ಆ್ಯಪ್ನಗರ

ವ್ಯಾಸಂಗದಲ್ಲಿ ಜ್ಞಾನ, ಶ್ರದ್ಧೆ, ಚಿಂತನೆ ಅಗತ್ಯ

ರಾಣೇಬೆನ್ನೂರ: ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಜ್ಞಾನ, ಶ್ರದ್ಧೆ ಆಳವಾದ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಕೆಪಿಸಿಸಿ ಶಿಕ್ಷ ಕರ ಹಾಗೂ ಪಧವಿದರರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್‌.ಎಂ.ಕುಬೇರಪ್ಪ ಹೇಳಿದರು.

Vijaya Karnataka 11 Mar 2019, 5:00 am
ರಾಣೇಬೆನ್ನೂರ: ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಜ್ಞಾನ, ಶ್ರದ್ಧೆ ಆಳವಾದ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಕೆಪಿಸಿಸಿ ಶಿಕ್ಷ ಕರ ಹಾಗೂ ಪಧವಿದರರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್‌.ಎಂ.ಕುಬೇರಪ್ಪ ಹೇಳಿದರು.
Vijaya Karnataka Web HVR-9RNR5


ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ವಿಜಯಪುರ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ಥಳೀಯ ಬಿಎಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧೀಜಿಯ ಆದರ್ಶ ಮಾರ್ಗದಂತೆ ಸೇವೆಯ ಮಹತ್ವ ಅರಿತಾಗ ನಮ್ಮ ಜೀವನ ಸಾರ್ಥಕವಾಗುತ್ತದೆ. ನಾನು ಬದುಕಿರುವುದು ನನಗಾಗಿ ಅಲ್ಲ ಮತ್ತೊಬ್ಬರಿಗಾಗಿ ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳÜಬೇಕು. ಇಂತಹ ಶಿಬಿರ ಪರಿಪೂರ್ಣ ವ್ಯಕ್ತಿತ್ವವನ್ನು ಪಡೆಯಲು ಸಹಕಾರಿಯಗುತ್ತದೆ ಎಂದರು.

ಪ್ರಾ ಎಸ್‌.ಎ.ತಾಂಬೆ ಅಧ್ಯಕ್ಷ ತೆ ವಹಿಸಿದ್ದರು. ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಸೂರ್ವೆ, ಜಿ.ಎಂ.ನಾಡಿಗೇರ, ಜಿ.ಕೆ.ಗೌಡರ, ಬಸವರಾಜ ಮಳೇನಹಳ್ಳಿ, ಜಿ.ಆರ್‌. ಕಿರಣಕುಮಾರ, ಎಸ್‌. ಎಚ್‌. ಹುಚಗೊಂಡರ, ದೇವರಾಜ ಎಚ್‌, ಮರಿಯಪ್ಪ ಹಲವಾಗಲ, ಕುರವತ್ತಿಗೌಡ ಮುದಿಗೌಡ್ರ, ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ