ಆ್ಯಪ್ನಗರ

ಮೊಬೈಲ್‌ ಬಿಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳಿ

ಗುತ್ತಲ: ಆಧುನಿಕ ಕಾಲದಲ್ಲಿ ಯುವಕರು ಮೊಬೈಲ್‌ನಲ್ಲಿ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕವಾಗಿ ಸದೃಢರಾಗದೇ ಆಲಸಿಗಳಾಗುತ್ತಿರುವದು ಬೇಸರದ ಸಂಗತಿ ಎಂದು ಹಿರಿಯ ಕುಸ್ತಿ ಪೈಲ್ವಾನ ಶೇಖಪ್ಪ ಹಾವೇರಿ ಹೇಳಿದರು.

Vijaya Karnataka 13 May 2019, 5:00 am
ಗುತ್ತಲ: ಆಧುನಿಕ ಕಾಲದಲ್ಲಿ ಯುವಕರು ಮೊಬೈಲ್‌ನಲ್ಲಿ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕವಾಗಿ ಸದೃಢರಾಗದೇ ಆಲಸಿಗಳಾಗುತ್ತಿರುವದು ಬೇಸರದ ಸಂಗತಿ ಎಂದು ಹಿರಿಯ ಕುಸ್ತಿ ಪೈಲ್ವಾನ ಶೇಖಪ್ಪ ಹಾವೇರಿ ಹೇಳಿದರು.
Vijaya Karnataka Web HVR-12GTL1


ಪಟ್ಟಣದಲ್ಲಿ ಪ್ರತಿ ವರ್ಷದಂತೆ ಪ್ಯಾಟಿ ಬಸವೇಶ್ವರ ದೇವಸ್ಥಾನ ಕುಸ್ತಿ ಕಮೀಟಿಯಿಂದ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಕುಸಿ ಪಂದ್ಯಾವಳಿ ಉದ್ದೇಶಿಸಿ ಮಾತನಾಡಿದ ಮಾಜಿ ಪೈಲ್ವಾನ ಕುಸ್ತಿಯಿಂದ ಯುವಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗುವ ಜೊತೆಗೆ ದುಶ್ಚಟಗಳಿಂದ ದೂರ ಉಳಿಯಲು ಸಹಕಾರಿಯಾಗುವದು ಎಂದರು.

ಕುಸ್ತಿ ಪಂದ್ಯಾವಳಿಯಲ್ಲಿ ಹಾವೇರಿ ಜಿಲ್ಲೆ ಸೇರಿದಂತೆ ಬಳ್ಳಾರಿ, ಧಾರವಾಡ, ಗದಗ, ತುಮಕೂರ, ಸೇರಿದಂತೆ ವಿವಿಧ ಭಾಗಗಳಿಂದ ಅನೇಕ ಜಟ್ಟಿಗಳು ಭಾಗವಹಿಸಿದ್ದರು.

ಕಮೀಟಿಯ ಚನ್ನಬಸಪ್ಪ ಕುರುವತ್ತಿಗೌಡ್ರ, ಗಫರಸಾಬ ಹಾಲಗಿ, ಪರಮೇಶಪ್ಪ ಕುರುವತ್ತಿಗೌಡ್ರ, ಕೋಟ್ರೆಶಪ್ಪ ಹೊನ್ನಮ್ಮನವರ, ಬಸವರಾಜ ಪಸಗಿ, ಮಂಜುನಾಥ ಹಾವೇರಿ, ನೀಲಪ್ಪ ಬಾರ್ಕಿ, ಹೇಮಪ್ಪ ಸಂಗಮ್ಮನವರ, ನಾಗಪ್ಪ ಚಿಗರಿ, ನೀಲಪ್ಪ ಗಿರಿಯಪ್ಪನವರ, ಶೌಕತಅಲಿ ಕುದರಾರ‍ಯಳ, ಅಡಿವೆಪ್ಪ ದೇವನೀಲಣ್ಣನವರ, ಮಾದೇವಪ್ಪ ಕಿತ್ತೂರ, ಸಿದ್ಲಿಂಗಪ್ಪ ಹಾವೇರಿ, ತಿರಕಪ್ಪ ಕೋಟೆರ, ಅಜ್ಜಪ್ಪ ಅಕ್ಕಿ, ಗುಡ್ಡಪ್ಪ ಬಸಾಪುರ, ಮಲಕಪ್ಪ ನಂದಿ, ಅಜ್ಜಪ್ಪ ಇಟಗಿ, ನೀಲಪ್ಪ ಗಿರಿಯಪ್ಪನವರ ಸೇರಿದಂತೆ ಅನೇಕರಿದ್ದರು. ಕುಸ್ತಿಯನ್ನು ವೀಕ್ಷ ಸಲು ಸುತ್ತ ಮುತ್ತಲಿನ ಗ್ರಾಮಗಳ ಸಹಸ್ರಾರು ಸಂಖ್ಯೆಯ ಜನರು ಸೇರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ