ಆ್ಯಪ್ನಗರ

ಕನ್ನಡ-ಕನ್ನಡಿಗ ಜತೆಯಲ್ಲೇ ಬೆಳೆಯಲಿ

ಅಕ್ಕಿಆಲೂರು: ನಮ್ಮ ಕನ್ನಡಕ್ಕೆ ಭವ್ಯ ಸಂಸ್ಕೃತಿ ಇದ್ದು, ಅದನ್ನು ಉಳಿಸಿ-ಬೆಳೆಸುವಲ್ಲಿನಾವೆಲ್ಲರೂ ಸಹ ಜಾಗೃತಿ, ಕಳಕಳಿಯಿಂದ ಕೆಲಸ ಮಾಡುವ ಸಂಕಲ್ಪಗೈಯ್ಯಬೇಕಿದೆ. ಕನ್ನಡ-ಕನ್ನಡಿಗ ಜೊತೆ ಜೊತೆಗೆ ಬೆಳೆಯಬೇಕಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್‌.ನಂದೀಶ್‌ ಹಂಚೆ ಹೇಳಿದರು.

Vijaya Karnataka 14 Dec 2019, 5:00 am
ಅಕ್ಕಿಆಲೂರು: ನಮ್ಮ ಕನ್ನಡಕ್ಕೆ ಭವ್ಯ ಸಂಸ್ಕೃತಿ ಇದ್ದು, ಅದನ್ನು ಉಳಿಸಿ-ಬೆಳೆಸುವಲ್ಲಿನಾವೆಲ್ಲರೂ ಸಹ ಜಾಗೃತಿ, ಕಳಕಳಿಯಿಂದ ಕೆಲಸ ಮಾಡುವ ಸಂಕಲ್ಪಗೈಯ್ಯಬೇಕಿದೆ. ಕನ್ನಡ-ಕನ್ನಡಿಗ ಜೊತೆ ಜೊತೆಗೆ ಬೆಳೆಯಬೇಕಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್‌.ನಂದೀಶ್‌ ಹಂಚೆ ಹೇಳಿದರು.
Vijaya Karnataka Web 13AKR1-A_23
ಅಕ್ಕಿಆಲೂರಿನಲ್ಲಿಕನ್ನಡ ನುಡಿ ಸಂಭ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್‌.ನಂದೀಶ್‌ ಹಂಚೆ ಉದ್ಘಾಟಿಸಿದರು.


ಇಲ್ಲಿನ ದುಂಡಿಬಸವೇಶ್ವರ ಜನಪದ ಕಲಾಸಂಘದ 29 ನೇ ವರ್ಷದ ಕನ್ನಡ ನುಡಿ ಸಂಭ್ರಮವನ್ನು ಗುರುವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ, ಧಾರ್ಮಿಕ, ರಾಜಕೀಯ ಅವ್ಯವಸ್ಥೆಯ ಮಧ್ಯೆ ಜೀವನ ಸಾಗಿಸುತ್ತಿರುವ ಮಾನವ ಜನಾಂಗದ ಓಟ ಸಾಗಿರುವುದೆತ್ತ ಎಂಬ ಭಯ ನಮ್ಮನ್ನು ಕಾಡುತ್ತಿದ್ದು, ಸದಭಿರುಚಿ, ಸಭ್ಯತೆಗಳಿಲ್ಲದ ಚಿಂತಾಜನಕ ಸ್ಥಿತಿಯಲ್ಲಿದೇಶ ಮುಳುಗಿದೆ. ಒಳ್ಳೆಯದನ್ನು ನೋಡುವ, ಕೇಳುವ ಅನುಭವಿಸುವ ಸದಭಿರುಚಿ ಇಲ್ಲದಾಗಿದೆ ಎಂದರು.

ರಾಜಧಾನಿ ಬೆಂಗಳೂರಿನಲ್ಲಿಕನ್ನಡಕ್ಕೆ ಗೌರವ, ಗಾಂಭೀರ್ಯ ಇಲ್ಲದಾಗಿದ್ದು, ಕನ್ನಡದ ಸ್ಥಿತಿ ಚಿಂತಾಜನಕವಾಗಿದೆ. ಇಂಗ್ಲಿಷ ಶಾಲೆ ವಿಜೃಂಭಿಸುತ್ತಿದ್ದು, ಇಂಗ್ಲಿಷಿನ ಅವಸರದಲ್ಲಿಕನ್ನಡ ಕಾಣೆಯಾಗುತ್ತಿದೆ. ಒಗ್ಗಟ್ಟಿಲ್ಲದೆ ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ ಕಳೆದುಕೊಳ್ಳುತ್ತಿದ್ದೇವೆ. ಇಂಥ ಸಂದಿಗ್ಧ ಸಮಯದಲ್ಲಿಯೂ ನೋವು ನುಂಗಿಕೊಂಡು ಕೃತಕ ನಗೆ ತೋಡಿಕೊಳ್ಳುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಷಣ್ಮುಖ ಹೊಂಬಳಿ ಅವರ ಹೊಂಬಾಳೆ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಇಡೀ ಪ್ರಪಂಚ ಒಂದಾಗಿ ಕಾಣುವ, ಅರಿತು-ಬೆರೆತು ಸಾಗುವ ಬದುಕು ಕಲಿಸಿಕೊಟ್ಟ ಕನ್ನಡಕ್ಕೆ ಪರದೇಶಿ ಭಾಷೆಗಳಿಂದ ಕುತ್ತು ಎದುರಾಗುತ್ತಿರುವುದು ನಮ್ಮ ನಿರ್ಲಕ್ಷತ್ರ್ಯತನದ ಕಾರಣದಿಂದಲೇ ಎನ್ನುವುದನ್ನು ಅರಿಯಬೇಕಿದೆ ಎಂದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ನಮಗೀಗ ಇಂಗ್ಲಿಷ್‌ ಹುಚ್ಚು ಹಿಡಿದಿದೆ. ಈ ಹುಚ್ಚು ಕನ್ನಡ ಶಾಲೆ ಮುಚ್ಚುವ ಸ್ಥಿತಿಗೆ ತಂದಿಟ್ಟಿದೆ. ಸಾಮರಸ್ಯದ ಬದುಕು ಕಟ್ಟಿಕೊಡುವ ಮಹೋನ್ನತ ಆಶಯ ನಮ್ಮ ಸಾಹಿತ್ಯದಲ್ಲಿಹರಳುಗಟ್ಟಿದೆ. ವಚನ, ದಾಸ ಸಾಹಿತ್ಯದಂಥ ವಿಶ್ವಮಾನ್ಯ ಸಾಹಿತ್ಯ ಪ್ರಪಂಚದ ಯಾವುದೇ ಭಾಷೆಯಲ್ಲಿರಚನೆಯಾಗಿಲ್ಲಎಂದರು.

ವಿರಕ್ತಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ, ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಸಮ್ಮುಖ, ಕಲಾಸಂಘದ ಅಧ್ಯಕ್ಷ ಬಸವರಾಜ್‌ ಕೋರಿ ಅಧ್ಯಕ್ಷತೆ ವಹಿಸಿದ್ದರು. ಕಿರುತೆರೆ ನಟಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಅನು ಸಿರಿಮನೆ, ಎಚ್‌ಟಿಇಎಸ್‌ ಅಧ್ಯಕ್ಷ ಎಸ್‌.ಎಂ.ಸಿಂಧೂರ, ತಹಸೀಲ್ದಾರ್‌ ಎಂ.ಗಂಗಪ್ಪ, ಜಿಪಂ ಸದಸ್ಯರಾದ ಟಾಕನಗೌಡ ಪಾಟೀಲ, ಮಾಲತೇಶ ಸೊಪ್ಪಿನ, ನಾಗರಾಜ್‌ ಪಾವಲಿ, ಶಿವಕುಮಾರ ಸಂಗೂರ, ಶಿವಶಂಕರ ದೇಶಮುಖ, ರಾಜಣ್ಣ ಅಂಕಸಖಾನಿ, ಪ್ರದೀಪ ಶೇಷಗಿರಿ, ಸರೋಜಾ ಪಾಟೀಲ, ಷಣ್ಮುಖ ಹೊಂಬಳಿ ಇದ್ದರು. ನಾಗರಾಜ್‌ ಮತ್ತು ಮಧುಮತಿ ಸಿಂಗಾಪೂರ ಸ್ವಾಗತಿಸಿದರು. ಷಣ್ಮುಖಪ್ಪ ಮುಚ್ಚಂಡಿ ಆಶಯ ನುಡಿ ನುಡಿದರು. ನಾಗರಾಜ್‌ ನಡುವಿನಮಠ, ನಿವೇದಿತಾ ಮಿರ್ಜಿ ನಿರೂಪಿಸಿದರು. ಡಾ.ಸಹನಾ ಮುತ್ತಿನಕಂತಿಮಠ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ