ಆ್ಯಪ್ನಗರ

ಅಕ್ರಮ ಸಾಗುವಳಿಗೆ ಕಾನೂನು ಕ್ರಮ

ಬ್ಯಾಡಗಿ: ತಾಲೂಕು ಭೂ ನ್ಯಾಯ ಮಂಡಳಿಯ (ಲ್ಯಾಂಡ್‌ ಗ್ರಾಂಟ್‌ ಕಮೀಟಿ) ಆದೇಶ ಧಿಕ್ಕರಿಸಿ ಮಂಡಳಿಯ ಗಮನಕ್ಕೆ ತರದೇ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವರ ವಿರುದ್ಧ ಶೀಘ್ರದಲ್ಲೆಕಾನೂನು ಕ್ರಮ ಜರುಗಿಸುವುದಾಗಿ ಶಾಸಕ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

Vijaya Karnataka 4 Jul 2020, 5:00 am
ಬ್ಯಾಡಗಿ: ತಾಲೂಕು ಭೂ ನ್ಯಾಯ ಮಂಡಳಿಯ (ಲ್ಯಾಂಡ್‌ ಗ್ರಾಂಟ್‌ ಕಮೀಟಿ) ಆದೇಶ ಧಿಕ್ಕರಿಸಿ ಮಂಡಳಿಯ ಗಮನಕ್ಕೆ ತರದೇ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವರ ವಿರುದ್ಧ ಶೀಘ್ರದಲ್ಲೆಕಾನೂನು ಕ್ರಮ ಜರುಗಿಸುವುದಾಗಿ ಶಾಸಕ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.
Vijaya Karnataka Web 03BYD1_23
ಬ್ಯಾಡಗಿ ತಹಸೀಲ್ದಾರ್‌ ಕಚೇರಿಯಲ್ಲಿಬಗರಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು.


ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿನಡೆದ ಬಗರಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು, 1974 ಹಿಂದೆ ಭೂ ಸಾಗುವಳಿ ಮಾಡಿದ ರೈತರ ಹಿತರಕ್ಷಣೆ ಸರಕಾರ ಬದ್ಧವಾಗಿದೆ. ಆದರೆ ಇತ್ತೀಚೆಗೆ 2-3 ವರ್ಷಗಳಿಂದ ಕೆಲ ಭಾಗಗಳಲ್ಲಿಅನಧೀಕೃತ ಸಾಗುವಳಿ ಮಾಡಿದ ಪ್ರಕರಣ ಕಂಡುಬಂದಿದ್ದು, ಅಂಥವನ್ನು ಯಾವುದೇ ಸಬೂಬು ನೀಡದೆ ತೆರೆವುಗೊಳಿಸುವಂತೆ ತಹಸೀಲ್ದಾರ ಶರಣಮ್ಮ ಕಾರಿಗೆ ಸೂಚಿಸಿದರು.

ಅಸಹಾಯಕತೆ ತೋರಿದ ತಹಸೀಲ್ದಾರ:
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ, ಅಕ್ರಮ ಸಾಗುವಳಿ ಬಗ್ಗೆ ಹಲವು ಬಾರಿ ಮಾಹಿತಿ ಕಲೆ ಹಾಕಿ ಸರಕಾರಿ ಭೂಮಿಗೆ ಕ್ರಂಚ ಅಳವಡಿಸಿ ಬಂದರೂ ಮತ್ತೆ ಅದನ್ನೆಲ್ಲತೆರವುಗೊಳಿಸಿ ಉಳುಮೆ ಮಾಡುತ್ತಿದ್ದಾರೆ. ಈ ಕುರಿತಂತೆ ಅಧಿಕಾರಿಗಳೊಂದಿಗೆ ತೆರಳಿ ನೋಟಿಸ್‌ ನೀಡಲು ಮುಂದಾದಲ್ಲಿಡಿಸಿ, ಎಸಿ, ಶಾಸಕ ಯಾರು ಬೇಕಾದರೂ ಬರಲಿ ನಾವು ಸಾಗುವಳಿ ನಿಲ್ಲಿಸಲ್ಲಎಂದು ಕೆಲವರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಅಸಹಾಯಕತೆ ತೋಡಿಕೊಂಡರು.

ಬಗರಹುಕುಂ ಯೋಜನೆಯಡಿ ಭೂಮಿ ಪಡೆಯವಲ್ಲಿಮಾಹಿತಿ ಕೊರತೆಯಿಂದ ಕೆಲವರು ವಂಚಿತರಾಗಿದ್ದಾರೆ. ಅಲ್ಲದೇ ಸರಕಾರಿ ಭೂಮಿ ಬಂಡವಾಳಶಾಹಿಗಳ ಪಾಲಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಇದೇ ಪರಿಸ್ಥಿತಿ ಮುಂದುವರೆದಲ್ಲಿಸರಕಾರಿ ಯೋಜನೆಗಳಿಗೆ ಭೂಮಿ ಇಲ್ಲದಂತಾಗುತ್ತದೆ. ಆದ್ದರಿಂದ ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಎಂದು ತಹಸೀಲ್ದಾರಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿಸಕ್ರಮೀಕರಣ ಸಮಿತಿಗೆ ಆಯ್ಕೆಯಾದ ಶಿಡೆನೂರ ಜಿಪಂ ವ್ಯಾಪ್ತಿಗೆ ಕೊಲ್ಲಾಪುರ ಗ್ರಾಮದ ಸಿದ್ದಯ್ಯ ಪಾಟೀಲ, ಕಾಗಿನೆಲೆ ಜಿಪಂ ವ್ಯಾಪ್ತಿಗೆ ಘಾಳಪೂಜಿ ಗ್ರಾಮದ ಸುರೇಶ ಕಳ್ಳಿಮನಿ, ಮೋಟೆಬೆನ್ನೂರ ಜಿಪಂ ವ್ಯಾಪ್ತಿಗೆ ಬುಡಪನಹಳ್ಳಿ ಗ್ರಾಮದ ಪುಟ್ಟವ್ವ ಸುಂಕಾಪುರ ಅವರನ್ನು ತಾಲೂಕಾಡಳಿತ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿಜಿ.ಎನ್‌.ಕಟ್ಟಿಮನಿ, ಆರ್‌.ಜಿ.ಬಂಕಾಪುರ, ಬಸವರಾಜ ಕುಸಗೂರ ಶಶಿ ಬಳ್ಳಾರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ