ಆ್ಯಪ್ನಗರ

ಇಂದು ಕನ್ನಡ ಕಹಳೆ ಕಾರ್ಯಕ್ರಮ

ಅಕ್ಕಿಆಲೂರು: ಬಾಳಂಬೀಡದಲ್ಲಿನವಕನ್ನಡಿಗರ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ 64 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 23 ರಂದು ಕನ್ನಡ ಕಹಳೆ-2 ವಿಶೇಷ ಸಾಂಸ್ಕೃತಿಕ ಸಮಾರಂಭ ಆಯೋಜಿಸಲಾಗಿದೆ.

Vijaya Karnataka 23 Nov 2019, 5:00 am
ಅಕ್ಕಿಆಲೂರು: ಬಾಳಂಬೀಡದಲ್ಲಿನವಕನ್ನಡಿಗರ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ 64 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 23 ರಂದು ಕನ್ನಡ ಕಹಳೆ-2 ವಿಶೇಷ ಸಾಂಸ್ಕೃತಿಕ ಸಮಾರಂಭ ಆಯೋಜಿಸಲಾಗಿದೆ.
Vijaya Karnataka Web kannada trumpet program today
ಇಂದು ಕನ್ನಡ ಕಹಳೆ ಕಾರ್ಯಕ್ರಮ


ಸಂಜೆ 6ಗಂಟೆಗೆ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಹೋತನಹಳ್ಳಿಯ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ವಹಿಸಲಿದ್ದು, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವಿಶ್ವನಾಥ ಹಿರೇಮಠ ಉದ್ಘಾಟಿಸುವರು. ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್‌ ಶಿವಪೂಜಿ ಅಧ್ಯಕ್ಷತೆ ವಹಿಸುವರು. ಜನಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಕೆ.ಮೋಹನಕುಮಾರ್‌ ಜ್ಯೋತಿ ಬೆಳಗಿಸುವರು.

ಶಿಕ್ಷಕ ಪಿ.ವೈ.ಗುತ್ತಲ ಕನ್ನಡ ನಾಡು-ನುಡಿ ಕುರಿತು ಉಪನ್ಯಾಸ ನೀಡಲಿದ್ದು, ಜಿಪಂ ಸಿಇಒ ರಮೇಶ್‌ ದೇಸಾಯಿ, ಗ್ರಾಪಂ ಅಧ್ಯಕ್ಷ ಪ್ರಕಾಶ್‌ ದುಂಡಣ್ಣನವರ, ಮಂಜಪ್ಪ ಗಾಜಿ, ಹಿದಾಯತ್‌ ವರ್ದಿ, ಬಸವರಾಜ್‌ ಮಲ್ಲಾಡದ, ರಾಜೂ ಕಂಬಿ, ಪರಶುರಾಮ್‌ ಬಾರ್ಕಿ, ಎನ್‌.ಎಚ್‌.ಆಂಜನೇಯ, ಮಾರ್ತಾಂಡಪ್ಪ ಕತ್ತಿ, ಡಾ.ಎಸ್‌.ಎ.ಉಗಾರೆ, ಉದಯ ನಾಸಿಕ, ಗದಿಗೆಪ್ಪ ದುರಗಪ್ಪನವರ, ಶಶಿಕಲಾ ಹುಡೇದ, ಕೃಷ್ಣ ಈಳಿಗೇರ, ನಾಗರಾಜ್‌ ಅಡಿಗ, ಬಸವರಾಜ್‌ ಕೋರಿ, ಶ್ರೀಧರ್‌ ದೊಡ್ಡಮನಿ, ರಾಮೂ ಯಳ್ಳೂರ, ಸಿದ್ದಲಿಂಗಪ್ಪ ಕಮಡೊಳ್ಳಿ ಸೇರಿದಂತೆ ಇನ್ನಿತರರು ಭಾಗವಹಿಸುವರು. ಬಳಿಕ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಸಂಘದ ಅಧ್ಯಕ್ಷ ಶಿವಯೋಗಿ ನಿಂಬಕ್ಕನವರ, ಕಾರ್ಯದರ್ಶಿ ಜಗದೀಶ್‌ ಜಾಡರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ