ಆ್ಯಪ್ನಗರ

ಕ್ರೀಡೆಯಿಂದ ಬದುಕಿನ ಜಂಜಾಟ ದೂರ

ಹಾವೇರಿ: ಬದುಕಿನ ಜಂಜಾಟದಿಂದ ಹೊರ ಬರಲು ಕ್ರೀಡೆ ಸಹಕಾರಿಯಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ನಗರದ ಹೊಸಮನಿ ಸಿದ್ಧಪ್ಪ ಜಿಲ್ಲಾಕ್ರೀಡಾಂಗಣದಲ್ಲಿಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿಎರಡು ದಿನದ ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ

Vijaya Karnataka 18 Jan 2020, 5:00 am
ಹಾವೇರಿ: ಬದುಕಿನ ಜಂಜಾಟದಿಂದ ಹೊರ ಬರಲು ಕ್ರೀಡೆ ಸಹಕಾರಿಯಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ನಗರದ ಹೊಸಮನಿ ಸಿದ್ಧಪ್ಪ ಜಿಲ್ಲಾಕ್ರೀಡಾಂಗಣದಲ್ಲಿಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿಎರಡು ದಿನದ ಜಿಲ್ಲಾಮಟ್ಟದ ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
Vijaya Karnataka Web life is a long way from the sport
ಕ್ರೀಡೆಯಿಂದ ಬದುಕಿನ ಜಂಜಾಟ ದೂರ


ನಿತ್ಯ ಕೆಲಸ ನಿರ್ವಹಿಸುವವರಿಗೆ ಒತ್ತಡ ಇರುತ್ತದೆ. ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುವುದರಿಂದ ನಿತ್ಯದ ಜಂಜಾಟದಿಂದ ಹೊರ ಬರಬಹುದು ಹಾಗೂ ಸದೃಢವಾಗಿರಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾತನಾಡಿ, ದೈನಂದಿನ ಕಚೇರಿ ಕೆಲಸ ಹಾಗೂ ಜೀವನದ ಒತ್ತಡವನ್ನು ಮರೆತು ಎಲ್ಲರೂ ಸಂತಸದಿಂದ ಸ್ಪರ್ಧೆಗಳಲ್ಲಿಭಾಗವಹಿಸಬೇಕು ಎಂದು ಹೇಳಿದರು. ಎಸ್ಪಿ ಕೆ.ಜಿ.ದೇವರಾಜು, ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿದರು. ಶಾಸಕ ನೆಹರು ಓಲೇಕಾರ ಅವರು ಪಾರಿವಾಳಗಳನ್ನು ಹಾರಿಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೆರಗು ತಂದರು.

ಎರಡು ದಿನ ಜರುಗುವ ಆಟಗಳು:
ವಾಲಿಬಾಲ್‌, ಕಬಡ್ಡಿ, ಶೆಟ್‌್ಲಬ್ಯಾಡ್ಮಿಂಟನ್‌, ಬಾಲ್‌ ಬ್ಯಾಡ್ಮಿಂಟನ್‌, ಕೇರಂ, ಚೇಸ್‌, ಟೆನ್ನಿಕಾಯ್‌್ಟ, ಥ್ರೋಬಾಳ್‌, ಅಥ್ಲೇಟಿಕ್ಸ್‌, ಕ್ರಿಕೆಟ್‌, ಬಾಸ್ಕೇಟ್‌ಬಾಲ್‌, ಟೇಬಲ್‌ ಟೆನ್ನಿಸ್‌, ಟೆನ್ನಿಸ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದಲ್ಲಿನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಪ್ರಕಾಶ್‌, ಎಚ್‌.ಎ. ಜಮಖಾನೆ, ಅಮೃತಗೌಡ ಪಾಟೀಲ, ಎಂ.ಎಸ್‌. ಜಂಗರಡ್ಡೇರ, ಎಂ.ಡಿ. ದ್ಯಾಮಣ್ಣನವರ, ಎಮ್‌.ಎನ್‌. ಕಂಬಳಿ, ಎನ್‌.ಎಂ. ಪಾಟೀಲ್‌, ಅರುಣ ಹುಡೇದಗೌಡ್ರು, ಸಿ.ಎಸ್‌.ಲಕ್ಕನಗೌಡ್ರ, ಸಿ.ಬಿ. ಹಿರೇಮಠ, ಶಿವಲೀಲಾ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ