ಆ್ಯಪ್ನಗರ

ದೊಡ್ಡಾಟ ಪ್ರಸಾದನ ಕಲಾವಿದನಿಗೆ ಪ್ರಶಸ್ತಿ

ಶಿಗ್ಗಾವಿ: ದೊಡ್ಡಾಟದ ಪ್ರಸಾದನ ಕಲಾವಿದ, ಶಿಗ್ಗಾವಿಯ ಶಂಕರ ಅರ್ಕಸಾಲಿ ಅವರಿಗೆ 2018ರ ಸಾಲಿನ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿ ಒಲಿದಿದೆ.

Vijaya Karnataka 27 Dec 2018, 5:00 am
ಶಿಗ್ಗಾವಿ: ದೊಡ್ಡಾಟದ ಪ್ರಸಾದನ ಕಲಾವಿದ, ಶಿಗ್ಗಾವಿಯ ಶಂಕರ ಅರ್ಕಸಾಲಿ ಅವರಿಗೆ 2018ರ ಸಾಲಿನ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿ ಒಲಿದಿದೆ.
Vijaya Karnataka Web largest cosmetic artist award
ದೊಡ್ಡಾಟ ಪ್ರಸಾದನ ಕಲಾವಿದನಿಗೆ ಪ್ರಶಸ್ತಿ


ಬಾಲ್ಯದಲ್ಲೇ, ಕಲಾವಿದರಾಗಿದ್ದ ಅಜ್ಜ ರಾಮಚಂದ್ರಪ್ಪ ಅರ್ಕಸಾಲಿ ಗರಡಿಯಲ್ಲಿ ತರಬೇತಿ ಪಡೆದು ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಾಮಾಯಣ, ಮಹಾಭಾರತ, ಭಾಗವತ ಕಥಾವಸ್ತು ಹೊಂದಿರುವ ಪಾತ್ರಗಳ ಘನತೆ, ಅಂತಸ್ತಿಗೆ ತಕ್ಕಂತೆ ವೇಷಭೂಷಣ ಮಾಡಿದ್ದಾರೆ. ರಾಜರು, ಮಹಾರಾಜರು, ರಾಕ್ಷ ಸರು, ಯಕ್ಷ ಗಂಧರ್ವ, ಕಿನ್ನರಿ ಕಿಂಪುರುಷರ ವೇಷಧಾರಿಗಳಿಗೆ ಕಿರೀಟ, ಎದೆಪದಕ, ಕಂಠಹಾರ, ವೀರಗಾಸೆ (ಸೊಂಟಪಟ್ಟಿ) ನಾಗರಪಣಿ, ಚಕ್ರ, ಕರ್ಣಕುಂಡಲ, ಮುಂಗೈಕಟ್ಟುಗಳನ್ನು ಬಳಸಿ ವೇಷಭೂಷಣ ಮಾಡುವಲ್ಲಿ ಶಂಕರ ಪ್ರಸಿದ್ಧರಾಗಿದ್ದಾರೆ. ಸ್ತ್ರೀ ವೇಷದಾರಿಗಳಿಗೂ ಅವರ ಪಾತ್ರಕ್ಕೆ ವಸ್ತ್ರಾಂಲಕಾರ ಮಾಡಿಯೂ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ, ಬೆಲ್ಜಿಯಂ ದೇಶಕ್ಕೂ ವೇಷಭೂಷಣಗಳನ್ನು ಕಳುಹಿಸಿಕೊಟ್ಟು ಆ ದೇಶದ ಕಲಾವಿದರಿಂದ ಮೆಚ್ಚುಗೆ ಗಳಿಸಿರುವುದು ವಿಶೇಷ. ಅರ್ಕಸಾಲಿ ಅವರ ಸಾಧನೆ ಪರಿಗಣಿಸಿ ಸಂಘಸಂಸ್ಥೆಗಳು ಪ್ರಶಸ್ತಿ ನೀಡಿವೆ.

''ನನಗೆ ಸಿಕ್ಕಿದ್ದು ಸಂತಸ ತಂದಿದೆ. ಪರದೆ ಮೇಲಿನ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವಾಗುತಿತ್ತು. ಈ ಬಾರಿ ನೇಪಥ್ಯದ ಕಲಾವಿದರನ್ನು ಅಕಾಡೆಮಿ ಗುರುತಿಸಿದೆ. ರಾಜ್ಯ, ಅಂತಾರಾಜ್ಯಗಳಲ್ಲಿ ಕಲೆ ಪ್ರದರ್ಶಿಸಿದ್ದೇನೆ. ಒಟ್ಟಾರೆ ನನ್ನ 30 ವರ್ಷದ ಶ್ರಮ ಗುರುತಿಸಿ ಪ್ರಶಸ್ತಿ ನೀಡಿದ್ದು ನನ್ನ ಸುದೈವ. ಅಕಾಡೆಮಿಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದು ಶಂಕರ ಅರ್ಕಸಾಲಿ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ