ರಾಣೇಬೆನ್ನೂರ: ರಾಜ್ಯದ ಸಂಯೋಜಿತ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಆರು ತಿಂಗಳೊಳಗಾಗಿ ತುಂಬಲು ವಿಶ್ವವಿದ್ಯಾನಿಲಯಗಳು ಕ್ರಮ ತೆಗೆದುಕೊಳ್ಳುವಂತೆ ಯುಜಿಸಿ 04-06-2019ರಂದು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ತಿಳಿಸುವ ಜತೆಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಆದರೆ ರಾಜ್ಯದ ಯಾವ ವಿ.ವಿ.ಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕೆಪಿಸಿಸಿ ಶಿಕ್ಷ ಕರು ಹಾಗೂ ಪದವೀಧರರ ಘಟಕದ ರಾಜ್ಯಾಧ್ಯಕ್ಷ ಡಾ: ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.
ಈ ಕುರಿತು ಅವರು ಪತ್ರಿಕೆಗೆ ನೀಡಿರುವ ಹೇಳಿಕೆಯಂತೆ, ಯುಜಿಸಿಯು ರಾಜ್ಯದ ಅನುದಾನಿತ ಪದವಿ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳನ್ನು ತುಂಬಲು ಆದೇಶ ಮಾಡಿದ್ದರೂ ಸಹಿತ ಕರ್ನಾಟಕ ಸರಕಾರವು ಕೇವಲ 2015ರ ವರೆಗೆ ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡಿದೆ. ಆದರೆ ಯುಜಿಸಿ ನೀಡಿರುವ ಹೊಸ ಆದೇಶದ ಪ್ರಕಾರ ಸರಕಾರವು ಪುನಃ ಇಲ್ಲಿಯವರೆಗೂ ಖಾಲಿಯಾಗಿರುವ ಎಲ್ಲ ಬೋಧಕ ಹುದ್ದೆಗಳನ್ನು ತುಂಬಲು ತಿದ್ದುಪಡಿ ಆದೇಶ ಹೊರಡಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಅನುಮತಿ ನೀಡಬೇಕಾಗುತ್ತದೆ. ಆದರೆ ಯುಜಿಸಿಯು ಇದರ ಬಗ್ಗೆ ರಾಜ್ಯದ ವಿ.ವಿ.ಗಳ ಕುಲಪತಿಗಳಿಗೆ ಆದೇಶ ಹೊರಡಿಸಿದೆ. ಕುಲಪತಿಗಳಿಂದ ಅನುದಾನಿತ ಪದವಿ ಕಾಲೇಜುಗಳ ಹುದ್ದೆ ತುಂಬುವ ಅವಕಾಶವಿಲ್ಲದ ಕಾರಣ ಎಲ್ಲ ವಿ.ವಿ.ಗಳ ಕುಲಪತಿಗಳು ಯುಜಿಸಿ ಆದೇಶ ಉಲ್ಲೇಖಿಸಿ ಸರಕಾರಕ್ಕೆ ಹಾಗೂ ಕಾಲೇಜು ಶಿಕ್ಷ ಣ ಇಲಾಖೆಗೆ ಪತ್ರ ಬರೆದು, ಯುಜಿಸಿ ಆದೇಶದ ಪ್ರಕಾರ ಹುದ್ದೆ ತುಂಬಲು ಕ್ರಮ ತೆಗೆದುಕೊಳ್ಳಬೇಕು ಎಂದು ಕುಬೇರಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಪತ್ರಿಕೆಗೆ ನೀಡಿರುವ ಹೇಳಿಕೆಯಂತೆ, ಯುಜಿಸಿಯು ರಾಜ್ಯದ ಅನುದಾನಿತ ಪದವಿ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳನ್ನು ತುಂಬಲು ಆದೇಶ ಮಾಡಿದ್ದರೂ ಸಹಿತ ಕರ್ನಾಟಕ ಸರಕಾರವು ಕೇವಲ 2015ರ ವರೆಗೆ ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡಿದೆ. ಆದರೆ ಯುಜಿಸಿ ನೀಡಿರುವ ಹೊಸ ಆದೇಶದ ಪ್ರಕಾರ ಸರಕಾರವು ಪುನಃ ಇಲ್ಲಿಯವರೆಗೂ ಖಾಲಿಯಾಗಿರುವ ಎಲ್ಲ ಬೋಧಕ ಹುದ್ದೆಗಳನ್ನು ತುಂಬಲು ತಿದ್ದುಪಡಿ ಆದೇಶ ಹೊರಡಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಅನುಮತಿ ನೀಡಬೇಕಾಗುತ್ತದೆ. ಆದರೆ ಯುಜಿಸಿಯು ಇದರ ಬಗ್ಗೆ ರಾಜ್ಯದ ವಿ.ವಿ.ಗಳ ಕುಲಪತಿಗಳಿಗೆ ಆದೇಶ ಹೊರಡಿಸಿದೆ. ಕುಲಪತಿಗಳಿಂದ ಅನುದಾನಿತ ಪದವಿ ಕಾಲೇಜುಗಳ ಹುದ್ದೆ ತುಂಬುವ ಅವಕಾಶವಿಲ್ಲದ ಕಾರಣ ಎಲ್ಲ ವಿ.ವಿ.ಗಳ ಕುಲಪತಿಗಳು ಯುಜಿಸಿ ಆದೇಶ ಉಲ್ಲೇಖಿಸಿ ಸರಕಾರಕ್ಕೆ ಹಾಗೂ ಕಾಲೇಜು ಶಿಕ್ಷ ಣ ಇಲಾಖೆಗೆ ಪತ್ರ ಬರೆದು, ಯುಜಿಸಿ ಆದೇಶದ ಪ್ರಕಾರ ಹುದ್ದೆ ತುಂಬಲು ಕ್ರಮ ತೆಗೆದುಕೊಳ್ಳಬೇಕು ಎಂದು ಕುಬೇರಪ್ಪ ಒತ್ತಾಯಿಸಿದ್ದಾರೆ.