ಆ್ಯಪ್ನಗರ

ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ: ಈಶ್ವರಪ್ಪ ಭರವಸೆ

ರಾಣೇಬೆನ್ನೂರ: ನೆರೆ ಪರಿಹಾರ ಕುರಿತು ಈಗಾಗಲೇ ಕೇಂದ್ರದ ಎರಡು ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಕೇಂದ್ರ ಸರಕಾರಕ್ಕೆ ವರದಿ ನೀಡಿವೆ. ಅದರ ಆಧಾರದ ಮೇರೆಗೆ ಕೇಂದ್ರ ಸರಕಾರ ಪರಿಹಾರ ಬಿಡುಗಡೆ ಮಾಡಲಿದ್ದು ಇದರಲ್ಲಿಯಾವುದೇ ಸಂಶಯವಿಲ್ಲಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Vijaya Karnataka 20 Sep 2019, 5:00 am
ರಾಣೇಬೆನ್ನೂರ: ನೆರೆ ಪರಿಹಾರ ಕುರಿತು ಈಗಾಗಲೇ ಕೇಂದ್ರದ ಎರಡು ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಕೇಂದ್ರ ಸರಕಾರಕ್ಕೆ ವರದಿ ನೀಡಿವೆ. ಅದರ ಆಧಾರದ ಮೇರೆಗೆ ಕೇಂದ್ರ ಸರಕಾರ ಪರಿಹಾರ ಬಿಡುಗಡೆ ಮಾಡಲಿದ್ದು ಇದರಲ್ಲಿಯಾವುದೇ ಸಂಶಯವಿಲ್ಲಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.
Vijaya Karnataka Web ishwarappa assures release from center
ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ: ಈಶ್ವರಪ್ಪ ಭರವಸೆ


ನಗರದ ಸಿದ್ಧು ಚಿಕ್ಕಬಿದರಿ ನಿವಾಸದಲ್ಲಿಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮೇಲಿನ ಇಡಿ ದಾಳಿಯಲ್ಲಿಕೇಂದ್ರ ಸರಕಾರದ ಯಾವುದೇ ಪಾತ್ರವಿಲ್ಲ. ಯಾರೇ ಆಗಲಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುವುದು ಸರಿಯಲ್ಲಎಂದರು.

ಆರ್ಟಿಕಲ್‌ 370ಅಡಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಸಂಗತಿಗೆ ಪಾಕಿಸ್ತಾನ ಸಮ್ಮತಿಸದಿದ್ದರೆ ಆ ದೇಶದ ಮೇಲೆ ಯುದ್ಧ ಸಾರಲಾಗುವುದು. ಕಾಶ್ಮೀರ ಕಣಿವೆಯಲ್ಲಿಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು ಕೇಂದ್ರ ಸರಕಾರ ಕೈಗೊಂಡ ಕ್ರಮಕ್ಕೆ ಅಲ್ಲಿನ ಜನತೆ ಸೇರಿದಂತೆ ದೇಶದ ಎಲ್ಲಾರಾಜ್ಯಗಳ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್ಟಿಕಲ್‌ 370ರಡಿ ನೀಡಲಾಗಿದ್ದ ಸ್ಥಾನಮಾನ ರದ್ದುಪಡಿಸಿದ್ದರಿಂದ ಒಂದೇ ದೇಶ ಒಂದೇ ಕಾನೂನು ಎಂಬ ನೀತಿ ಜಾರಿಗೆ ಬಂದಂತಾಗಿದೆ ಎಂದರು.

ಕಾರ್ಯಕರ್ತರ ಮನೆಗೆ ಭೇಟಿ : ಶಿಕ್ಷಣ ಸಚಿವ ಸುರೇಶಕುಮಾರ ಸರಕಾರಿ ಶಾಲೆಗಳಲ್ಲಿವಾಸ್ತವ್ಯ ಹೂಡುತಿದ್ದು ತಾವು ಕೂಡ ಗ್ರಾಪಂಗಳಲ್ಲಿವಾಸ್ತವ್ಯ ಮಾಡುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಂತಹ ವಿಚಾರವಿಲ್ಲ, ಕಾರ್ಯಕರ್ತರ ಮನೆಗೆ ಭೇಟಿ ನೀಡುವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ