ಆ್ಯಪ್ನಗರ

ಕಾರ್ಮಿಕರ ಸಂಘದ ಪ್ರಥಮ ತಾಲೂಕು ಸಮ್ಮೇಳನ

ರಾಣೇಬೆನ್ನೂರು: ಕಾರ್ಮಿಕರಲ್ಲಿ ಅನಕ್ಷ ರತೆಯ ಕೊರತೆ ಇರುವುದರಿಂದ ಕಾರ್ಮಿಕ ಇಲಾಖೆಯಿಂದ ದೊರೆಯುವ ಯೋಜನೆಗಳಿಂದ ವಿಫಲರಾಗಿದ್ದಾರೆ, ಇದರಿಂದ ಹೊರಬಂದು ಕಾರ್ಮಿಕ ಇಲಾಖೆಯಿಂದ ದೊರೆಯುವ ಗುರುತಿನ ಚೀಟಿ ಸೇರಿದಂತೆ ಹತ್ತು ಹಲವಾರು ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ಸಂಘಟಿತರಾಗಿ ರಾಜ್ಯ ಒಕ್ಕೂಟದ ನಿರ್ದೇಶನ ಮೇರೆಗೆ ತಾವುಗಳು ಸಬಲರಾಗಿ ಇಲಾಖೆಯ ಕಣ್ಣು ತೆರೆಸಲು ನಾವೆಲ್ಲರೂ ಮುಂದಾಗೋಣ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ಎಚ್‌.ಕೆ.ವೆಂಕ್ಟೇಶ್‌ ಅಸಂಘಟಿತ ಕಾರ್ಮಿಕರಿಗೆ ಸಲಹೆ ನೀಡಿದರು.

Vijaya Karnataka 12 Mar 2019, 5:00 am
ರಾಣೇಬೆನ್ನೂರು: ಕಾರ್ಮಿಕರಲ್ಲಿ ಅನಕ್ಷ ರತೆಯ ಕೊರತೆ ಇರುವುದರಿಂದ ಕಾರ್ಮಿಕ ಇಲಾಖೆಯಿಂದ ದೊರೆಯುವ ಯೋಜನೆಗಳಿಂದ ವಿಫಲರಾಗಿದ್ದಾರೆ, ಇದರಿಂದ ಹೊರಬಂದು ಕಾರ್ಮಿಕ ಇಲಾಖೆಯಿಂದ ದೊರೆಯುವ ಗುರುತಿನ ಚೀಟಿ ಸೇರಿದಂತೆ ಹತ್ತು ಹಲವಾರು ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ಸಂಘಟಿತರಾಗಿ ರಾಜ್ಯ ಒಕ್ಕೂಟದ ನಿರ್ದೇಶನ ಮೇರೆಗೆ ತಾವುಗಳು ಸಬಲರಾಗಿ ಇಲಾಖೆಯ ಕಣ್ಣು ತೆರೆಸಲು ನಾವೆಲ್ಲರೂ ಮುಂದಾಗೋಣ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ಎಚ್‌.ಕೆ.ವೆಂಕ್ಟೇಶ್‌ ಅಸಂಘಟಿತ ಕಾರ್ಮಿಕರಿಗೆ ಸಲಹೆ ನೀಡಿದರು.
Vijaya Karnataka Web HVR-11 RNR 03


ಅವರು ನಗರದ ಮೆಡ್ಲೇರಿ ರಸ್ತೆಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಸೋಮವಾರ ನಡೆದ ಪ್ರಥಮ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ರಾಣೇಬೆನ್ನೂರು ತಾಲೂಕಿನಲ್ಲಿ 1500 ಕಟ್ಟಡ ಕಾರ್ಮಿಕರಿದ್ದಾರೆ, 8 ಸಾವಿರ ಕೋಟಿ ರೂ. ಅನುದಾನವಿದೆ, ಅದರ ಬಳಕೆ ವಿಚಾರಣೆ ಬಗ್ಗೆ ಮಾಹಿತಿ ಪಡೆಯಲು ಸಂಘಟಿತ ಕಾರ್ಮಿಕ ಸಂಘಟನೆಗಳ ಕೊರತೆ ಎದ್ದು ಕಾಣುತ್ತದೆ, ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಗ್ರಾಮ ಸಮಿತಿಗಳ ರಚನೆ ಅವಶ್ಯಕತೆ ಹೆಚ್ಚಾಗಿದೆ, ಸಂಘಟನೆಯಿಂದ ಹಳ್ಳಿಯ ಎಲ್ಲ ಕಟ್ಟಡ ಕಾರ್ಮಿಕರಿಗೆ ತಲುಪಲಿ ಎಂಬುದು ಸಂಘಟನೆಯ ಉದ್ದೇಶವಾಗಿದೆ ಎಂದು ಹೇಳಿದರು.

ಗಣ್ಯ ವರ್ತಕ ದಯಾಲಾಲ್‌ ಸಾಂಘವಿ ಮಹಿಳಾ ಕಾರ್ಮಿಕರು ಸಮಯ ಪಾಲನೆ ಮಾಡಿರಿ ಎಂದು ಸಲಹೆ ನೀಡಿ 3 ವಾಚ್‌ಗಳನ್ನು ಉಚಿತವಾಗಿ ವಿತರಿಸಿದರು. ರಾಜ್ಯ ಉಪಾಧ್ಯಕ್ಷೆ ರೇಣುಕಾ ಲಮಾಣಿ, ಪ್ರಧಾನ ಕಾರ್ಯದರ್ಶಿ ಜೆ.ಲೋಕೇಶನಾಯ್ಕ, , ಗೀತಾ ಚೌಹಾಣ್‌, ರೇಖಾ ಜಯಪ್ಪ, ನೇತ್ರಾವತಿ ಎಲ್‌, ಇತರ ಪದಾಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ