ಆ್ಯಪ್ನಗರ

ಪರೀಕ್ಷೆ ಬಂದಾಗಷ್ಟೇ ಓದುವುದು ಸರಿಯಲ್ಲ

ಅಕ್ಕಿಆಲೂರು: ಆತ್ಮವಿಶ್ವಾಸ ಕಳೆದುಕೊಂಡರೆ ಯಾವ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಲು ಸಾಧ್ಯವಿಲ್ಲ. ಧ್ಯಾನಸ್ಥ ಓದು ಅತ್ಯಂತ ಅಗತ್ಯವಾಗಿದ್ದು, ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಮಾರಕ ಎಂದು ಸಮಾಜ ಕಲ್ಯಾಣ ಇಲಾಖೆಯ ತಾಲೂಕಾ ಅಧಿಕಾರಿ ಜಿ.ಬಿ.ಹಿರೇಮಠ ಅಭಿಪ್ರಾಯಪಟ್ಟರು.

Vijaya Karnataka 19 Jul 2019, 5:00 am
ಅಕ್ಕಿಆಲೂರು: ಆತ್ಮವಿಶ್ವಾಸ ಕಳೆದುಕೊಂಡರೆ ಯಾವ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಲು ಸಾಧ್ಯವಿಲ್ಲ. ಧ್ಯಾನಸ್ಥ ಓದು ಅತ್ಯಂತ ಅಗತ್ಯವಾಗಿದ್ದು, ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಮಾರಕ ಎಂದು ಸಮಾಜ ಕಲ್ಯಾಣ ಇಲಾಖೆಯ ತಾಲೂಕಾ ಅಧಿಕಾರಿ ಜಿ.ಬಿ.ಹಿರೇಮಠ ಅಭಿಪ್ರಾಯಪಟ್ಟರು.
Vijaya Karnataka Web just reading the test is not okay
ಪರೀಕ್ಷೆ ಬಂದಾಗಷ್ಟೇ ಓದುವುದು ಸರಿಯಲ್ಲ


ಇಲ್ಲಿನ ನರಸಿಂಗರಾವ್‌ ದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜೈಭೀಮ ಜನಪದ ಕಲಾಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆ ಅನುಭವ, ತಯಾರಿ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸುಲಭವಾಗಿ ಲಭ್ಯವಾಗುವ ಮನರಂಜನೆಗಳತ್ತ ತಮ್ಮ ಚಿತ್ತ ಹರಿಸುತ್ತಿದ್ದಾರೆ. ವಿದ್ಯಾರ್ಜನೆ ಸಮಯ ಹರಣ ಮಾಡುವಂಥÜದ್ದಲ್ಲ. ಕಳೆದ ಕಾಲ ಮರಳಿ ಬರಲಾರದು. ಅಧ್ಯಯನಕ್ಕಾಗಿ ಉತ್ತಮ ವಾತಾವರಣ ಸೃಷ್ಟಿಸಿಕೊಂಡು ಬದುಕಿನ ಯಶಸ್ಸಿಗಾಗಿ ಉತ್ತಮ ಓದಿಗೆ ವಿದ್ಯಾರ್ಥಿಗಳು ಮುಂದಾಬೇಕು. ಆದರೆ ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆ ದಿನಗಳು ಸಮೀಪಕ್ಕೆ ಬಂದಾಗ ಪುಸ್ತಕಗಳನ್ನು ಕಿತ್ತು ಹಾಕಿ, ಮಾನಸಿಕ ಗೊಂದಲಕ್ಕೆ ಒಳಗಾಗಿ, ಓದಿದ್ದೂ ಅರಿಯದಾಗಿ ಮನಸ್ಸನ್ನು ವ್ಯಗ್ರಗೊಳಿಸಿಕೊಳ್ಳವ ಸ್ಥಿತಿ ಸೃಷ್ಟಿಸಿಕೊಳ್ಳಬಾರದು. ಸಕಾಲಿಕವಾಗಿ ಅಧ್ಯಯನದತ್ತ ಚಿತ್ತ ಹರಿಸಿದರೆ ಮಾತ್ರ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಸಾಧ್ಯವಿದೆ ಎಂದರು.

ಉಪನ್ಯಾಸಕಿ ಶ್ರೀದೇವಿ ತೇರದಾಳ ಮಾತನಾಡಿ, ಶಾಲೆ ಒಂದು ದೇವಾಲಯವಿದ್ದಂತೆ, ಮಕ್ಕಳು ಇಲ್ಲಿ ಭಕ್ತಿ ಶ್ರದ್ಧೆಯಿಂದ ಅಧ್ಯಯನದಲ್ಲಿ ತೊಡಗಿದರೆ ಉತ್ತಮ ಪರೀಕ್ಷಾ ಫಲಿತಾಂಶದ ಮೂಲಕ ಸ್ವಾಸ್ಥ್ಯ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಪರೀಕ್ಷೆಯನ್ನು ಒಂದು ಆತಂಕವೆಂದು ಪರಿಭಾವಿಸಿ ವಿದ್ಯಾರ್ಥಿಗಳು ಮನಸ್ಸನ್ನು ವಿಕಾರಗೊಳಿಸಿಕೊಳ್ಳಬಾರದು ಎಂದರು.

ಉಪಪ್ರಾಚಾರ್ಯ ಆರ್‌.ಎಚ್‌.ಓಲೇಕಾರ ಮಾತನಾಡಿ, ಶಿಕ್ಷ ಕರ ಮಾರ್ಗದರ್ಶನವನ್ನು ಮನಸಾ ಪಾಲಿಸುವ ಮೂಲಕ ಮನಸ್ಸನ್ನು ಅರಳಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿಷಯಗಳನ್ನು ಕಠಿಣ-ಹಗುರ ಎಂದು ಪರಿಗಣಿಸಬಾರದು. ಸರಿಯಾಗಿ ಅರಿತರೆ ಎಲ್ಲ ವಿಷಗಳೂ ಸಹ ಹಗುರವಾಗಿಯೇ ಅರ್ಥವಾಗುವುದು. ಅದಕ್ಕಾಗಿ ಕಾಳಜಿಯ ಓದು ಅತ್ಯಂತ ಮುಖ್ಯ ಎಂದರು.

ಕಿರಣ ಹಾನಗಲ್‌ ಅಧ್ಯಕ್ಷ ತೆ ವಹಿಸಿದ್ದರು. ಆರ್‌.ಎಫ್‌.ಗಾಳೆಪ್ಪನವರ, ಮಂಜು ಕರ್ಜಗಿ, ರಾಘವೇಂದ್ರ ಸೇದಣ್ಣನವರ, ಪ್ರಕಾಶ್‌ ಕೋಡಿಕೊಪ್ಪ, ಅಕ್ಷ ಯ ಆಡೂರ, ಚನ್ನವೀರಪ್ಪ ಸೇದಣ್ಣನವರ, ಮೈಲಾರಿ ಸಂತೊಳ್ಳಿ, ಸಂತೋಷ್‌ ಚೌಡಣ್ಣನವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ