ಆ್ಯಪ್ನಗರ

ಅನ್ಯರ ಖಾತೆಗೆ ಜಮೆಯಾದ ಕಿಸಾನ್‌ ಹಣ

ಬ್ಯಾಡಗಿ: ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ಬ್ಯಾಡಗಿ ಫಲಾನುಭವಿ ರೈತನ ಖಾತೆಗೆ ಜಮಾ ಆಗಬೇಕಾಗಿದ್ದ ಹಣ ಯಾದಗಿರಿ ಜಿಲ್ಲೆಯ ವ್ಯಕ್ತಿಯೊಬ್ಬರ ಖಾತೆ ಜಮಾ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Vijaya Karnataka 11 Sep 2019, 5:00 am
ಬ್ಯಾಡಗಿ: ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ಬ್ಯಾಡಗಿ ಫಲಾನುಭವಿ ರೈತನ ಖಾತೆಗೆ ಜಮಾ ಆಗಬೇಕಾಗಿದ್ದ ಹಣ ಯಾದಗಿರಿ ಜಿಲ್ಲೆಯ ವ್ಯಕ್ತಿಯೊಬ್ಬರ ಖಾತೆ ಜಮಾ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
Vijaya Karnataka Web kisan money to the account of others
ಅನ್ಯರ ಖಾತೆಗೆ ಜಮೆಯಾದ ಕಿಸಾನ್‌ ಹಣ


ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ (2 ಸಾವಿರ ರೂ.) ಮೊದಲ ಕಂತನ್ನು ನೀಡುವಂತೆ ಪಟ್ಟಣದ ರೈತ ಚನ್ನಬಸಪ್ಪ ಮೋಟೆಬೆನ್ನೂರ ಫೆ.24 ರಂದು ಕೃಷಿಭೂಮಿ ಪಹಣಿ, ಆಧಾರ್‌ ನಂಬರ್‌, ಬ್ಯಾಂಕ್‌ ಪಾಸ್‌ಬುಕ್‌ ಹಾಗೂ ಮೊಬೈಲ್‌ ಸಂಖ್ಯೆಯನ್ನು ಅರ್ಜಿಯೊಂದಿಗೆ ಸಲ್ಲಿಸಿದ್ದಾರೆ. ಜೂ.6 ರಂದು ಅರ್ಜಿ ಸಿಂಧುವಾಗಿದ್ದು, ಹಣ ಬ್ಯಾಡಗಿ ಪಟ್ಟಣದ ಸಿಂಡಿಕೇಟ್‌ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಬೇಕಾಗಿತ್ತು. ಆದರೆ ಯಾದಗಿರಿ ಜಿಲ್ಲೆಯ ಖಾನಾಪೂರದ ರೈತರೊಬ್ಬರ ಖಾತೆಗೆ ವರ್ಗಾವಣೆಯಾಗಿದೆ.

ರೈತ ಕಂಗಾಲು:
ಇದರಿಂದ ಕಂಗಾಲಾಗಿರುವ ಫಲನುಭವಿ ರೈತ ಬ್ಯಾಡಗಿ ಸಿಂಡಿಕೇಟ್‌ ಬ್ಯಾಂಕ್‌ಗೆ ಅಲೆದಾಡಿ ಸುಸ್ತಾಗಿದ್ದಾನೆ. ತನಗೆ ಸೇರಬೇಕಾಗಿದ್ದ ಹಣ ಬೇರೊಬ್ಬರ ಖಾತೆಗೆ ಜಮಾ ಆದ ಬಗ್ಗೆ 2 ತಿಂಗಳ ಬಳಿಕ ತಿಳಿದಿದೆ. ಇಷ್ಟೆಲ್ಲಾಅವಾಂತರಕ್ಕೆ ಕಾರಣವಾಗಿರುವ ಕೃಷಿ ಇಲಾಖೆಗೆ ಆಗಿರುವ ತಪ್ಪನ್ನು ಸರಿಪಡಿಸುವಂತೆ ಕಳೆದೊಂದು ತಿಂಗಳಿಂದ ರೈತ ಕಚೇರಿಗೆ ಅಲೆದಾಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷತ್ರ್ಯ ಮಾಡುತ್ತಿದ್ದು, ರೈತ ಪರದಾಡುತ್ತಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ