ರಟ್ಟೀಹಳ್ಳಿ: ಕುಡುಪಲಿ ಗ್ರಾಮದಲ್ಲಿನೂತನವಾಗಿ 1.70 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನ.22ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧ್ಯಕ್ಷತೆ ವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಕಟ್ಟಡ ಉದ್ಘಾಟಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಎಸ್.ವಿ.ಸಂಕನೂರು, ಪ್ರದೀಪ ಶೆಟ್ಟರ, ಆರ್.ಶಂಕರ, ಜಿ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಶಿವರಾಜ ಅಮರಾಪೂರ, ತಾ.ಪಂ.ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ, ಜಿ.ಪಂ.ಸದಸ್ಯ ಪ್ರಕಾಶ ಬನ್ನಿಕೋಡ, ತಾ.ಪಂ.ಉಪಾಧ್ಯಕ್ಷ ಭರಮಪ್ಪ ಯಲದಹಳ್ಳಿ, ತಾ.ಪಂ.ಸದಸ್ಯ ಹೇಮಣ್ಣ ಮುದರಡ್ಡೇರ, ಗ್ರಾ.ಪಂ.ಅಧ್ಯಕ್ಷ ನಜೀರಸಾಬ ದೊಡ್ಡಮನಿ, ಉಪಾಧ್ಯಕ್ಷ ನಾಗವ್ವ ಗೋಣಗೇರ ಭಾಗವಹಿಸುವರು.
ಆರೋಗ್ಯ ಕೇಂದ್ರಕ್ಕೆ ನಬಾರ್ಡ್ 23 (ಆರ್.ಐ.ಡಿ.ಎಫ್.) ಯೋಜನೆಯಲ್ಲಿ1.70 ಕೋಟಿ ರೂ. ಮಂಜೂರಿ ದೊರೆಯಿತು. 2019ರ ಫೆ.27ರಂದು ಆಗ ಶಾಸಕರಾಗಿದ್ದ ಬಿ.ಸಿ.ಪಾಟೀಲ್ ಭೂಮಿಪೂಜೆ ನೆರವೇರಿಸಿದ್ದರು.
ಗಮನ ಸೆಳೆದಿದ್ದ ವರದಿಗಳು
ಶಿಥಿಲಗೊಂಡು ಅಪಾಯದ ಅಂಚಿನಲ್ಲಿರುವ ಕುಡುಪಲಿ ಪಿಎಚ್ಸಿ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಹಾಗೂ ಅಲ್ಲಿಮೂಲಭೂತ ಸಮಸ್ಯೆಗಳ ಬಗ್ಗೆ ಹಲವು ಬಾರಿ ವಿಜಯ ಕರ್ನಾಟಕದಲ್ಲಿವಿಶೇಷ ವರದಿಗಳನ್ನು ಪ್ರಕಟಿಸಲಾಗಿತ್ತು. ವರದಿ ಪರಿಣಾಮ ಹಾಗೂ ಜನಪ್ರತಿನಿಧಿಗಳ ಮತ್ತು ಸರಕಾರದ ಕಾಳಜಿಯಿಂದ ಕುಡುಪಲಿ ಗ್ರಾಮದಲ್ಲಿಈಗ ದೊಡ್ಡ ಕಟ್ಟಡ ತಲೆ ಎತ್ತಿದೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧ್ಯಕ್ಷತೆ ವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಕಟ್ಟಡ ಉದ್ಘಾಟಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಎಸ್.ವಿ.ಸಂಕನೂರು, ಪ್ರದೀಪ ಶೆಟ್ಟರ, ಆರ್.ಶಂಕರ, ಜಿ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಶಿವರಾಜ ಅಮರಾಪೂರ, ತಾ.ಪಂ.ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ, ಜಿ.ಪಂ.ಸದಸ್ಯ ಪ್ರಕಾಶ ಬನ್ನಿಕೋಡ, ತಾ.ಪಂ.ಉಪಾಧ್ಯಕ್ಷ ಭರಮಪ್ಪ ಯಲದಹಳ್ಳಿ, ತಾ.ಪಂ.ಸದಸ್ಯ ಹೇಮಣ್ಣ ಮುದರಡ್ಡೇರ, ಗ್ರಾ.ಪಂ.ಅಧ್ಯಕ್ಷ ನಜೀರಸಾಬ ದೊಡ್ಡಮನಿ, ಉಪಾಧ್ಯಕ್ಷ ನಾಗವ್ವ ಗೋಣಗೇರ ಭಾಗವಹಿಸುವರು.
ಆರೋಗ್ಯ ಕೇಂದ್ರಕ್ಕೆ ನಬಾರ್ಡ್ 23 (ಆರ್.ಐ.ಡಿ.ಎಫ್.) ಯೋಜನೆಯಲ್ಲಿ1.70 ಕೋಟಿ ರೂ. ಮಂಜೂರಿ ದೊರೆಯಿತು. 2019ರ ಫೆ.27ರಂದು ಆಗ ಶಾಸಕರಾಗಿದ್ದ ಬಿ.ಸಿ.ಪಾಟೀಲ್ ಭೂಮಿಪೂಜೆ ನೆರವೇರಿಸಿದ್ದರು.
ಗಮನ ಸೆಳೆದಿದ್ದ ವರದಿಗಳು
ಶಿಥಿಲಗೊಂಡು ಅಪಾಯದ ಅಂಚಿನಲ್ಲಿರುವ ಕುಡುಪಲಿ ಪಿಎಚ್ಸಿ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಹಾಗೂ ಅಲ್ಲಿಮೂಲಭೂತ ಸಮಸ್ಯೆಗಳ ಬಗ್ಗೆ ಹಲವು ಬಾರಿ ವಿಜಯ ಕರ್ನಾಟಕದಲ್ಲಿವಿಶೇಷ ವರದಿಗಳನ್ನು ಪ್ರಕಟಿಸಲಾಗಿತ್ತು. ವರದಿ ಪರಿಣಾಮ ಹಾಗೂ ಜನಪ್ರತಿನಿಧಿಗಳ ಮತ್ತು ಸರಕಾರದ ಕಾಳಜಿಯಿಂದ ಕುಡುಪಲಿ ಗ್ರಾಮದಲ್ಲಿಈಗ ದೊಡ್ಡ ಕಟ್ಟಡ ತಲೆ ಎತ್ತಿದೆ.