ಆ್ಯಪ್ನಗರ

ಮತ್ತಷ್ಟು ಹೆಚ್ಚಿದ ಕುಮದ್ವತಿ ನೀರಿನ ಮಟ್ಟ

ರಟ್ಟೀಹಳ್ಳಿ : ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ಕುಮದ್ವತಿ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಿದ್ದು, ದಂಡೆಯ ಜಮೀನುಗಳು ಜಲಾವೃತವಾಗಿದ್ದು, ಅನೇಕ ಸೇತುವೆಗಳು ಮುಳುಗಿವೆ.

Vijaya Karnataka 10 Aug 2019, 5:00 am
ರಟ್ಟೀಹಳ್ಳಿ : ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ಕುಮದ್ವತಿ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಿದ್ದು, ದಂಡೆಯ ಜಮೀನುಗಳು ಜಲಾವೃತವಾಗಿದ್ದು, ಅನೇಕ ಸೇತುವೆಗಳು ಮುಳುಗಿವೆ.
Vijaya Karnataka Web HVR-9 RATTIHALLI
ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ 1ನೇ ಅಂಗನವಾಡಿ ಕೇಂದ್ರ ಕುಮದ್ವತಿ ನದಿ ನೀರಿನಿಂದ ಜಲಾವೃತವಾಗಿದೆ.


ಗುರುವಾರ ಎಲಿವಾಳ ಸೇತುವೆ ಹಾಗೂ ಹಿರೆಮೊರಬ-ಚಿಕ್ಕಮೊರಬ, ಬಡಸಂಗಾಪುರ-ಕುಡುಪಲಿ ಬಾಂದರ್‌ಗಳು ಮುಳುಗಿ ಸಂಚಾರ ಸ್ಥಗಿತವಾಗಿತ್ತು. ಗುರುವಾರವರೆಗೂ ಎಲಿವಾಳ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿಯೇ ಜನರು ಸಂಚಾರ ನಡೆಸಿದ್ದರು. ಆದ್ರೆ ಶುಕ್ರವಾರ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಇಲ್ಲಿ ಸಂಚಾರ ಸ್ಥಗಿತವಾಗಿದೆ.

ಕುಡುಪಲಿ ಸೇತುವೆ ಮೇಲೆ ನೀರು:
ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಕುಮದ್ವತಿ ನದಿಗೆ ಅಡ್ಡವಾಗಿ 40 ವರ್ಷದ ಹಿಂದೆ ನಿರ್ಮಿಸಿರುವ ಸೇತುವೆ ಮೇಲೆ ಶುಕ್ರವಾರ ಸಂಜೆ 4 ಗಂಟೆ ವೇಳೆಗೆ ನೀರು ನೀರು ಹರಿಯುತ್ತಿದೆ. ಇದನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ತುಂಬಿದ ಕುಮದ್ವತಿ ನದಿಗೆ ಮಹಿಳೆಯರು ಪೂಜೆ ಸಲ್ಲಿಸುತ್ತಿದ್ದರೆ, ಪುರುಷರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು.

ಜಲಾವೃತವಾದ ಅಂಗನವಾಡಿ:
ಕುಡುಪಲಿ ಗ್ರಾಮದ 1 ನೇ ಅಂಗನವಾಡಿ ಕೇಂದ್ರಕ್ಕೆ ಕುಮದ್ವತಿ ನೀರು ನುಗ್ಗಿದ್ದು ಸಂಪೂರ್ಣ ಜಲಾವೃತವಾಗಿದೆ. ಮುಂಜಾಗ್ರತವಾಗಿ ಆಹಾರ ಪದಾರ್ಥಗಳನ್ನು ಸ್ಥಳಾಂತರ ಮಾಡಲಾಗಿತ್ತು. ಅಂಗನವಾಡಿಗೆ ರಜೆ ಇರುವುದರಿಂದ ಅಪಾಯವಾಗಿಲ್ಲ.

ಶಿಕಾರಿಪುರ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮದಗ ಮಾಸೂರು ಐತಿಹಾಸಿಕ ಕೆರೆಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದು, ಕೆರೆ ನೀರು ಕುಮದ್ವತಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಶಿಕಾರಿಪುರ ಮಾಸೂರು ಭಾಗದಲ್ಲಿ ಮಳೆ ಕಡಿಮೆಯಾಗದೇ ಇದ್ದರೆ ಕುಮದ್ವತಿ ಅಪಾಯದ ಹಂತ ಮೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಕುಮದ್ವತಿ ನದಿ ದಂಡೆಯ ಸಮೀಪದಲ್ಲಿನ ಜಮೀನಯಗಳಲ್ಲಿ ನೀರು ನಿಂತ್ತಿದ್ದು ಅನೇಕ ಬೆಳೆಗಳು ನೀರಿನಿಂದ ಜಲಾವೃತವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ