ಆ್ಯಪ್ನಗರ

ಕೆಪಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ

ರಾಣೇಬೆನ್ನೂರ: ಅನರ್ಹ ಶಾಸಕ ಆರ್‌.ಶಂಕರ್‌ ವರ್ತನೆಗೆ ಬೇಸತ್ತ ಕೆಪಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ರಾತ್ರಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಕೋಳಿವಾಡ ಸಮ್ಮುಖದಲ್ಲಿಕಾಂಗ್ರೆಸ್‌ಗೆ ಸೇರ್ಪಡೆಯಾದರು.

Vijaya Karnataka 21 Nov 2019, 5:00 am
ರಾಣೇಬೆನ್ನೂರ: ಅನರ್ಹ ಶಾಸಕ ಆರ್‌.ಶಂಕರ್‌ ವರ್ತನೆಗೆ ಬೇಸತ್ತ ಕೆಪಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ರಾತ್ರಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಕೋಳಿವಾಡ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
Vijaya Karnataka Web leaving kpjp and joining congress
ಕೆಪಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ


ಈ ಸಮಯದಲ್ಲಿಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ತಾಲೂಕಿನ ರಾಜಕೀಯದಲ್ಲಿಕೆ.ಬಿ.ಕೋಳಿವಾಡರು ಒಂದು ದೈತ್ಯ ಶಕ್ತಿಯಾಗಿದ್ದು ಕಳೆದ ಐದು ದಶಕಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿಕ್ಷೇತ್ರದಲ್ಲಿಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದ್ದರಿಂದ ಉಪ ಚುನಾವಣೆಯಲ್ಲಿಕೋಳಿವಾಡರನ್ನು ಅಧಿಕ ಮತಗಳಿಂದ ಆರಿಸಿ ತರಬೇಕು ಎಂದರು.

ಅಭ್ಯರ್ಥಿ ಕೆ.ಬಿ.ಕೋಳಿವಾಡ ಮಾತನಾಡಿ, ಬೇರೆಯವರ ಕೈಯಲ್ಲಿನಮ್ಮ ಕ್ಷೇತ್ರವನ್ನು ಕೊಟ್ಟಿದ್ದರಿಂದ ಒಂದೂವರೆ ವರ್ಷ ತಾಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸೂರ್ಯನಿಗೂ ಒಂದೊಂದು ಬಾರಿ ಗ್ರಹಣ ಹಿಡಿಯುತ್ತದೆ. ಹಾಗೆಯೇ ಒಂದೂವರೆ ವರ್ಷಗಳ ಕಾಲ ಗ್ರಹಣ ಹಿಡಿದಿತ್ತು. ಗ್ರಹಣ ಬಿಟ್ಟ ಕಾಲ ಈಗ ಬಂದಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿದ್ದರೆ ಮತ್ತೊಂದು ಬಾರಿ ಶಾಸಕನಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ಕೆಪಿಜೆಪಿ ನಗರಸಭಾ ಸದಸ್ಯರುಗಳಾದ ನಾಗರಾಜ ಪವಾರ, ನಿಂಗರಾಜ ಕೋಡಿಹಳ್ಳಿ, ನೂರುಲ್ಲಾಖಾಜಿ, ನಗರಸಭೆ ಮಾಜಿ ಸದಸ್ಯ ಶಿವಣ್ಣ ಮಣೇಗಾರ, ಕೆ.ಆರ್‌.ಬ್ಯಾಡಗಿ, ಮಂಜಣ್ಣ ಕಂಬಳಿ, ಸುರೇಶ್‌ ದೊಡ್ಮನಿ, ಅಲ್ತಾಫ್‌ ಖಾಜಿ, ಮೃತ್ಯುಂಜಯ ಗುದಿಗೇರ, ಸಲೀಂ ಮೆಣಸಿನಕಾಯಿ, ನಾರಾಯಣ ಮೆಹರ್ವಾಡೆ ಮತ್ತಿತರರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಹರಿಹರದ ಶಾಸಕ ರಾಮಪ್ಪ, ವಿಧಾನ ಪರಿಷತ್‌ ಸದಸ್ಯ ಜಬ್ಬಾರ ಸಾಹೇಬ, ಮೀರಾ ಪ್ರಭಾಕರ, ಪುಟ್ಟಪ್ಪ ಮರಿಯಮ್ಮನವರ, ಕೃಷ್ಣಪ್ಪ ಕಂಬಳಿ, ಬಸನಗೌಡ ಮರದ, ರೇವಣಸಿದ್ದಪ್ಪ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ