ಆ್ಯಪ್ನಗರ

ಕ್ಷತ್ರಿಯ ಒಳ ಪಂಗಡ ಒಂದಾಗಲಿ

ಹಾನಗಲ್ಲ: ಕ್ಷತ್ರಿಯ ಒಳಪಂಗಡಗಳು ಬೇಧ ಮರೆತು ಒಂದುಗೂಡಬೇಕು. ಕೀಳರಿಮೆಯಿಂದ ಹೊರ ಬಂದು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಯುವ ಘಟಕದ ಅಧ್ಯಕ್ಷ ಕೃಷ್ಣಾ ದಲಬಂಜನ ಹೇಳಿದರು.

Vijaya Karnataka 28 Dec 2019, 5:00 am
ಹಾನಗಲ್ಲ: ಕ್ಷತ್ರಿಯ ಒಳಪಂಗಡಗಳು ಬೇಧ ಮರೆತು ಒಂದುಗೂಡಬೇಕು. ಕೀಳರಿಮೆಯಿಂದ ಹೊರ ಬಂದು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಯುವ ಘಟಕದ ಅಧ್ಯಕ್ಷ ಕೃಷ್ಣಾ ದಲಬಂಜನ ಹೇಳಿದರು.
Vijaya Karnataka Web let the kshatriya be the inner sect
ಕ್ಷತ್ರಿಯ ಒಳ ಪಂಗಡ ಒಂದಾಗಲಿ


ಇಲ್ಲಿನ ಪ್ರವಾಸಿ ಮಂದಿರದಲ್ಲಿಗುರುವಾರ ಸಂಜೆ ನಡೆದ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಸಂಘಟನೆ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡಿದರು.

ರಾಷ್ಟ್ರ ರಾಜಕಾರಣದಲ್ಲಿಯೇ ನಿರ್ಣಾಯಕರಾಗಿರುವ ಕ್ಷತ್ರೀಯ ಸಮುದಾಯ ಒಳ ಪಂಗಡಗಳ ಒಗ್ಗೂಡಿಕೆ ಸಾಧ್ಯವಾಗದೇ ಅಹಂಕಾರದಿಂದ ಕರ್ನಾಟಕ ರಾಜ್ಯ ರಾಜಕಾರಣದಲ್ಲೂಅವಕಾಶ ವಂಚಿತರಾಗುತ್ತಿದ್ದೇವೆ ಎಂದರು.

ಈಗ ಕ್ಷತ್ರೀಯ ಯುಗಾರಂಭಕ್ಕೆ ಮುನ್ನುಡಿ ಬರೆಯಲಾಗಿದೆ. ಸಮಯ ಬಂದಾಗ ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಿ. 42 ಉಪ ಪಂಗಡಗಳಲ್ಲಿರುವ ಕ್ಷತ್ರಿಯರು ರಾಜ್ಯದಲ್ಲಿ1.26 ಕೋಟಿ ಇದ್ದೇವೆ. ಸಂಘಟನೆಯಿಂದ ಮಾತ್ರ ಶಕ್ತಿ ಅರಿವಾಗುತ್ತದೆ. ಉಪಪಂಗಡಗಳ ಭೇದ ಹೊರತುಪಡಿಸಿ ಒಂದಾದರೆ ಎಲ್ಲಅಧಿಕಾರವನ್ನು ನಾವು ಅನುಭವಿಸಲು ಸಾಧ್ಯ. ರಾಜಕೀಯವಾಗಿ ನಾವು ತುಳಿತಕ್ಕೆ ಒಳಗಾಗಿದ್ದೇವೆ. ನಮ್ಮ ಮನೆ ಬಾಗಿಲಿಗೆ ರಾಜಕಾರಣಿಗಳು ಅಲೆದಾಡುವಂತಹ ವಾತಾವರಣ ಸನ್ನಿಹಿತವಾಗಲಿದೆ. ಕ್ಷತ್ರಿಯರೇ ಈಗಲಾದರೂ ಎಚ್ಚರಗೊಳ್ಳಿ ಎಂದರು.

ಕ್ಷತ್ರಿಯ ಸಮುದಾಯದ ಪ್ರಮುಖ ಎಂ.ಬಿ.ಕಲಾಲ ಮಾತನಾಡಿ, ರಾಜಕೀಯ ಹೊರತಾಗಿ ಸಂಘಟನೆ ಮಾಡಿದರೆ ಅದು ಗಟ್ಟಿಯಾಗಬಲ್ಲದು. ರಾಜಕೀಯ ಲಾಭಕ್ಕಾಗಿ ಸಂಘಟನೆ ಎಂದಾದರೆ ಅದು ಗಟ್ಟಿಯಾಗಲು ಸಾಧ್ಯವಿಲ್ಲ. ಈಗ ಯುವಕರಿಗೆ ಅವಕಾಶ ನೀಡಿ ಸಂಘಟನೆಗೆ ಶಕ್ತಿ ತುಂಬಬೇಕು ಎಂದರು.

ಕ್ಷತ್ರಿಯ ಮರಾಠ ಸಮಾಜದ ಪ್ರಮುಖ ಯಲ್ಲಪ್ಪ ಕಿತ್ತೂರ ಮಾತನಾಡಿ, ಕ್ಷತ್ರಿಯರು ನಾಗರೀಕತೆಯ ಹೆಸರನಲ್ಲಿನಮ್ಮ ಸಂಸ್ಕ್ರತಿ ಪರಂಪರೆಯನ್ನು ಮರೆಯಬಾರದು. ಮಕ್ಕಳಿಗೆ ಹೆಸರಿಡುವಾಗಲೂ ನಮ್ಮ ಮಹಾಪುರುಷರು, ಪರಂಪರೆಯನ್ನು ನೆನಪಿಸುವ ಹೆಸರುಗಳನ್ನಿಡಬೇಕು. ನಾವೇ ನಮ್ಮ ಸಂಸ್ಕೃತಿಯನ್ನು ತಿರಸ್ಕರಿಸಿದರೆ ಉಳಿಸುವವರಾರು ಎಂದು ಪ್ರಶ್ನಿಸಿದ ಅವರು, ಒಳ ಪಂಗಡ ನಮ್ಮ ಮನೆಯ ಒಳಗಿರಲಿ, ಸಂಘಟನೆಯ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಕ್ಷತ್ರಿಯರಾಗೋಣ ಎಂದರು.

ರಾಜ್ಯ ಪ್ರಮುಖ ನಾರಾಯಣ ಚಿಕ್ಕೋಡಿ ಮಾತನಾಡಿ, ಹಾನಗಲ್ಲತಾಲೂಕಿನಲ್ಲಿಕ್ಷತ್ರಿಯರೊಬ್ಬರನ್ನು ಶಾಸಕರನ್ನಾಗಿಸುವ ಶಕ್ತಿ ಈ ಸಮಾಜಕ್ಕಿದೆ. ಆದರೆ ಸಂಘಟನೆ ಒಗ್ಗಟ್ಟು ಇಲ್ಲದೆ ಅವಕಾಶ ವಂಚಿತರಾಗುತ್ತಿದ್ದೇವೆ. ಹೀಗಾಗಿಯೇ ರಾಜಕೀಯ ತುಳಿತಕ್ಕೆ ಒಳಗಾಗಿದ್ದೇವೆ. ನಾವು ಸಣ್ಣ ಸಮಾಜವಲ್ಲಎಂಬುದು ಎಲ್ಲರ ಅರಿವಿಗೆ ಇರಲಿ. ರಾಜಕೀಯ ಸ್ಥಾನ ಮಾನಕ್ಕಾಗಿ ಪಕ್ಷಾತೀತವಾಗಿ ಒಂದಾಗೋಣ ಎಂದರು.

ಜಿಲ್ಲಾಅಧ್ಯಕ್ಷ ನಾಗರಾಜ ಜೋರಾಪುರಿ, ಜಿಲ್ಲಾಯುವ ಘಟಕದ ಅಧ್ಯಕ್ಷ ಜಯರಾಮ ಮಾಳಾಪುರ, ಜಿಲ್ಲಾಸಂಚಾಲಕ ಅಶೋಕಸಿಂಗ ರಜಪೂತ, ಮುಖಂಡರಾದ ತಾಲೂಕಿನ ಕ್ಷತ್ರಿಯ ಒಕ್ಕೂಟದ ವಿವಿಧ ಪಂಗಡಗಳ ಪ್ರಮುಖರಾದ ರಾಜು ಗೌಳಿ, ನಿರಂಜನ್‌ಷಾ, ಎನ್‌.ಆರ್‌.ನವಲೆ, ವಿನೋದ ಅಚಲಕರ, ಕೃಷ್ಣಾ ಬಾಗಲೆ, ಗಿರಿರಾಜ ಕಲಾಲ, ಹರಿರಾಜ ಕಲಾಲ, ಸುಭಾಷ ಮೆಹರವಾಡೆ, ಗೋಪಾಲಸಾ ಮೆಹರವಾಡೆ, ಮಹಾದೇವಸಾ ಮೆಹರವಾಡೆ, ಬಾಳಜ್ಜ ಗುರ್ಲಹೊಸೂರ, ಅಂಬಾಜಪ್ಪ ಕಾಟೇಕರ, ಮನೋಜ ಕಲಾಲ, ರವಿರಾಜ ಕಲಾಲ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ