯಲ್ಲಿ ಜನ್ಮ ಪಡೆದ ನಾವು ಪುಣ್ಯವಂತರು. ಕನ್ನಡ ಭಾಷೆಯನ್ನು ಜಾಗತೀಕರಣಗೊಳಿಸಲು ಮೂರು ಹಂತಗಳನ್ನು ಅಳವಡಸಿಕೊಳ್ಳುವದು ಅವಶ್ಯವಾಗಿದೆ. ಕನ್ನಡಿಗರು ಮಾತೃಭಾಷೆ ಅಭಿಮಾನ ಹೊಂದುವದು ಅವಶ್ಯ. ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ರನ್ನಾಗಿ ಆಯ್ಕೆಗೊಳಸಿದಕ್ಕಾಗಿ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಪ್ರಭು ಅರಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನ ಗೌರವಾಧ್ಯಕ್ಷ ಮೋಹನ ಮೆಣಸಿನಕಾಯಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಸಮ್ಮೇಳನ ಕಾರ್ಯಾಧ್ಯಕ್ಷ ಮಲ್ಲಾರಪ್ಪ ತಳ್ಳಿಹಳ್ಳಿ, ಪದಾಧಿಕಾರಿ ಗಂಗಾಧರ ಬಾಣದ, ಸಿ.ಎನ್‌. ಪಾಟೀಲ, ಎನ್‌.ಕೆ.ಪಾಟೀಲ, ಸಿ.ಎನ್‌.ಲಕ್ಕನಗೌಡ್ರ, ಬಸವನಗೌಡ ಕೊಪ್ಪದ, ಹರೀಷ ಕ್ಷೌರದ, ಸಿ.ಎಂ.ಕುಂದಗೋಳ, ಬಸವರಾಜ ಚಳ್ಳಾಳ, ಸಿ.ವಿ. ಗುತ್ತಲ, ವಿಶ್ವನಾಥ ಹಾವಣಗಿ, ಹಾಗೂ ಇತರರು ಪಾಲ್ಗೊಂಡಿದ್ದರು.

ಸರ್ವಾಧ್ಯಕ್ಷ ರ ಪರಿಚಯ: ಸಾಹಿತಿ ಡಾ.ಎಸ್‌.ವಿ.ಅಯ್ಯನಗೌಡ್ರ ಅವರು 1957ರ ಫೆ.22 ರಂದು ಜನಿಸಿದ್ದು, ಸವಣೂರ ತಾಲೂಕಿನ ಜೆಕೀನಕಟ್ಟಿ ಗ್ರಾಮದವರು. ಸಂಶೋಧಕರಾಗಿ ವಚನ ಸ್ವರ, ವಚನ ರಚನೆ, ಕವಿ, ವಿಮರ್ಶಕರಾಗಿ, ಆತ್ಮಚರಿತ್ರೆ, ಪ್ರವಾಸ ಕಥನ, ಗ್ರಂಥ ಸಂಪಾಕರು, ಅನುವಾದ, 12 ಎಂಪಿಲ್‌, 27 ಪಿಎಚ್‌ಡಿ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ, ಪತ್ರಿಕೆಗಳ ಸಂಪಾದಕರಾಗಿ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರಾಗಿ ಕಾರ್ಯ ಕೈಗೊಂಡಿದ್ದಾರೆ.

ಡಾ.ಎಂ.ಎಸ್‌. ಸುಂಕಾಪೂರ ಮಾರ್ಗದರ್ಶನದಲ್ಲಿ ಮೈಲಾರ ಬಸವಲಿಂಗ ಶರಣರ ಜೀವನ ಹಾಗೂ ಸಮಗ್ರ ಕೃತಿಗಳ ದರ್ಶನ ಎಂಬ ವಿಷಯದ ಮೇಲೆ 1983ರಲ್ಲಿ ಪಿಎಚ್‌ಡಿ ಪದವಿಯನ್ನು ಬಂಗಾರದ ಪದಕದೊಂದಿಗೆ ಪಡೆದಿದ್ದಾರೆ.

2006ರಲ್ಲಿ ಆಧುನಿಕ ಜಗತ್ತಿಗೆ ಬಸವೇಶ್ವರರ ಹೊಸ ಸಂದೇಶ ಸಂಶೋದಿತ ಕೃತಿಯನ್ನು ದೆಹಲಿ ಯುಜಿಸಿಗೆ ಸಲ್ಲಿಸಿದ ಹಿನ್ನಲೆಯಲ್ಲಿ 2007ರಲ್ಲಿ ದಿ ಬೆಸ್ಟ್‌ ಸಿಟಿಜನ್‌ ಆಫ್‌ ಇಂಡಿಯಾ ಪ್ರಶಸ್ತಿಯನ್ನು ಹಾಗೂ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ