ಆ್ಯಪ್ನಗರ

ಜಿಲ್ಲಾದ್ಯಂತ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ...

ಹಾವೇರಿ : ಜಿಲ್ಲಾದ್ಯಂತ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾನಾ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

Vijaya Karnataka 24 Aug 2019, 5:00 am
ಹಾವೇರಿ : ಜಿಲ್ಲಾದ್ಯಂತ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾನಾ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
Vijaya Karnataka Web krishna janmashthami prakrithi
ಜಿಲ್ಲಾದ್ಯಂತ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ...


ನಗರದ ಹಾನಗಲ್ಲ ರಸ್ತೆಯಲ್ಲಿರುವ ಕೃಷ್ಣ ದೇವಸ್ಥಾನದಲ್ಲಿ ಬೆಳಗ್ಗೆ ಕೃಷ್ಣನಿಗೆ ಪಂಚಾಮೃತ ಅಭಿಷೇಕ, ಸುದ್ದೋದಕ ಸ್ಥಾನ, ಪರಮಾನ್ನ ನೈವೇದ್ಯ, ವಿಶೇಷ ಅಲಂಕಾರ ಜೊತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ವಿಶೇಷ ಭಜನೆ, ಸಂಕೀರ್ತನೆ, ಕೃಷ್ಣ ಜಪ ಜರುಗಿದವು. ರಾತ್ರಿ 12 ಗಂಟೆಗೆ ಗೋಕುಲ ಪೂಜೆ ನಂತರ 12.15 ಕ್ಕೆ ಕೃಷ್ಣ ತೊಟ್ಟಿಲು ಪೂಜೆ ನಂತರ ಅಘ್ರ್ಯ ಬಿಡುಟ್ಟು ಮಹಾಮಂಗಳಾರತಿ, ಪ್ರಸಡಾದ ಸೇವೆ ಜರುಗಲಿದೆ.

ಶುಕ್ರವಾರ ಬೆಳಗ್ಗೆಯಿಂದಲೆ ಸಾವಿರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಕೃಷ್ಣನ ಕೃಪೆಗೆ ಪಾತ್ರರಾದರು. ಈ ವೆಂಕಟೇಶ್ವರ ಟ್ರಸ್ಟ್‌ನ ನಾರಾಯಣ ಮುಕ್ತಾಲಿ ನೇತೃತ್ವದಲ್ಲಿ ಕೃಷ್ಣ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮಗಳು ಪೂಜೆಗಳು ಜರುಗಿದವು.

ನಗರದ ನಾನಾ ಭಾಗಗಳಲ್ಲಿ ಸಂಘ ಸಂಸ್ಥೆಗಳುಗಳು ಕೂಡಾ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು. ನಗರದ ಹೊಸಮಠದ ಪೂರ್ವ ಪ್ರಾಥಮಿಕ ಶಾಲೆ ಸೇರಿದಂತೆ ನಾನಾ ಶಾಲೆಗಳಲ್ಲಿ ಮಕ್ಕಳಿಗೆ ರಾಧೆ ಕೃಷ್ಣ ವೇಷ ಧರಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರು.

ಬ್ರಹ್ಮಕುಮಾರಿ ಈಶ್ವರಿ ವಿವಿ: ಸ್ಥಳೀಯ ಜಯದೇವನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಯದಲ್ಲಿ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಿದರು. ಬ್ರಹ್ಮಕುಮಾರಿ ವಿವಿ ಸಂಚಾಲಕಿ ಲೀಲಾಜೀ ಅಕ್ಕವರು ಮಾತನಾಡಿ, ಕಂಸಪುರಿಯಾಗಿರುವ ವರ್ತಮಾನ ಸಮಯ ಪುನಃ ಕೃಷ್ಣಪುರಿಯಾಗಿ ಸ್ವರ್ಗವಾಗಿ ವೈಕುಂಠವಾಗಿ ಪರಿವರ್ತಿತವಾಗುವ ದಿನಗಳು ಶೀಘ್ರದಲ್ಲಿ ಬರಲಿವೆ ಎಂದರು. ಪುಟಾಣಿ ಮಕ್ಕಳು ರಾಧೆ ಕೃಷ್ಣನ ವೇಷ ಧರಿಸಿ ವಿಶೇಷ ಗಮನ ಸೆಳೆದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ