ಆ್ಯಪ್ನಗರ

ಕನ್ನಡ ನುಡಿ ಸಂಭ್ರಮಕ್ಕೆ ವರ್ಣರಂಜಿತ ತೆರೆ

ಅಕ್ಕಿಆಲೂರು: ಇಲ್ಲಿನ ದುಂಡಿಬಸವೇಶ್ವರ ಜನಪದ ಕಲಾಸಂಘದ 29 ನೇ ಕನ್ನಡ ನುಡಿ ಸಂಭ್ರಮಕ್ಕೆ ಶನಿವಾರ ರಾತ್ರಿ ನೃತ್ಯ, ಗೀತೆ, ಹಾಸ್ಯ-ಲಾಸ್ಯದಂಥ ವೈಶಿಷ್ಟತ್ರ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ವರ್ಣರಂಜಿತ ತೆರೆಬಿದ್ದಿತು.

Vijaya Karnataka 16 Dec 2019, 5:00 am
ಅಕ್ಕಿಆಲೂರು: ಇಲ್ಲಿನ ದುಂಡಿಬಸವೇಶ್ವರ ಜನಪದ ಕಲಾಸಂಘದ 29 ನೇ ಕನ್ನಡ ನುಡಿ ಸಂಭ್ರಮಕ್ಕೆ ಶನಿವಾರ ರಾತ್ರಿ ನೃತ್ಯ, ಗೀತೆ, ಹಾಸ್ಯ-ಲಾಸ್ಯದಂಥ ವೈಶಿಷ್ಟತ್ರ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ವರ್ಣರಂಜಿತ ತೆರೆಬಿದ್ದಿತು.
Vijaya Karnataka Web kannada screen is a colorful screen for celebration
ಕನ್ನಡ ನುಡಿ ಸಂಭ್ರಮಕ್ಕೆ ವರ್ಣರಂಜಿತ ತೆರೆ


ಆರಂಭದಲ್ಲಿನಡೆದ ಸಂಗೀತ ಸಂಭ್ರಮದಲ್ಲಿಗಾಯಕಿ ಸಾದ್ವಿನಿ ಕೊಪ್ಪ ಚಿತ್ರ ಗೀತೆಗಳನ್ನು ತಮ್ಮ ಅಪೂರ್ವ ಕಂಠಸಿರಿಯಿಂದ ಪ್ರಸ್ತುತ ಪಡಿಸಿದರು. ನಡುರಾತ್ರಿಯ ಕೊರೆವ ಚಳಿಯಲ್ಲಿಯೂ ಅಪಾರ ಸಂಖ್ಯೆಯಲ್ಲಿಸೇರಿದ್ದ ಕನ್ನಡಾಭಿಮಾನಿಗಳು ಗಾಯನಕ್ಕೆ ಫಿದಾ ಆಗಿ ಹುಚ್ಚೆದ್ದು, ಕುಣಿದು ಕುಪ್ಪಳಿಸಿದರು. ಒಂದಾದ ಮೇಲೆ ಒಂದು ಹಿಟ್‌ ಚಿತ್ರಗೀತೆಗಳ ಸಂಗೀತ ಕಲರವದಲ್ಲಿಸಂಗೀತ ಪ್ರಿಯರಿಗೆ ಮುದ ನೀಡಿದವು. ಕೊಪ್ಪಳದ ಮೇಘನಾ ಅವರ ಗಾಯನ, ರಾಣೇಬೆನ್ನೂರಿನ ಬಸವರಾಜ್‌ ಸಾವಕ್ಕನವರ ಮತ್ತು ತಂಡದ ಸ್ಯಾಕ್ಸೋಫೋನ್‌ ವಾದನ ಇಂಪೆನಿಸಿದವು.

ಬೆಂಗಳೂರು, ಧಾರವಾಡ, ಕೊಪ್ಪಳ, ರಾಣೇಬೆನ್ನೂರು ಸೇರಿದಂತೆ ಹಲವೆಡೆಯ ಕಲಾವಿದರ ಭರತನಾಟ್ಯ, ಸಂಗೀತ ಹಾಗೂ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ವಿವಿಧ ಕಲಾ ಪ್ರದರ್ಶನ ರಾಷ್ಟ್ರೀಯ ಮನೋಧರ್ಮ, ನಾಡಾಭಿಮಾನ ಅಭಿವ್ಯಕ್ತಗೊಳಿಸಿತು. ಐಟಿಐ ವಿದ್ಯಾರ್ಥಿಗಳು ನಟಿಸಿದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ ಸನ್ನಿವೇಶ, ಬಾಲಾಕೋಟ್‌ ಸಂಘರ್ಷದ ಘಟನಾವಳಿಗಳನ್ನು ನೃತ್ಯದ ಮೂಲಕ ಅಭಿವ್ಯಕ್ತಗೊಳಿಸಿದರು. ಒಂದೆಡೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸುತ್ತಿದ್ದಂತೆ, ಇನ್ನೊಂದೆಡೆ ನೆರೆದ ಜನಸ್ತೋಮ ಭಾರತ್‌ ಮಾತಾಕೀ ಜೈ ಘೋಷಣೆ ಮೊಳಗಿಸಿ ದೇಶಾಭಿಮಾನದ ಕಿಚ್ಚು ಪ್ರದರ್ಶಿಸಿದರು.

ಬೆಂಗಳೂರಿನ ಪ್ರಗತಿ ಶಿರ್ಶಿಕರ, ಹಾವೇರಿಯ ವಿದ್ಯಾ ಭರತನಾಟ್ಯ ಶಾಲೆಯ ವಿದ್ಯಾರ್ಥಿನಿಯರು ಭರತನಾಟ್ಯ ಪ್ರದರ್ಶಿಸಿದರು. ಸಿಂಧೂರ ಸಿದ್ದಪ್ಪ ಕಾಲೇಜಿನ ವಿದ್ಯಾರ್ಥಿನಿಯರು ಪ್ರೀಯಾಂಕ ರೆಡ್ಡಿ ಅತ್ಯಾಚಾರ ಮತ್ತು ಕಾಮುಕರ ಮೇಲಿನ ಎನ್‌ಕೌಂಟರ್‌ನ ಸಾಕ್ಷಾತ್‌ ದೃಶ್ಯಗಳನ್ನು ಪ್ರದರ್ಶಿಸಿದಾಗ ಒಂದು ಕ್ಷಣ ಮೂಖವಿಸ್ಮಿತರಾಗುವ ಸರದಿ ನೆರೆದವರದ್ದಾಗಿತ್ತು. ಭಾನುವಾರ ಬೆಳಗಿನ ಜಾವ 5 ಗಂಟೆವರೆಗೂ ಕಿಕ್ಕಿರಿದು ತುಂಬಿದ್ದ ಸಾವಿರಾರು ಸಂಖ್ಯೆಯ ಜನ ಕನ್ನಡ ಕಂಪು ಕಣ್ಮನ ತುಂಬಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ