ಆ್ಯಪ್ನಗರ

ನಾಡು, ನುಡಿ ಸಾಹಿತ್ಯಸಂಸ್ಕೃತಿ ಫಸರಿಸಲಿ

ಹಾವೇರಿ: ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಮತ್ತು ದಾರ್ಶನಿಕರ ತತ್ವಾದರ್ಶಗಳನ್ನು ಇಂದಿನ ಯುವಕರಿಗೆ ಮುಟ್ಟಿಸಬೇಕಿದೆ. ಈ ನಿಟ್ಟಿನಲ್ಲಿ12ನೇ ಜಿಲ್ಲಾಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹೇಳಿದರು.

Vijaya Karnataka 28 Jan 2020, 5:00 am
ಹಾವೇರಿ: ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಮತ್ತು ದಾರ್ಶನಿಕರ ತತ್ವಾದರ್ಶಗಳನ್ನು ಇಂದಿನ ಯುವಕರಿಗೆ ಮುಟ್ಟಿಸಬೇಕಿದೆ. ಈ ನಿಟ್ಟಿನಲ್ಲಿ12ನೇ ಜಿಲ್ಲಾಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹೇಳಿದರು.
Vijaya Karnataka Web let nadu nadi literary culture flourish
ನಾಡು, ನುಡಿ ಸಾಹಿತ್ಯಸಂಸ್ಕೃತಿ ಫಸರಿಸಲಿ


ನಗರದ ರಜನಿ ಸಭಾಂಗಣದಲ್ಲಿಸೋಮವಾರ ಬೆಳಗ್ಗೆ ನಡೆದ 12ನೇ ಜಿಲ್ಲಾಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ತ್ರಿಪದಿ ಕವಿ ಸರ್ವಜ್ಞ , ದಾಸಶ್ರೇಷ್ಠ ಕನಕದಾಸರು, ಶಿಶುನಾಳ ಶರೀಫರು ತಮ್ಮ ಅಮೂಲ್ಯ ಸಾಹಿತ್ಯದ ಮೂಲಕ ನಾಡನ್ನು ಬೆಳಗಿದ್ದಾರೆ. ಅವರ ಪರಂಪರೆಯನ್ನು ಅನೇಕ ಸಾಹಿತಿಗಳು ಮುಂದುವರೆಸಿದ್ದಾರೆ ಎಂದರು.

ಹಾವೇರಿಯಲ್ಲಿಜರುಗುತ್ತಿರುವ ಸಾಹಿತ್ಯ ಸಮ್ಮೇಳನ ವಿಶಿಷ್ಟವಾಗಿದೆ. ಜಿಲ್ಲೆಯ ಸಾಹಿತ್ಯಿಕ ಪರಂಪರೆ ಶ್ರೀಮಂತವಾಗಿದೆ. ಈ ಶ್ರೀಮಂತಿಕೆಯನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿಸಮ್ಮೇಳನ ಅರ್ಥಪೂರ್ಣವಾಗಿ ಜರುಗಲಿ. ಕನ್ನಡಿಗರಲ್ಲಿಕನ್ನಡ ಭಾಷೆಯ ಝೇಂಕಾರ ಅನುರಣಿಸಲಿ ಎಂದು ಆಶಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಾವೇರಿ ಜಿಲ್ಲೆಯು ಸಮೃದ್ಧ ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಇಂತಹ ಪರಂಪರೆಯನ್ನು ಮುಂದಿನ ಸಮುದಾಯಕ್ಕೆ ಪರಿಚಯಿಸಲು ಸಾಹಿತ್ಯ ಸಮ್ಮೇಳನವು ಸಹಾಯಕವಾಗುತ್ತಿದೆ. ಅರ್ಥಪೂರ್ಣ ಕಾರ್ಯಕ್ರಮಗಳನ್ನು ಪರಿಷತ್ತು ಹಮ್ಮಿಕೊಂಡಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾಡು-ನುಡಿಯ ಬಗ್ಗೆ ಜನರಲ್ಲಿಜಾಗೃತಿ ಮೂಡಿಸುವ ನಿಟ್ಟಿನಲ್ಲಿಕಸಾಪ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಜಿಲ್ಲೆಯಲ್ಲಿನಡೆಯುತ್ತಿರುವ 12ನೇ ಸಾಹಿತ್ಯ ಸಮ್ಮೇಳನ ಮುಂದುವರಿದ ಭಾಗವಾಗಿದ್ದು, ಸಾಹಿತ್ಯಿಕ ಗೋಷ್ಠಿಗಳಲ್ಲಿಈ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತವೆ ಎಂದು ಹೇಳಿದರು.

ಜಿಪಂ ಸಿಇಒ ರಮೇಶ ದೇಸಾಯಿ, ಸಾಹಿತಿ ಸತೀಶ ಕುಲಕರ್ಣಿ, ಕಸಾಪ ಮುಖಂಡರಾದ ಎಸ್‌.ಎಸ್‌. ಹಿರೇಮಠ, ಗಿರೀಶ ಯತ್ತಿನಹಳ್ಳಿ, ಎಸ್‌.ಎನ್‌.ಬಡಿಗೇರ, ಜಿ.ಎನ್‌.ಹೂಗಾರ, ಎಸ್‌.ಎನ್‌.ದೊಡ್ಡಗೌಡರ, ಬಿ.ಸಿ.ಶಿಡೇನೂರ, ದ್ರಾಕ್ಷಾಯಣಿ ಗಾಣಿಗೇರ, ಶಂಕರ ಸುತಾರ, ಎಸ್‌.ಎನ್‌.ಕಾಳೆ, ಮಾಲತೇಶ ಅಂಗೂರ, ಬಿ.ಬಿ.ಬೆಳಗಾವಿ, ಮಾಹಾಂತಪ್ಪ ಹಲಗಣ್ಣನವರ, ರೇಣುಕಾ ಗುಡಿಮನಿ, ಅಕ್ಕಮಾಹದೇವಿ ಹಾನಗಲ್ಲ, ಸುರೇಖಾ ನೇರಳೆಕರ ಸೇರಿದಂತೆ ಉಪಸ್ಥಿತರಿದ್ದರು. ಶಿವಬಸವ ಮರಳಿಹಳ್ಳಿ ಸ್ವಾಗತಿಸಿದರು. ಬಿ.ಎಂ.ಮಠ ನಿರೂಪಿಸಿದರು. ಜಿ.ಎನ್‌.ಜಾವೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ