ಆ್ಯಪ್ನಗರ

ಕೋಳಿವಾಡ ಭೇಟಿ: ಸಂತ್ರಸ್ತರಿಗೆ ಸಮಾಧಾನ

ರಾಣೇಬೆನ್ನೂರ: ಕಳೆದ ವಾರ ಸುರಿದ ಮಳೆಯಿಂದ ಹಾನಿಗೊಳಗಾದ ನಗರದ ಅಡವಿ ಆಂಜನೇಯ ಬಡಾವಣೆ, ದೊಡ್ಡಪೇಟೆ ಬದನೆಕಾಯಿ ಓಣಿ ಮುಂತಾದ ಪ್ರದೇಶಗಳಿಗೆ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

Vijaya Karnataka 13 Aug 2019, 5:00 am
ರಾಣೇಬೆನ್ನೂರ: ಕಳೆದ ವಾರ ಸುರಿದ ಮಳೆಯಿಂದ ಹಾನಿಗೊಳಗಾದ ನಗರದ ಅಡವಿ ಆಂಜನೇಯ ಬಡಾವಣೆ, ದೊಡ್ಡಪೇಟೆ ಬದನೆಕಾಯಿ ಓಣಿ ಮುಂತಾದ ಪ್ರದೇಶಗಳಿಗೆ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
Vijaya Karnataka Web HVR-12RNR2


ಈ ಸಮಯದಲ್ಲಿ ಮಾತನಾಡಿದ ಅವರು, ಪ್ರವಾಹÜದಿಂದಾಗಿ 1 ಲಕ್ಷ ಕೋಟಿ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರಕಾರ ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು. ಈಗಾಗಲೇ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಅಮಿತ್‌ ಶಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಪರಿಸ್ಥಿತಿ ತೀವ್ರತೆ ಗಮನಿಸಿದರೆ ಪ್ರಧಾನಮಂತ್ರಿಗಳೇ ಖುದ್ದಾಗಿ ಭೇಟಿ ನೀಡಬೇಕಾಗಿತ್ತು ಎಂದರು.

ತಾಲೂಕಿನಲ್ಲಿ ತುಂಗಭದ್ರಾ ನದಿ 70 ಕಿಮೀ ಹಾಗೂ ಕುಮದ್ವತಿ ನದಿ 43 ಕಿಮೀ ದೂರ ಹರಿದಿದ್ದು ನದಿ ಪಾತ್ರದ ಹಳ್ಳಿಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಆದರೆ ರಾಜ್ಯ ಸರಕಾರ ತಾಲೂಕನ್ನು ಅತಿವೃಷ್ಠಿ ಪಟ್ಟಿಯಿಂದ ಕೈಬಿಟ್ಟಿರುವುದು ವಿಷಾದಕರ ಸಂಗತಿ. ಈ ತಪ್ಪನ್ನು ತಿದ್ದಿಕೊಂಡು ಕೂಡಲೇ ತಾಲೂಕನ್ನು ಅತಿವೃಷ್ಠಿ ಪಟ್ಟಿಗೆ ಸೇರಿಸಿ ನೆರೆ ಸಂತ್ರಸ್ತರಿಗೆ ನೆರವು ದೊರಕುವಂತೆ ಮಾಡಬೇಕು ಎಂದರು.

ಪ್ರಕಾಶ ಜೈನ್‌, ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡರ, ಶಶಿಧರ ಬಸೆನಾಯ್ಕರ, ರಮೇಶ ಬಿಸಲಹಳ್ಳಿ, ಬಸವರಾಜ ಹುಚಗೊಂಡರ, ಸುರೇಶ ಜಡಮಲಿ, ರಾಜು ಮೊಟಗಿ ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ