ಆ್ಯಪ್ನಗರ

ಕಾಶಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ

ರಾಣೇಬೆನ್ನೂರ: ಮಕ್ಕಳು ಉತ್ತಮ ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವ, ತಂದೆ ತಾಯಿಯನ್ನು ಪೂಜಿಸುವ ಪ್ರವೃತ್ತಿ ರೂಢಿಸಿದಾಗ ಅಂತಹ ಮಕ್ಕಳು ಸಮಾಜದಲ್ಲಿ ಆದರ್ಶವಂತರಾಗಿರಲು ಸಾಧ್ಯ ಎಂದು ಕಾಶಿ ಪೀಠದ ಜಗದ್ಗರು ಡಾ.ಚಂದ್ರಶೇಖರ ಶಿವಾಚಾರ್ಯರು ನುಡಿದರು.

Vijaya Karnataka 28 May 2019, 5:00 am
ರಾಣೇಬೆನ್ನೂರ: ಮಕ್ಕಳು ಉತ್ತಮ ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವ, ತಂದೆ ತಾಯಿಯನ್ನು ಪೂಜಿಸುವ ಪ್ರವೃತ್ತಿ ರೂಢಿಸಿದಾಗ ಅಂತಹ ಮಕ್ಕಳು ಸಮಾಜದಲ್ಲಿ ಆದರ್ಶವಂತರಾಗಿರಲು ಸಾಧ್ಯ ಎಂದು ಕಾಶಿ ಪೀಠದ ಜಗದ್ಗರು ಡಾ.ಚಂದ್ರಶೇಖರ ಶಿವಾಚಾರ್ಯರು ನುಡಿದರು.
Vijaya Karnataka Web HVR-27RNR4A


ತಾಲೂಕಿನ ವೈಟಿ ಹೊನ್ನತ್ತಿ ಗ್ರಾಮದಲ್ಲಿ ಸೋಮವಾರ ಕಾಶಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಶ್ರೀ ಮಾರುತಿ ದೇವರ, ಶ್ರೀ ಹುಲಿಗೆಮ್ಮ ದೇವರ ಪ್ರಾಣ ಪ್ರತಿಷ್ಠೆ, ನೂತನ ಶಿಲಾ ಮಂದಿರದ ಕಳಸಾರೋಹಣ ಮತ್ತು ಶಿಲಾ ಮಂದಿರದ ಲೋಕಾರ್ಪಣೆ ಹಾಗೂ ಗುಡ್ಡಾಪುರ ಶ್ರೀ ದಾನಮ್ಮದೇವಿಯ ಪುರಾಣ ಮಂಗಲೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಮರೆಮಾಚುವಂತಹ ಪ್ರವೃತ್ತಿ ಬೆಳೆಸಿಕೊಂಡರೆ ಅಂತವರು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಾರೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಹಾಗೂ ಸಂಪ್ರದಾಯ ರೂಢಿಸಿಕೊಂಡು ಅಧ್ಯಾತ್ಮಿಕತೆಯಿಂದ ಧರ್ಮದ ತಳಹದಿಯಲ್ಲಿ ನಡೆದಾಗ ಅಂತವರ ಜೀವನ ಸಾರ್ಥಕತೆಯಿಂದ ಕೂಡಿರುತ್ತದೆ. ಧಾರ್ಮಿಕತೆಯ ಜೊತೆಗೆ ಮನುಕುಲದ ಉದ್ಧಾರಕ್ಕಾಗಿ ಪರಿಸರ ಸಂರಕ್ಷ ಣೆ ಮಾಡುವ ಮನೋಭಾವ ಸರ್ವರಲ್ಲೂ ಬರಬೇಕು ಎಂದರು.

ಚೌಡಯ್ಯದಾನಪುರದ ಒಡೆಯರ ಚಿತ್ರಶೇಖರ ಶಿವಾಚಾರ್ಯರು, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು, ಹನುಮನಹಳ್ಳಿಯ ಸಿದ್ದರಾಮ ಹಾಲಶಿವಯೋಗಿಗಳು, ಸಂಕದಾಳದ ಮುದಕೇಶ್ವರ ಹಾಲ ಶಿವಯೋಗಿಗಳು, ಗುಡ್ಡದ ಆನ್ವೇರಿಯ ಶಿವಯೋಗಿಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ವಿ.ಎಸ್‌. ಹಿರೇಮಠ, ಜಗದೀಶಯ್ಯ ಹಿರೇಮಠ, ಗುಡ್ಡಪ್ಪ ನೆಲೋಗಲ್‌, ನಾಗಪ್ಪ ಬಣಕಾರ, ಹೇಮಪ್ಪ ಹೊಳಲು, ಸತೀಶ ಚೊಕ್ಕನಗೌಡ್ರ, ಗುಡ್ಡಪ್ಪ ತಳವಾರ, ಗುಡ್ಡಪ್ಪ ಪೂಜಾರ, ವಿಜಯಕುಮಾರ ಹೊಳಲ, ದ್ಯಾಮಪ್ಪ ಹೊನ್ನಚಿಕ್ಕಣ್ಣನವರ, ನಾಗರಾಜ ಹೆಗ್ಗಣ್ಣನವರ, ಕುಮಾರ ಹೊಳಲ, ದಯಾನಂದ ಕಾಕೋಳ, ಗುಡ್ಡಪ್ಪ ಮೇಡ್ಲೇರಿ, ಹೇಮಪ್ಪ ಬೆಣ್ಣಿ, ಶಂಬು ಯಲಿಗಾರ, ಚನ್ನಬಸಪ್ಪ ಎಳೆಹೊಳಿ, ಸತೀಶ ಬಣಕಾರ, ನಾಗರಾಜ ದಾನಮ್ಮನವರ ಮತ್ತು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ