ಆ್ಯಪ್ನಗರ

ದಂಡ ಹಾಕೋದ್ರಿಂದ ಯುವಕರು ದಾರಿ ತಪ್ತಾರೆ ಅಂದ್ರು ಯುಟಿ ಖಾದರ್

ಭಾರತ ದೇಶದ ಮೇಲೆ ನೈಜ್ಯ ಪ್ರೀತಿ ಇದ್ದರೆ ಪಾಕಿಸ್ತಾನವನ್ನು ಭಾರತದೊಳಗಡೆ ಸೇರಿಸಿ ಅಂದಿದ್ದಾರೆ ಮಾಜಿ ಸಚಿವ ಯು.ಟಿ ಖಾದರ್. ಹಾವೇರಿಯಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

Vijaya Karnataka Web 20 Sep 2019, 7:46 pm
ಹಾವೇರಿ: ನೂತನ ಮೋಟಾರು ವಾಹನ ತಿದ್ದುಪತಿ ಕಾಯಿದೆ ಜಾರಿ ಅನ್ವಯ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಭಾರೀ ಪ್ರಮಾಣದ ದಂಡವನ್ನು ಹಾಕೋದ್ರಿಂದ ಯುವಕರು ದಾರಿ ತಪ್ಪುತ್ತಾರೆ ಎಂದಿದ್ದಾರೆ ಮಾಜಿ ಸಚಿವ ಯು. ಟಿ ಖಾದರ್. ಹಾವೇರಿಯಲ್ಲಿ ಮಾತನಾಡಿದ ಅವರು, ಬಡವರು ದೊಡ್ಡ ಪ್ರಮಾಣದ ದಂಡ ಕಟ್ಟಲು ಸಾಧ್ಯವಾಗದೆ ಅನ್ಯ ದಾರಿಯನ್ನು ಹಿಡಿಯಬೇಕಾಗುತ್ತೆ ಎಂದಿದ್ದಾರೆ.
Vijaya Karnataka Web u t kadar


ಬಿಜೆಪಿ ಸರಕಾರ ದೇಶದ ಜನರನ್ನು ವೈರಿ ರೀತಿಯಲ್ಲಿ ನೋಡುತ್ತಿದೆ ಎಂದು ಆರೋಪಿಸಿದ ಖಾದರ್, ಕಾಯ್ದೆ ಜಾರಿ ವಿಚಾರದಲ್ಲಿ
ಗೋವಾ ಸಿಎಂ ತೆಗೆದುಕೊಂಡ ನಿರ್ಧಾರ ಅಭಿನಂದನೀಯ ಎಂದರು. ಆದರೆ ರಾಜ್ಯದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲು ರಾಜ್ಯ ಸರಕಾರಕ್ಕೆ ತಾಕತ್ತಿಲ್ಲ, ಬೇಕಾದರೆ ಪೊಲೀಸ್ ಇಲಾಖೆಗೆ ನೂರಾದರೇನು, ಸಾವಿರದಷ್ಟಾದರು ಕಾನೂನು ಅನುಷ್ಠಾನ ಮಾಡಿ ಎಂದಿದ್ದಾರೆ.

ನೆರೆ ಪರಿಹಾರ ನಿರ್ವಹಣೆ ಕುರಿತಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಖಾದರ್, ಬಿಜೆಪಿ ಸರಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ.
ತಮ್ಮ ಸ್ವಹಿತಕ್ಕಾಗಿ ಜನರನ್ನ ಬಲಿ ಕೊಡುತ್ತಿದ್ದಾರೆ. ನೆರೆ ಹಾನಿಯಾದಾಗ ಸರಕಾರ ಜನರ ಕಣ್ಣೀರು ಒರೆಸಬೇಕು. ಸಂತ್ರಸ್ತರಿಗೆ ಪರಿಹಾರ ಕೊಡಿ ಅಂದರೆ ನೋಟು ಪ್ರಿಂಟ್ ಮಾಡುವ ಮಶೀನ್ ಇಲ್ಲ ಅಂತಾರೆ. ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರದಿಂದ ನಯಾ ಪೈಸೆ ಹಣ ಸಿಗಲಿಲ್ಲ, ದೇಶದ ಇತಿಹಾಸದಲ್ಲಿ ಪ್ರಥಮ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯದ ನೆರೆ ಸಂತ್ರಸ್ತರ ಸಮಸ್ಯೆ ಬಗೆಹರಿಸಬೇಕಿತ್ತು ಬದಲಾಗಿ ಭೂತಾನ ರಾಜ್ಯಕ್ಕೆ ಹೋಗಿ ಮಕ್ಕಳ ಜೊತೆ ಆಟವಾಡುತ್ತಾ ಕಾಲ ಕಳಿಯುತ್ತಿದ್ದಾರೆ ಅಂದ ಖಾದರ್ ಸೆಪ್ಟೆಂಬರ್ 24ರಂದು ರಾಜ್ಯ ಹಾಗೂ ಕೇಂದ್ರ ನಡೆ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದೇವೆ ಎಂದಿದ್ದಾರೆ.

ದೇಶದ ಮೇಲೆ ನೈಜ್ಯ ಪ್ರೀತಿ ಇದ್ರೆ ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿ

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ತಲೆಹರಟೆ ಮಾಡಿದರೆ ಇಡೀ ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು.ಟಿ ಖಾದರ್ ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸುತ್ತೇವೆ ಅನ್ನೋದಕ್ಕೆ ನಮ್ಮ ಬೆಂಬಲವೂ ಇದೆ ಆದರೆ ಹಾಗೆ ಹೇಳಿ ಅಲ್ಲಿಗೆ ಹೋಗಿ ಬಿರಿಯಾನಿ ತಿಂದು ಬರುವುದಲ್ಲ ಎಂದು ವ್ಯಂಗ್ಯವಾಡಿದರು.

"ಪಾಕ್‌ ಪ್ರಧಾನಿ ತಲೆಹರಟೆ ಮಾಡಿದರೆ ಪಾಕಿಸ್ತಾನ ಭಾರತಕ್ಕೆ ಸೇರಿಸ್ತೀವಿ, ಹುಷಾರ್‌"

ನಿಮಗೆ ಭಾರತ ಮಾತೆಯ ಮೇಲೆ ನಿಜವಾದ ಪ್ರೀತಿ ಇದ್ದರೆ ಮೊದಲು ಆ ಕೆಲಸ ಮಾಡಿ ಬದಲಾಗಿ ಭಾವನಾತ್ಮಕವಾಗಿ ಜನರನ್ನ ಮರಳು ಮಾಡಬೇಡಿ. ಚುನಾವಣೆ ಬಂದಾಗ ಮಾತ್ರ ಇಂಥಾ ಮಾತು ಹೇಳಬೇಡಿ, ಮೊದಲು ಆ ಕೆಲಸ ಮಾಡಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ