ಆ್ಯಪ್ನಗರ

ಕನಕದಾಸರನ್ನು ವಿಶ್ವಕ್ಕೆ ಪರಿಚಯಿಸಬೇಕು

ಬ್ಯಾಡಗಿ : ದಾಸಶ್ರೇಷ್ಠ ಕನಕದಾಸರ ಸಾಂಸ್ಕೃತಿಕ, ಪಾರಮಾರ್ಥಿಕ ಮತ್ತು ಸ್ವತಂತ್ರ ಮನೋಧರ್ಮಗಳು ಪ್ರಸ್ತುತ ಸಮಾಜಕ್ಕೆ ಅವಶ್ಯವಿದೆ. ಅವರ ಸಾಧನೆ ಎಲ್ಲಾ ಆಯಾಮಗಳಲ್ಲೂ ನಮಗೆ ಲಭ್ಯವಿದೆ. ಅವರನ್ನು ಭಾರತಕ್ಕಷ್ಟೇ ಸೀಮಿತಿಗೊಳಿಸದೇ ಇಡೀ ವಿಶ್ವಕ್ಕೆ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದು ಕನಕದಾಸ ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

Vijaya Karnataka 13 Jul 2019, 5:00 am
ಬ್ಯಾಡಗಿ : ದಾಸಶ್ರೇಷ್ಠ ಕನಕದಾಸರ ಸಾಂಸ್ಕೃತಿಕ, ಪಾರಮಾರ್ಥಿಕ ಮತ್ತು ಸ್ವತಂತ್ರ ಮನೋಧರ್ಮಗಳು ಪ್ರಸ್ತುತ ಸಮಾಜಕ್ಕೆ ಅವಶ್ಯವಿದೆ. ಅವರ ಸಾಧನೆ ಎಲ್ಲಾ ಆಯಾಮಗಳಲ್ಲೂ ನಮಗೆ ಲಭ್ಯವಿದೆ. ಅವರನ್ನು ಭಾರತಕ್ಕಷ್ಟೇ ಸೀಮಿತಿಗೊಳಿಸದೇ ಇಡೀ ವಿಶ್ವಕ್ಕೆ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದು ಕನಕದಾಸ ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web HVR-12BYD3A
ಕಾಗಿನೆಲೆಯಲ್ಲಿ 3 ದಿನಗಳ ನಡೆಯಲಿರುವ ಕನಕ-ಕಾವ್ಯ-ಕುಂಚ ಶಿಬಿರವನ್ನು ಕನಕದಾಸ ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಉದ್ಘಾಟಿಸಿದರು.


ತಾಲೂಕಿನ ಕಾಗಿನೆಲೆಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತ ಕವಿಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ 3 ದಿನಗಳ ನಡೆಯಲಿರುವ ಕನಕ-ಕಾವ್ಯ-ಕುಂಚ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಭಕ್ತಶ್ರೇಷ್ಠ ಕನಕದಾಸರ ಸಾಮಾಜಿಕ ನ್ಯಾಯದ ಸಮೀಕರಣ ಸರ್ವಕಾಲಕ್ಕೂ ಅನ್ವಯವಾಗಲಿದೆ,ಅವರ ನುಡಿಗಳಲ್ಲಿ ಮಾನವೀಯ ಸಂದೇಶಗಳು ಸಮಾಜದ ಮೇಲೆ ಹೆಚ್ಚು ಬೆಳಕನ್ನು ಚೆಲ್ಲಿದ್ದು, ಇದರಿಂದ ದಾರ್ಶನಿಕರ ಸನ್ಮಾರ್ಗಗಳು ಪ್ರಸ್ತುತ ಸಮಾಜಕ್ಕೆ ಅವಶ್ಯವಿದೆ ಎಂದರು.

ಡಾ.ಮುಕುಂದರಾವ್‌ ಮಾತನಾಡಿ, ಭೌತಿಕ ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟದ್ದ ಪೌರೋಹಿತಶಾವಿ ವರ್ಗದ ಜನರು ಮಾನಸಿಕ ಭಯೋತ್ಪಾದನೆ ತುಂಬುವುದನ್ನು ಬಿಟ್ಟಿಲ್ಲ, ಯುದ್ಧ ಪರಂಪರೆಯಿಂದ ಸಮಾಜವನ್ನು ತಿದ್ದಲು ಸಾಧ್ಯವಿಲ್ಲವೆಂಬದನ್ನು ಮನಗಂಡ ಕನಕದಾಸರು ಖಡ್ಗ ಕೆಳಗಿಟ್ಟು ಮನುಷ್ಯರಾಗುವ ಪ್ರಯತ್ನಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ ಎಂದರು.

ಡಾ.ಜ್ಯೋತಿ ಶಂಕರ್‌ ಮಾತನಾಡಿ, ಮಡಿವಂತಿಕೆ ನಡೆಸುತ್ತಿದ್ದ ವರ್ಗದ ಜನರ ವಿರುದ್ಧ ಕನಕದಾಸರು ಎಂದಿಗೂ ತೊಡೆ ತಟ್ಟಲಿಲ್ಲ. ಭಕ್ತಿಯಿಂದ ಕೃಷ್ಣನನ್ನು ಒಲಿಸಿಕೊಳ್ಳುವ ಮೂಲಕ ಅವರೆಲ್ಲರ ಆಚರಣೆಗಳಿಗೆ ಉತ್ತರ ನೀಡಿದ ಮಹಾನ್‌ ದಾರ್ಶನಿಕರಾಗಿದ್ದಾರೆ ಎಂದರು.

ಆಯುಕ್ತ ಮಲ್ಲೇಶಪ್ಪ ಹೊರಪೇಟಿ ಮಾತನಾಡಿ, ಕನಕದಾಸರನ್ನು ಬೇರೆ ರೀತಿಯಲ್ಲಿ ಸಮೀಕರಿಸುತ್ತಿದ್ದು ಅವರು ಆಲೋಚನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಅಡಿವೆಪ್ಪ ಕುರಿಯವರ, ಶಿಬಿರ ಉಸ್ತುವಾರಿ ಕರಿಯಪ್ಪ ಹಂಚಿನಮನಿ, ಜಗನ್ನಾಥ ಗೇನಣ್ಣನವರ, ಜೀವರಾಜ ಛತ್ರದ ಮಲ್ಲಪ್ಪ ಕರೇಣ್ಣನವರ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ