ಆ್ಯಪ್ನಗರ

ದೇಶ ಪೂಜಿಸುವ ಪ್ರವೃತ್ತಿ ಬೆಳೆಯಲಿ: ಬೊಮ್ಮಾಯಿ

ರಾಣೇಬೆನ್ನೂರ: ದೇವರನ್ನು ಪೂಜಿಸುವ ನಾವುಗಳು ದೇಶವನ್ನೂ ಪೂಜಿಸುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Vijaya Karnataka 25 Feb 2020, 5:00 am
ರಾಣೇಬೆನ್ನೂರ: ದೇವರನ್ನು ಪೂಜಿಸುವ ನಾವುಗಳು ದೇಶವನ್ನೂ ಪೂಜಿಸುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web 24RNR6_23
ರಾಣೇಬೆನ್ನೂರಿನಲ್ಲಿಶಿವಾಜಿ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಶಿವಾಜಿ ಮಹಾರಾಜರ ಮೂರ್ತಿಯ ಮೆರವಣಿಗೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.


ಇಲ್ಲಿನ ಸಿದ್ಧೇಶ್ವರ ದೇವಸ್ಥಾನದ ಬಳಿ ಸೋಮವಾರ ತಾಲೂಕು ಕ್ಷತ್ರೀಯ ಸಮಾಜದ ವತಿಯಿಂದ ಶಿವಾಜಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಶಿವಾಜಿ ಮಹಾರಾಜರ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿಶಿವಾಜಿಯಂತಹ ಶೌರ್ಯ, ದೇಶಪ್ರೇಮ, ರಾಜನೀತಿ, ಧರ್ಮ ನೀತಿ, ನ್ಯಾಯ ನೀತಿಯಂತಹ ಆದರ್ಶ ತತ್ವಗಳನ್ನು ರೂಢಿಸಿಕೊಂಡು ಸಾಗುವ ಮನೋಭಾವನೆ ಬೆಳೆಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.

ಸಿದ್ಧೇಶ್ವರ ದೇವಸ್ಥಾನದ ಬಳಿಯಿಂದ ಹೊರಟ ಮೆರವಣಿಗೆಯು ಕುರುಬಗೇರಿ ಕ್ರಾಸ್‌, ದುರ್ಗಾ ಸರ್ಕಲ್‌, ಎಂ.ಜಿ.ರಸ್ತೆ, ಪೊಸ್ಟ್‌ ಸರ್ಕಲ್‌, ಸಂಗಮ ಸರ್ಕಲ್‌, ಸುಭಾಸಚೌಕ ಮಾರ್ಗವಾಗಿ ದೊಡ್ಡಪೇಟೆಯ ತುಕ್ಕಾಭವಾನಿ ದೇವಸ್ಥಾನಕ್ಕೆ ಬಂದು ಸೇರಿತು.

ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ ಪೂಜಾರ, ಮಂಜುನಾಥ ಓಲೇಕಾರ, ಸಂತೋಷಕುಮಾರ ಪಾಟೀಲ, ಚೋಳಪ್ಪ ಕಸವಾಳ, ತಹಶೀಲ್ದಾರ ಬಸವರಾಜ ಕೋಟೂರ, ಜಯದೇವಪ್ಪ ಮಾಗನೂರ, ಸಮಾಜದ ತಾಲೂಕ ಅಧ್ಯಕ್ಷ ಪವಿತ್ರಕುಮಾರ ನಾಗೇನಹಳ್ಳಿ, ಯಶವಂತರಾವ್‌ ಜಾಧವ್‌. ಶಿವಮೂರ್ತಿ ದಿಲ್ಲಿವಾಲಾ, ಸತ್ಯನಾರಾಯಣ ಧಾರವಾಡಕರ, ಅನಿಲ ಶಿಂಧೆ, ಉದಯ ಗಾವಡೆ, ಶಿವಾಜಿ ಮಾಕನೂರ, ಮಾರುತಿರಾವ್‌ ಜಾಧವ, ಶಿವಾನಂದ ಆರೇರ, ರಾಘವೇಂದ್ರ ಚವ್ಹಾಣ, ಪರಶುರಾಮ ಕಾಳೇರ, ಸುಭಾಸ್‌ ಸೂರ್ಯವಂಶಿ, ಕೃಷ್ಣಕುಮಾರ ಮಾನೆ, ಬಸವರಾಜ ರಾಜನಹಳ್ಳಿ, ನಾಗವೇಣಿ ಪವಾರ, ಮಮತಾ ಜಾಧವ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ