ಕುಮಾರಪಟ್ಟಣ : ರಾಣೇಬೆನ್ನೂರ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಚಿರತೆಯೊಂದು ನಾಯಿಯ ಮೇಲೆ ದಾಳಿ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇವು ಚಿರತೆಯ ಹೆಜ್ಜೆ ಗುರುತು ಎಂದು ಖಚಿತಪಡಿಸಿದ್ದಾರೆ. ಕೃಷ್ಣಾಪುರದ ಸುತ್ತಮುತ್ತ ಕಬ್ಬಿನ ಹೊಲಗಳು ಹೆಚ್ಚಾಗಿದ್ದು ಅದರಲ್ಲಿ ಚಿರತೆ ಅಡಗಿರುವ ಆತಂಕ ಮನೆಮಾಡಿದೆ.
ರಾತ್ರಿ ಸಮಯದಲ್ಲಿ ಮತ್ತೊಮ್ಮೆ ಬಂದು ಜನ ಜಾನುವಾರುಗಳಿಗೆ ಜೀವ ಹಾನಿ ಸಂಭವಿಸುವ ಮುನ್ನ ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಮುದೇನೂರ ಗ್ರಾಪಂ ಪಿಡಿಒಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮಸ್ಥರಾದ ನಾಗನಗೌಡ ಪಾಟೀಲ, ಹೇಮನಗೌಡ ಪಾಟೀಲ, ರವೀಂದ್ರಗೌಡ ಪಾಟೀಲ, ಆಂಜನೇಯ ತಳವಾರ, ಆಂಜನೇಯ ತಳವಾರ, ಕೆಂಚಪ್ಪ ಬಣಕಾರ, ಮಂಜುನಾಥ ಬಣಕಾರ, ಎನ್ ಆರ್ ಪಾಟೀಲ, ಬಸಮ್ಮ ಬಣಕಾರ, ಚನಬಸಮ್ಮ ಕೋಲಕುಂಟಿ, ರಾಜೀವ, ಬಣಕಾರ, ಹರಿಹರಗೌಡ ಪಾಟೀಲ, ಸುರೇಶ ತಳವಾರ ಇದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇವು ಚಿರತೆಯ ಹೆಜ್ಜೆ ಗುರುತು ಎಂದು ಖಚಿತಪಡಿಸಿದ್ದಾರೆ. ಕೃಷ್ಣಾಪುರದ ಸುತ್ತಮುತ್ತ ಕಬ್ಬಿನ ಹೊಲಗಳು ಹೆಚ್ಚಾಗಿದ್ದು ಅದರಲ್ಲಿ ಚಿರತೆ ಅಡಗಿರುವ ಆತಂಕ ಮನೆಮಾಡಿದೆ.
ರಾತ್ರಿ ಸಮಯದಲ್ಲಿ ಮತ್ತೊಮ್ಮೆ ಬಂದು ಜನ ಜಾನುವಾರುಗಳಿಗೆ ಜೀವ ಹಾನಿ ಸಂಭವಿಸುವ ಮುನ್ನ ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಮುದೇನೂರ ಗ್ರಾಪಂ ಪಿಡಿಒಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮಸ್ಥರಾದ ನಾಗನಗೌಡ ಪಾಟೀಲ, ಹೇಮನಗೌಡ ಪಾಟೀಲ, ರವೀಂದ್ರಗೌಡ ಪಾಟೀಲ, ಆಂಜನೇಯ ತಳವಾರ, ಆಂಜನೇಯ ತಳವಾರ, ಕೆಂಚಪ್ಪ ಬಣಕಾರ, ಮಂಜುನಾಥ ಬಣಕಾರ, ಎನ್ ಆರ್ ಪಾಟೀಲ, ಬಸಮ್ಮ ಬಣಕಾರ, ಚನಬಸಮ್ಮ ಕೋಲಕುಂಟಿ, ರಾಜೀವ, ಬಣಕಾರ, ಹರಿಹರಗೌಡ ಪಾಟೀಲ, ಸುರೇಶ ತಳವಾರ ಇದ್ದರು.