ಆ್ಯಪ್ನಗರ

ಕೋರ್ಟ್‌ ಆವರಣದಲ್ಲಿಯೇ ನ್ಯಾಯವಾದಿ ಸಾವು

ರಾಣೇಬೆನ್ನೂರ: ನಗರದಲ್ಲಿನ್ಯಾಯವಾದಿಯೊಬ್ಬರು ಬುಧವಾರ ಕೋರ್ಟ್‌ ಕಲಾಪದ ಅವಧಿಯಲ್ಲಿಯೇ ನ್ಯಾಯಾಲಯದ ಆವರಣದಲ್ಲಿಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Vijaya Karnataka 17 Oct 2019, 5:00 am
ರಾಣೇಬೆನ್ನೂರ: ನಗರದಲ್ಲಿನ್ಯಾಯವಾದಿಯೊಬ್ಬರು ಬುಧವಾರ ಕೋರ್ಟ್‌ ಕಲಾಪದ ಅವಧಿಯಲ್ಲಿಯೇ ನ್ಯಾಯಾಲಯದ ಆವರಣದಲ್ಲಿಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Vijaya Karnataka Web lawyers death inside court premises
ಕೋರ್ಟ್‌ ಆವರಣದಲ್ಲಿಯೇ ನ್ಯಾಯವಾದಿ ಸಾವು


ಇಲ್ಲಿನ ವಿದ್ಯಾನಗರದ ನಿವಾಸಿ ಸುಧಾಮ ಹೂಲಿಹಳ್ಳಿ (64) ಮೃತರು.

ಸುಧಾಮ ಅವರು ಎಂದಿನಂತೆ ನ್ಯಾಯಾಲಯ ಸಂರ್ಕೀಣಕ್ಕೆ ಆಗಮಿಸಿ ಒಂದನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರ ನ್ಯಾಯಾಲಯದಲ್ಲಿಕಕ್ಷಿದಾರರ ಪರವಾಗಿ ವಕಾಲತು ಮಾಡಿ ಹೊರ ಬರುತ್ತಿರುವಾಗ ದಿಢೀರನೆ ಕುಸಿದುಬಿದ್ದರು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದರು.

ಮೃತರು ಸೇನೆಯಲ್ಲಿಕೆಲ ವರ್ಷ ಸೇವೆ ಸಲ್ಲಿಸಿ ನಂತರ ಭಾರತೀಯ ಜೀವ ವಿಮಾ ನಿಗಮದಲ್ಲಿಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಒಂದು ವರ್ಷದ ಹಿಂದೆಯಷ್ಟೇ ವಕೀಲಿ ವೃತ್ತಿ ಪ್ರಾರಂಭಿಸಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ