ಆ್ಯಪ್ನಗರ

ಕುರುಕ್ಷೇತ್ರ ನಾಟಕ ಪ್ರದರ್ಶನ

ಹಾವೇರಿ : ಮರೆತು ಹೋದ ಪೌರಾಣಿಕ ರಂಗಭೂಮಿಯ ವೈಭವವನ್ನು ನೆನಪಿಸುವ ಸಂಗೀತ ಪ್ರಧಾನ ಕುರುಕ್ಷೇತ್ರ ನಾಟಕವು ನೋಡುಗರ ಹಿತ ನೀಡಿತು.

Vijaya Karnataka 14 Dec 2022, 1:02 pm
ಹಾವೇರಿ : ಮರೆತು ಹೋದ ಪೌರಾಣಿಕ ರಂಗಭೂಮಿಯ ವೈಭವವನ್ನು ನೆನಪಿಸುವ ಸಂಗೀತ ಪ್ರಧಾನ ಕುರುಕ್ಷೇತ್ರ ನಾಟಕವು ನೋಡುಗರ ಹಿತ ನೀಡಿತು.
Vijaya Karnataka Web drama


ಜಿಲ್ಲೆಯ ಹಾನಗಲ್ಲ ತಾಲೂಕಿನ ಶೇಷಗಿರಿಯ ಕಲಾಭವನದಲ್ಲಿ ಪ್ರದರ್ಶನಗೊಂಡ ಈ ಕುರುಕ್ಷೇತ್ರ ನಾಟಕದಲ್ಲಿ ಹೆಗ್ಗೋಡಿನ ನೀನಾಸಂ ರಂಗ ತರಬೇತಿ ಪಡೆದ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು, ಶಿವಮೊಗ್ಗ ರಂಗಾಯಣದ ನಿರ್ದೇಶಕ ಡಾ. ಎಂ. ಗಣೇಶ ನಿರ್ದೇಶನದಲ್ಲಿ ಸಿದ್ಧಪಡಿಸಿ ನಾಡಿನಾದ್ಯಂತ 'ಕುರುಕ್ಷೇತ್ರ' ನಾಟಕ ಸಂಚರಿಸುತ್ತಿದೆ.

ಕಾಲ ಕಾಲಕ್ಕೆ ರಾಮಾಯನ ಮಹಾಭಾರತದ ಕಥಾನಕಗಳು ಮತ್ತೆ ಮತ್ತೆ ರಂಗದ ಮೇಲೆ ಬರುವುದುಂಟು. ಅದರಲ್ಲೂ ಮಹಾಭಾರತ ಮಹಾಕಾವ್ಯ ಎಲ್ಲ ಕಾಲದ ಮನುಷ್ಯ ಜೀವಿಗಳ ಎಲ್ಲ ವೈರುಧ್ಯಗಳಿಗೆ, ಮನುಷ್ಯ ಮೌಲ್ಯಗಳಿಗೆ ಸಾಕ್ಷಿಯಾದದ್ದು ಅದರಲ್ಲಿಯ 'ಕುರುಕ್ಷೇತ್ರ' ಯುದ್ಧ ಕಥಾನಕ ಭಾಗ.

ಪ್ರದರ್ಶಿತ 'ಕುರುಕ್ಷೇತ್ರ' ನಾಟಕ ಕೃಷ್ಣ ಸಂದಾನದ ಸನ್ನಿವೇಶದ ಮೂಲಕ ಆರಂಭವಾಗಿ ದುರ್ಯೋಧನನ ಅಂತ್ಯದವರೆಗೆ ಲಂಬಿತವಾದದ್ದು. ಚತುರ ಕೃಷ್ಣ ಪರಮಾತ್ಮ, ಧೀರ ಅರ್ಜುನ, ಸ್ವಾಭಿಮಾನಿ ದುರ್ಯೋಧನ, ತ್ಯಾಗಿ ಕರ್ಣ, ಕುಟಿಲ ಶಕುನಿ, ಧರ್ಮರಾಯ ಮುಂತಾದ ವಿಭಿನ್ನ ಮನೋಭಾವದ ಪಾತ್ರಗಳನ್ನು ಮನೋಜ್ಞವಾಗಿ ಕಲಾವಿದರು ಅಭಿನಯಿಸಿದರು.

ನಿರ್ದೇಶಕ ಡಾ. ಗಣೇಶ ಅವರು ಮಹಾಭಾರತದ 'ಕುರುಕ್ಷೇತ್ರ' ಯುದ್ಧದ ಪೂರ್ವ ಮತ್ತು ಆನಂತರದ ಮಹತ್ವದ ಘಟನೆಗಳನ್ನು ಜೋಡಿಸಿ ಕಟ್ಟಿದ ನಾಟಕವಿದು. ಕೃಷ್ಣ - ವಿದುರರ ಭೇಟಿ, ಕುಂತಿ - ದುರ್ಯೋಧನರ ಭೇಟಿ, ಕರ್ಣ ಹುಟ್ಟಿನ ಗುಟ್ಟು ರಟ್ಟಾಗುವ ದೃಶ್ಯ, ಕೌರಚ ಆಸ್ಥಾನದಲ್ಲಿ ಕೃಷ್ಣನನ್ನು ಸೆರೆ ಹಿಡಿಯುವ, ಕೌರವ ಅಹಂಕಾರವನ್ನು ಛಿದ್ರಗೊಳಿಸುವ ಮನಮೋಹಕ ದೃಶ್ಯಗಳು ಕಲಾವಿದರು ನಾಟಕದಲ್ಲಿ ಕಟ್ಟಿಕೊಟ್ಟರು.

ನಮ್ಮ ವೃತ್ತಿ ರಂಗಭೂಮಿಯ ಗತವೈಭವದ ಸೀನರಿಗಳನ್ನು ಸಹಜವಾಗಿ ನೆನಪಿಸುತ್ತ, ಸ್ವತಃ ಕಲಾವಿದರೇ ರಂಗದ ಮೇಲೆ ಹಾಡುಗಳನ್ನು ಹಾಡುವುದು, ಕಣ್ತುಂಬುವ ರಾಜ ಪೋಷಾಕುಗಳು ನಿರರ್ಗಳವಾಗಿ ಹೇಳುವ ಸಂಭಾಷಣೆಗಳು ಇಡೀ ಪೌರಾಣಿಕ ರಂಗ ಸಂಭ್ರಮವನ್ನು ನೋಡುಗರಿಗೆ ಮುದ ನೀಡಿತು.

ಬಿ.ಪುಟ್ಟಸ್ವ್ವಾಮಯ್ಯ, ಕುವೆಂಪು ಮುಂತಾದವರ 'ಕುರುಕ್ಷೇತ್ರ' ನಾಟಕಗಳ ಪಠ್ಯಸಾರಗಳನ್ನು ಜೋಡಿಸಿ ಪ್ರದರ್ಶನವಾದ 'ಕುರುಕ್ಷೇತ್ರ' ನಾಟಕ ಮರೆಯದ ಅನುಭವ ನೀಡಿತು. ಶೇಷಗಿರಿಯ ಗಜಾನನ ಯುವಕ ಮಂಡಳಿ, ಹೆಗ್ಗೋಡಿನ ಸತ್ಯ ಶೋಧನಾ ರಂಗ ಸಮುದಾಯ ಜನುಮನದಾಟ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಯತ್ನಗಳು ಶ್ಲ್ಯಾಘನೀಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ