ಆ್ಯಪ್ನಗರ

ಕನ್ನಡ ರಕ್ಷಣೆಗೆ ಕಠಿಣ ನಿಯಮ ಅಗತ್ಯ

ಬ್ಯಾಡಗಿ: ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿಆಡಳಿತಾರೂಢ ಸರಕಾರಗಳು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೇ ರಾಜ್ಯದ ನುಡಿ ಹಾಗೂ ಗಡಿ ಎರಡೂ ಕರಗಲಿವೆ ಎಂದು ಅಧ್ಯಕ್ಷ ದತ್ತಾತ್ರೇಯ ಕುಂಠೆ ಆತಂಕ ವ್ಯಕ್ತಪಡಿಸಿದರು.

Vijaya Karnataka 4 Nov 2019, 5:00 am
ಬ್ಯಾಡಗಿ: ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿಆಡಳಿತಾರೂಢ ಸರಕಾರಗಳು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೇ ರಾಜ್ಯದ ನುಡಿ ಹಾಗೂ ಗಡಿ ಎರಡೂ ಕರಗಲಿವೆ ಎಂದು ಅಧ್ಯಕ್ಷ ದತ್ತಾತ್ರೇಯ ಕುಂಠೆ ಆತಂಕ ವ್ಯಕ್ತಪಡಿಸಿದರು.
Vijaya Karnataka Web kannada protection is a tough rule
ಕನ್ನಡ ರಕ್ಷಣೆಗೆ ಕಠಿಣ ನಿಯಮ ಅಗತ್ಯ


ತಾಲೂಕಿನ ಮೋಟೆಬೆನ್ನೂರ ನವೋದಯ ವಿದ್ಯಾಸಂಸ್ಥೆಯ ಆವರಣದಲ್ಲಿಆಯೋಜಿಸಿದ್ದ 64 ನೇ ಕರ್ನಾಟಕ ರಾಜ್ಯೋತ್ಸವ ಕಾರ‍್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಮಾತೃಭಾಷೆ ಆಧಾರದ ಮೇಲೆ ಕರ್ನಾಟಕ ರಚಿಸಲಾಗಿದೆ, ಆದರೆ ಭಾಷಾಭಿಮಾನದ ಕೊರತೆ ಎದುರಿಸುತ್ತಿರುವ ಕರ್ನಾಟಕದಲ್ಲಿಪರಭಾಷಿಕರ ದಬ್ಬಾಳಿಕೆ ತೀವ್ರವಾಗಿದೆ. ಒಂದು ವೇಳೆ ಕನ್ನಡ ಭಾಷೆಯ ಪರ ಧ್ವನಿ ಎತ್ತಿದರೇ ಅಂತಹವರನ್ನು ಹಾಗೂ ಅವರ ಸಂಘಟನೆಗಳನ್ನು ಕುಬ್ಜ ಮನೋಭಾವನೆಯಿಂದ ನೋಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದರು.

ಸ್ವಾಭಿಮಾನದ ಸಂಕೇತ:
ಮಾತೃಭಾಷೆ ಎಂಬುದು ರಾಜ್ಯದಲ್ಲಿನೆಲೆಸಿರುವ ಪ್ರತಿಯೊಬ್ಬ ಕನ್ನಡಿಗರಿಗೂ ಸ್ವಾಭಿಮಾನದ ಸಂಕೇತವಾಗಬೇಕು, ಇಲ್ಲದೇ ಹೋದರೆ ಇಡೀ ರಾಜ್ಯವೇ ಸಂಕಷ್ಟಕ್ಕೆ ಸಿಲುಕುವುದರಲ್ಲಿಸಂದೇಹವಿಲ್ಲ. ಆದರೆ ಶಾಲೆ, ಕಾಲೇಜು ಸೇರಿದಂತೆ ಬೃಹತ್‌ ನಗರಗಳಲ್ಲಿಇದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗದೇ ಇರುವುದು ವಿಪರಾರ‍ಯಸದ ಸಂಗತಿ ಎಂದರು.

ನಮ್ಮನ್ನಾಳಲಿವೆ ಪರಭಾಷೆಗಳು:
ನಿವೃತ್ತ ಪ್ರಾಧ್ಯಾಪಕ ಡಾ.ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ಇತ್ತೀಚಿನ ದಿನ ಗಳಲ್ಲಿಪರಭಾಷೆಗಳ ದಬ್ಬಾಳಿಕೆ ಅತಿಯಾಗುತ್ತಿದೆ, ಹೀಗಾಗಿ ಕನ್ನಡ ಪರ ಸಂಘಟನೆಗಳು ರಾಜ್ಯದಲ್ಲಿನೆಲೆಸಿರುವ ಹೊರ ನಾಡ ಕನ್ನಡಿಗರ ಮಕ್ಕಳು, ಮಾತೃಭಾಷೆಯೊಂದಿಗೆ ಎರಡನೇ ಭಾಷೆಯಾಗಿ ಕನ್ನಡ ಕಲಿಯವುದನ್ನು ಕಡ್ಡಾಯಗೊಳಿ ಸಬೇಕಾಗಿದೆ, ಇದನ್ನು ಮತ್ತೇನೋ ಮಾಡಲು ಹೋದರೆ ಪರಭಾಷಿಕರು ಖಂಡಿತವಾಗಿಯೂ ನಮ್ಮನ್ನಾಳಲಿದ್ಧಾರೆ ಎಂದರು.

ಪ್ರಾಚಾರ‍್ಯ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಸಿದ್ದರು, ವೇದಿಕೆಯಲ್ಲಿನವೋದಯ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಳ್ಳಾರಿ, ಅಶೋಕ ಬಣಕಾರ, ಪಿ.ಸಿ.ಅತ್ತಿಗೇರಿ, ಎನ್‌.ಡಿ.ಹುಚ್ಚಣ್ಣನವರ, ಎಂ.ಎಫ್‌.ಮೋರೆ ಹಾಗೂ ಇನ್ನಿ ತರರು ಉಪಸ್ಥಿತರಿದ್ದರು. ಶಿಕ್ಷಕರಾದ ರಾಘವೇಂದ್ರ ಎಲಿ ಸ್ವಾಗತಿಸಿದರು, ವಿಜಯಾ ಹಾವನೂರ ನಿರೂಪಿಸಿದರು, ಹೇಮಾ ವಡವಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ